“ಕುದುರೆಮುಖ – ಕಳಸ ರಸ್ತೆಯನ್ನು ದುರಸ್ಥಿಗೊಳಿಸಲು ಸಮಾನ ಮನಸ್ಕ ನಾಗರೀಕ ವೇದಿಕೆ ಕಳಸ ವತಿಯಿಂದ ರಸ್ತೆ ತಡೆ.”
1 min read
ಕೊಟ್ಟಿಗೆಹಾರ – ಹೊರನಾಡು,ಕಳಸ – ಕುದುರೆಮುಖ ರಾಜ್ಯ ಹೆದ್ದಾರಿಯನ್ನು ದುರಸ್ಥಿ ಪಡಿಸಬೇಕೆಂದು ಸಮಾನ ಮನಸ್ಕ ನಾಗರೀಕ ವೇದಿಕೆ ಕಳಸದ ವತಿಯಿಂದ ರಸ್ತೆ ತಡೆ ಮಾಡಿ ಒತ್ತಾಯಿಸಿದ್ದಾರೆ ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಚಿತ್ರ ನಿರ್ಮಾಪಕ ರವಿ ರೈ ಮಾತನಾಡಿ ಕಳಸ ಕುದುರೆಮುಖ ರಸ್ತೆ ದುರಸ್ಥಿಗೊಳ್ಳದೆ ಇರಲು ಕಾಂಟ್ರಾಕ್ಟ್ ದಾರರೇ ನೇರ ಕಾರಣವಾಗಿದ್ದಾರೆ ಇಂತವರನ್ನು ಕಪ್ಪು ಪಟ್ಟಿಗೆ ಸೇರಿಸಿ ಶಿಕ್ಷಿಸಿದರೆ ಸರಿ ಆಗುತ್ತದೆ ಆದರೆ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ ಇಂತಹ ಅಧಿಕಾರಿಗಳು ಊಟದ ಕೋಣೆಯಲ್ಲಿ ಊಟ ಮಾಡುವ ಬದಲು ಶೌಚಾಲಯದಲ್ಲಿ ಊಟ ಮಾಡಲು ಹೋಗಿ ಇಂದು ಜನರು ಇಂತಹ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ಮುಖಂಡ ರಮೇಶ್ ಕೆಳಗೂರು ಈಗಾಗಲೇ ಕಳಸ ತಾಲ್ಲೂಕು ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಒದಗಿಸಿದೆ ಆದರೆ ಇಲ್ಲಿಯ ಅಧಿಕಾರಿಗಳ ಭ್ರಷ್ಟಾಚಾರದಿಂದ ಆ ಹಣ ದುರುಪಯೋಗ ಮಾಡಲಾಗಿದೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ 100 ಕೋಟಿ ಅನುದಾನ ಸರ್ಕಾರ ಕಳಸ ತಾಲ್ಲೂಕಿನ ರಸ್ತೆ,ಸೇತುವೆ,ತಡೆಗೋಡೆ ನಿರ್ಮಾಣಕ್ಕೆ ಬಿಡುಗಡೆ ಮಾಡಿತ್ತು ಗಂಗಾಮೂಲ – ಕಳಸ ರಸ್ತೆ ಅಭಿವೃದ್ಧಿಗೆ 30 ಕೋಟಿ 78 ಲಕ್ಷ ಕೇವಲ ಒಂದೇ ರಸ್ತೆಗೆ ಬಿಡುಗಡೆ ಮಾಡಿದರು ಈ ರಸ್ತೆ ಅಭಿವೃದ್ದಿ ಪಡಿಸಲು ಸಾಧ್ಯವಾಗಿಲ್ಲ ಇಂದು ಆಡಳಿತ ಪಕ್ಷದ ಶಾಸಕರು,ಸರ್ಕಾರ ಎಲ್ಲವೂ ಒಂದೇ ಪಕ್ಷದ ನೇತೃತ್ವ ಇದ್ದರು ಕಳಸ ತಾಲ್ಲೂಕು ಅಭಿವೃದ್ದಿ ಗೊಳ್ಳದೆ ಭ್ರಷ್ಟಾಚಾರದಿಂದ ನಲುಗುವಂತಾಗಿದೆ ಇಲ್ಲಿಗೆ ಬಿಡುಗಡೆ ಹೊಂದಿರುವ ಕಾಮಗಾರಿಯಲ್ಲಿ ಕೋಟ್ಯಾಂತರ ಅವ್ಯವಹಾರ ನಡೆದರೂ ಶಾಸಕರು ಆಡಳಿತ ಪಕ್ಷದ ನಾಯಕರು ಮೌನಕ್ಕೆ ಶರಣಾಗಿದ್ದಾರೆ ಭಾರತ ಕಮ್ಯೂನಿಸ್ಟ್ ಪಕ್ಷ ಈಗಾಗಲೇ ವಿಚಾರಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರಿಗೆ ಇಲ್ಲಿಯ ರಸ್ತೆ ಕಾಮಗಾರಿಗೆ ಸಂಬಂಧಿಸಿದ 100 ಕೋಟಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಲಿಖಿತ ದೂರು ನೀಡಿದ್ದೇವೆ ಇಂತಹ ಭ್ರಷ್ಟಾಚಾರದಿಂದ ಪ್ರಗತಿ ಕುಂಠಿತವಾಗಿದೆ,ಆದರೆ ಕಾಂಗ್ರೆಸ್ ನಾಯಕರು ಕಮ್ಯೂನಿಸ್ಟರು ಸತ್ಯವನ್ನೂ ಮರೆಮಾಚುತ್ತಿದ್ದಾರೆ ಎಂದು ಆರೋಪಿಸುತ್ತಾರೆ ನಾವು ಸತ್ಯವನ್ನೂ ಬಯಲಿಗೆಳೆದು ಇವರ ಮುಖವಾಡ ತೋರಿಸುತ್ತಿದ್ದೇವೆ ಇಲ್ಲಿಯ ಆಸ್ಪತ್ರೆಗೆ ಬಿಡುಗಡೆಯಾಗುವ ಔಷಧಿ,ಕಂದಾಯ ಇಲಾಖೆ,ಅರಣ್ಯ ಇಲಾಖೆ,ಕೃಷಿ ಇಲಾಖೆಯ ಭ್ರಷ್ಟಾಚಾರ ಕಣ್ಣ ಮುಂದಿದ್ದರೂ ರಾಜೇಂದ್ರ ಹಿತ್ಲುಮಕ್ಕಿ,ಶ್ರೇಣಿಕ್ ರಂತಹ ನಾಯಕರಿಗೆ ಕಣ್ಣಿಗೆ ಯಾಕೆ ಕಾಣುತ್ತಿಲ್ಲ ಇವರ ಪಾಲು ಈ ಅವ್ಯವಹಾರದಲ್ಲಿ ಇದೆಯಾ ಎಂಬುದನ್ನು ಮೊದಲು ಜನತೆಯ ಮುಂದೆ ಸಾಬೀತು ಪಡಿಸಲಿ ನಾವು ಜನರ ಮುಂದೆ ವಾಸ್ತವ ತೆರೆದಿಡುತ್ತೇವೆ ಎಂದರು.
ಈ ಪ್ರತಿಭಟನೆಯಲ್ಲಿ ಗೋಪಾಲ್ ಶೆಟ್ಟಿ ,ಲಕ್ಷ್ಮಣ ಆಚಾರ್,ರಿಜ್ವಾನ್,ತೇಜಸ್,ಮಲ್ಲಿಕಾರ್ಜುನ,ಚೌಡಯ್ಯ, ಮಂಜುನಾಥ್,ಕಳಸ ಪಟ್ಟಣದ ವರ್ತಕರು,ಆಟೋ ಚಾಲಕರು ಮತ್ತು ಮಾಲೀಕರು,ಕಳಸದ ನಾಗರೀಕರು ಭಾಗವಹಿಸಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.