“ಪ್ರತಿ ಹಿಂದುಗಳಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ : ಎಂ.ಆರ್.ಜಗದೀಶ್ ಅಭಿಪ್ರಾಯ.”
1 min read
ಸನಾತನ ಧರ್ಮದ ಬಗ್ಗೆ ಜನಜಾಗೃತಿ ಮೂಡಿಸುವ ಬಗ್ಗೆ ಹಿಂದುಪರ ಸಂಘಟನೆ ವತಿಯಿಂದ ಪಟ್ಟಣದ ಹಿರೇ ದೇವಿರಮ್ಮ ದೇವಸ್ಥಾನದ ಎದುರು ಭಗವಾಧ್ವಜ ಹಾರಿಸುವ ಮೂಲಕ ಸಾಂಕೇತಿಕವಾಗಿ ಜನಜಾಗೃತಿ ಸಭೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್ ಮಾತನಾಡಿ,ಹಿಂದು ಧರ್ಮದ ಬಗ್ಗೆ ಹಿಂದುಗಳಿಗೆ ಕೀಳರಿಮೆ ಉಂಟಾಗಿದೆ.ಇದು ದೊಡ್ಡ ಅಪಾಯ.ಈಗ ನಮ್ಮವರ ಮೇಲೆಯೇ ಚಾಟಿ ಬೀಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದರು.
ಅವರು ದಿನಾಂಕ 24/11/2023ರ ಶುಕ್ರವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಮೂಡಿಗೆರೆ ಪಟ್ಟಣದಲ್ಲಿ ನಡೆದ ಸನಾತನ ಧರ್ಮದ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿ ಹಿಂದುಗಳಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೇ ಎಲ್ಲಾ ನಗರ,ಪಟ್ಟಣ್ಣ,ಹಳ್ಳಿಗಳಲ್ಲಿ ಹಿಂದುಗಳ ಮನೆ ಮೇಲೆ ಭಗವಾಧ್ವಜ ಹಾರಿಸುವಂತಹ ವಾತಾವರಣ ನಿರ್ಮಾಣ ಮಾಡಲು ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ ಮಾತನಾಡಿ,ಹಿಂದುಗಳನ್ನು ಹೀಯಾಳಿಸುವ ಮನಸ್ಥಿತಿಯ ಜನರು ಹೆಚ್ಚಾಗಿದ್ದಾರೆ. ಆದರೆ ಮೂಡಿಗೆರೆ ತಾಲ್ಲೂಕಿನಲ್ಲಿ ಹಿಂದು ಧರ್ಮ ಬಲವಾಗಿದೆ. ಅದನ್ನು ಮುರಿಯುವ ಶಕ್ತಿ ಯಾರಿಗೂ ಇಲ್ಲ. ಸನಾತನ ಧರ್ಮದ ಬಗ್ಗೆ ಅರಿವಿಲ್ಲದ ಜನರಿಗೆ ಜಾಗೃತಿ ಮೂಡಿಸಬೇಕಿದೆ. ಹಾಗಾಗಿ ಮುಖ್ಯವಾಗಿ ಯುವ ಜನಾಂಗ ಸನಾತನ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಜತೆಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು. ಆಗ ಮಾತ್ರ ಹಿಂದು ಧರ್ಮ ಬಲಿಷ್ಟವಾಗಲು ಸಾಧ್ಯವಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮೆರವಣಿಗೆ ಮೂಲಕ ಗಂಗನಮಕ್ಕಿಯಲ್ಲಿರುವ ಶ್ರೀ ಗಣಪತಿ, ಪಟ್ಟಣದ ವೇಣುಗೋಪಾಲ ಸ್ವಾಮಿ ಹಾಗೂ ಹಿರೇ ದೇವಿರಮ್ಮ ಬನ ಶ್ರೀ ಅಯ್ಯಪ್ಪ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಪೂಜೆ ನಡೆಸುವ ಮೂಲಕ ದೇವಿರಮ್ಮ ಬನದ ಮುಂದೆ ಭಗವಾಧ್ವಜ ಹಾರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಸಂಚಾಲಕ ಸಾಲುಮರ ಮಹೇಶ್,ಪ.ಪಂ. ಸದಸ್ಯ ಪಿ.ಜಿ.ಅನುಕುಮಾರ್(ಪುಟ್ಟಣ್ಣ), ಮುಖಂಡರಾದ ಭರತ್ ಕನ್ನಹಳ್ಳಿ,ನರೇಂದ್ರ,ವಿನೋಧ್ ಕಣಚೂರು,ಧನಿಕ್ ಕೋಡದಿಣ್ಣೆ,ಚಂದ್ರೇಶ್ ಮಗ್ಗಲಮಕ್ಕಿ,ಸಾಗರ್ ಹುಲ್ಲೇಮನೆ,ಆದರ್ಶ್ ತರುವೆ,ಉಮಾಶಂಕರ್,ಗಿರೀಶ್ ಹಳ್ಳಿಬೈಲ್ ಮತ್ತಿತರರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.