“ಎ.ಪಿ.ಜೆ.ಅಬ್ದುಲ್ ಕಲಾಂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ : ಮೂಡಿಗೆರೆಯ ಮೂವರು ಸಮಾಜ ಸೇವಕರಿಗೆ ಸನ್ಮಾನ.”
1 min read
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರವರ 92ನೇ ಜಯಂತೋತ್ಸವ ದಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಕನ್ನಡ ಸಾಹಿತ್ಯ ಪರಿಷತ್ತು ಅಕ್ಕಮಹಾದೇವಿ ಸಭಾಂಗಣ ಬೆಂಗಳೂರಿನಲ್ಲಿ ನಡೆಯಿತು.
ನಡೆದಾಡುವ ದೇವರ ಟ್ರಸ್ಟ್ ನಡೆಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಸೇವಾ ಕಾರ್ಯ ನಿಜಕ್ಕೂ ಇಡೀ ಕರ್ನಾಟಕವೇ ಮೆಚ್ಚುವಂತಹದ್ದು.
ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ಇಬ್ಬರು ಸಮಾಜ ಸೇವಕರನ್ನು ಗುರುತಿಸಲಾಗಿದೆ.
ಸಕ್ರಿಯ ಸಮಾಜ ಸೇವಾ ಸಂಘದ ಅಧ್ಯಕ್ಷರು ಫಿಶ್ ಮೋಣು ಹಾಗೂ ಗೌರವಾಧ್ಯಕ್ಷರಾದ ಅಬ್ದುಲ್ ರೆಹಮಾನ್ ಬಿಳಗುಳ ಹಾಗೂ ಕಾಫಿನಾಡು ಸಮಾಜ ಸೇವಕರಾದ ಹಸೈನಾರ್ ಬಿಳಗುಳ ಇವರುಗಳು ಅಪಘಾತದಲ್ಲಿ ಮೃತಪಟ್ಟವರನ್ನು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವುದು,ನಿರ್ಗತಿಕರನ್ನು ಆಶ್ರಮಗಳಿಗೆ ದಾಖಲಿಸುವುದು,ಅದೇ ರೀತಿ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಇವರನ್ನು ಗುರುತಿಸಿ ಎ.ಪಿ.ಜೆ.ಅಬ್ದುಲ್ ಕಲಾಂ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ನಡೆದಾಡುವ ದೇವರ ಟ್ರಸ್ಟಿನ ಅಧ್ಯಕ್ಷರಾದ ಎಸ್.ಮಂಜುನಾಥ್,ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಗೌರಮ್ಮ,ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರು ಹಾಗೂ ಸೈನಿಕ ರಾಜ್ಯ ಸಂಸ್ಥಾಪಕರು ಶ್ರ ರವಿ.ಆರ್.,ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷ ಮಂಜುನಾಥ್ ಭದ್ರಾವತಿ.,ಅಂತರಾಷ್ಟ್ರೀಯ ಕೊಳಲುವಾದಕರಾದ ಸಂದೀಪ್ ವಸಿಷ್ಟ., ಭಾರತೀಯ ಸೇನೆಯ ವೀರ ಯೋಧರಾದ ಎಚ್.ಜಿ.ಪರಮೇಶ್.,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಹಿತ್ಯ ಮತ್ತು ಕನ್ನಡ ಭಾಷಾ ಸುಧಾರಕರಾದ ಡಾ.ಜಿ.ಶಿವಣ್ಣ.,ಮಂಗಳೂರಿನ ಇಸ್ಮಾಯಿಲ್ ಶಾಫಿ ಮುಂತಾದವರು ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.