ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ : ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನವನ್ನು ಪಡೆದ ಸೌಜನ್ಯ ಎ.ಎಂ.
1 min read
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕ ಬೆಂಗಳೂರು ಇವರ ವತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ತುಂಬಿದ ಅಮೃತ ಭಾರತದ ನೆನಪಿಗಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಚಳುವಳಿ ಮತ್ತು ಸಮಾಜ ವಿಜ್ಞಾನ ಕುರಿತು ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಅಂಗಡಿ ಸರ್ಕಾರಿ ಪ್ರೌಢಶಾಲೆಯ ಸೌಜನ್ಯ ಎ.ಎಂ. ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಹಾಗೂ ಚಿಕ್ಕಮಗಳೂರು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಮೂಡಿಗೆರೆ ತಾಲ್ಲೂಕು ಅಂಗಡಿ ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಹರಿಪ್ರಿಯಾ ಎ.ಎಂ.ಪಡೆದಿದ್ದಾರೆ.

ದ್ವಿತೀಯ ಸ್ಥಾನವನ್ನು ಬೆಥನಿ ಅಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಹರ್ಷಿತಾ ಪಿ.ಎಂ.ಪಡೆದುಕೊಂಡಿದ್ದಾರೆ.

ತೃತೀಯ ಸ್ಥಾನವನ್ನು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರಚನಾ ಸುಧನ್ ಗಳಿಸಿಕೊಂಡಿದ್ದಾರೆ.
ಜಿಲ್ಲೆಯಿಂದ 650ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆಯಲ್ಲಿ ಜಿಲ್ಲಾ ಸಂಯೋಜಕರಾಗಿ ತಮನ್ನಾ ಮುನವ್ವರ್, ಜಿಲ್ಲಾ ತಾಂತ್ರಿಕ ಸಲಹೆಗಾರರಾಗಿ ಪೂಜಾದೇವಿ ಎಂ.ಡಿ. ಹಾಗೂ ಚಿಕ್ಕಮಗಳೂರು ತಾಲ್ಲೂಕು ಸಂಯೋಜಕರಾಗಿ,ಜಯಶಂಕರ್, ಪೂರ್ಣೇಶ್ ವಸ್ತಾರೆ,ಸುಮಾ ಬಿ.ಡಿ., ಮೂಡಿಗೆರೆ ತಾಲ್ಲೂಕು ಸಂಯೋಜಕರಾಗಿ ಮಂಜಪ್ಪ ದೊಡ್ಮನಿ , ಕಳಸ ತಾಲ್ಲೂಕು ಸಂಯೋಜಕರಾಗಿ ಸಂದೇಶ್ ಕೆ ಎಲ್, ಅಜ್ಜಂಪುರ ತಾಲ್ಲೂಕು ಮಲ್ಲಿಕಾರ್ಜುನ ಬಿ ಎಸ್ , ತರೀಕೆರೆ ತಾಲೂಕ್ ಸಂಯೋಜಕರಾಗಿ ಕುಮಾರಸ್ವಾಮಿ ಬಿ ಪಿ ಮತ್ತು ರೇಖಾ, ಕಡೂರ್ ತಾಲೂಕು, ನರಸಿಂಹರಾಜಪುರ ತಾಲ್ಲೂಕು ಸಂಯೋಜಕಿಯಾಗಿ ದೇವಮಣಿ, ಶೃಂಗೇರಿ ತಾಲೂಕು ಸಂಯೋಜಕರಾಗಿ ವೆಂಕಟೇಶ್,ಕೊಪ್ಪ ತಾಲೂಕು ಸಂಯೋಜಕರಾಗಿ ಮಂಜುಳಾ ಟಿ.ಪಿ.ಕಾರ್ಯನಿರ್ವಹಿಸಿದ್ದರು,ಜೊತೆಗೆ ಶಿಕ್ಷಕ ಪ್ರೇರಕರಾಗಿ ನೊಂದಾವಣೆ ಮಾಡಿಕೊಡುವ ನಿಟ್ಟಿನಲ್ಲಿ ಅನೇಕರು ದುಡಿದಿದ್ದರು,ಈ ಎಲ್ಲಾ ವಿಜೇತರಿಗೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪರವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಸಲ್ಲಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.