“ವಿಶ್ವಕರ್ಮ ಪರಿಷತ್ತಿನಿಂದ ಆರ್ಥಿಕ ಸಹಾಯ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೊಣೀಬೀಡು ಹೋಬಳಿಯ ವಿಶ್ವಕರ್ಮ ಪರಿಷತ್ತಿನ ವತಿಯಿಂದ ಕಿರಿಶಿಗರ ಚಂದ್ರಶೇಖರ್ ಆಚಾರ್ ಎಂಬುವವರ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು,ಅವರಿಗೆ ಧನ ಸಹಾಯವಾಗಿ ತುರ್ತು ಪರಿಹಾರ ನಿಧಿಯಿಂದ 5000 ರೂಪಾಯಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಚಿದಂಬರ,ಉಗ್ಗೇಹಳ್ಳಿ ಶಿವಕುಮಾರ್, ಕನ್ನೇಹಳ್ಳಿ ಮಂಜುನಾಥ್,ಧರ್ಮೇಂದ್ರ,ಗಣೇಶ್ ಅಚಾರ್,ಆಶಾ ಜಯಕುಮಾರ್,ಶರತ್,ಜಗದೀಶ್,ರಮೇಶ್,ರಕ್ಷಿತ್,ಪವನ್,ಕೃಷ್ಣಚಾರ್,ಚಂದ್ರಶೇಖರ್ ಅವರ ಪತ್ನಿ ರೂಪ,ಮಕ್ಕಳಾದ ಚೇತನ್,ಚಂದನ್ ಉಪಸ್ಥಿತರಿದ್ದರು.
ಕಳೆದ ಮಾರ್ಚ್ ತಿಂಗಳಿನಿಂದ ಶುರುವಾದ ವಿಶ್ವಕರ್ಮ ಪರಿಷತ್ ಈಗಾಗಲೇ ಹಲವು ಸಮಾಜಮುಖಿ ಕೆಲಸ ಮಾಡುತ್ತಿದ್ದು,ಹಲವು ಕುಟುಂಬಗಳಲ್ಲಿ ನಡೆದ ಶವಗಳ ಶವಸಂಸ್ಕಾರ ಮತ್ತು ಆನಾರೋಗ್ಯದಿಂದ ಬಳಲುವ 5 ಕುಟುಂಬಗಳಿಗೆ ಸಹಾಯ ಹಸ್ತ ನೀಡಿದೆ.
✍🏻ಬರಹ ಕೃಪೆ.✍🏻
ಆಶಾ ಜಯಕುಮಾರ್.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.