“ಸರ್ಫೇಸಿ ಕಾಯ್ದೆ ಮತ್ತು ದೌರ್ಜನ್ಯ ನೀಡುತ್ತಿರುವ ಬ್ಯಾಂಕ್ ಗಳ ವಿರುದ್ಧ ಬೆಳೆಗಾರರ ಪ್ರತಿಭಟನೆ.”
1 min read
ದಿನಾಂಕ 20/11/2023ರ ಸೋಮವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಮೇಗಲಪೇಟೆಯ ಬಳಿ ಇರುವ ಕೆನರಾ ಬ್ಯಾಂಕ್ ತಾಲ್ಲೂಕಿನ ರೈತರಿಗೆ ತೊಂದರೆ ಕೊಡುತ್ತಿದೆ. ಇದು ಸರ್ಫೇಸಿ ಕಾಯ್ದೆಯ ಕೊಡುಗೆಯಾಗಿದೆ ಇದರಿಂದ ಬೆಳೆಗಾರರ ಜಮೀನು ಮುಟ್ಟುಗೋಲು ಆಗುತ್ತಿದೆ ಆದ್ದರಿಂದ ಬೆಳೆಗಾರರು ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ, ಒಂದು ವೇಳೆ ಸೂಕ್ತ ಪರಿಹಾರ ಸಿಗದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಪ್ರತಿಭಟನೆಗೆ ನೇತೃತ್ವ ವಹಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಜಿ.ಎಫ್.ಮಾಜಿ ಅಧ್ಯಕ್ಷರಾದ ಬಿ.ಎಸ್.ಜಯರಾಂ ಮಾತನಾಡಿ,ಬೆಳೆಗಾರರಿಗೆ ತೊಂದರೆಗಳು ತಪ್ಪಿದ್ದಲ್ಲ,ಒಂದು ಕಡೆ ಕಾಡುಪ್ರಾಣಿಗಳ ಉಪಟಳ,ಇನ್ನೊಂದು ಕಡೆ ಕೈತುಂಬಾ ಫಸಲು ಸಿಗಲ್ಲ ಜೊತೆಗೆ ಸರ್ಫೇಸಿ ಕಾಯ್ದೆಯಿಂದಾಗಿ ಬ್ಯಾಂಕ್ ಗಳು ಬೆಳೆಗಾರರ ಜಮೀನು ಮುಟ್ಟುಗೋಲು ಮಾಡಿಕೊಳ್ಳುವಂತಹ ತೊಂದರೆ ಆರಂಭವಾಗಿದೆ.
ಇದರಿಂದಾಗಿ ರೈತರು ಎಚ್ಚೆತ್ತುಕೊಂಡು ಸೂಕ್ತ ಪರಿಹಾರ ಸಿಗುವವರೆಗೂ ಹೋರಾಟ ಮಾಡಲೇಬೇಕು ಎಂದರು.
ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಬೆಳೆಗಾರರು, ಮೂಡಿಗೆರೆ ತಾಲ್ಲೂಕಿನ ಹೋರಾಟಗಾರರು ಭಾಗವಹಿಸಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.