ಸೇವಾ ಭಾರತಿಗೆ – ” ಸಮಾಜ ಸೇವಾ ರತ್ನ ಪುರಸ್ಕಾರ “
1 min read
ಶ್ರೀ ವಿದ್ಯಾ ಭಾರತಿ ವಿದ್ಯಾ ಸಂಸ್ಥೆ( ರಿ ) ಬಣಕಲ್. ನಲ್ಲಿ ಅಕ್ಟೋಬರ್,2 ರಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯ ಕಾರ್ಯಕ್ರಮದಲ್ಲಿ ಸೇವಾ ಭಾರತಿ ಸೇವಾ ಸಂಘ.ಭಾರತಿಬೈಲು ಇದರ ಸೇವೆ ಗುರುತಿಸಿ ” ಸಮಾಜ ಸೇವಾ ರತ್ನ ” ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಶಿವರಾಮ ಶೆಟ್ಟಿ. ಸಮಾಜದ ಏಳಿಗೆಯನ್ನು ಬಯಿಸಿ ಸೇವಾ ಭಾವನೆಯಿಂದ ಸಮಾನ ಮನಸ್ಕರ ಈ ತಂಡ 9 ವರ್ಷಗಳಿಂದ ತನ್ನ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಇವರ ಸೇವೆ ಮುಂದಿನ ಪೀಳಿಗೆಗೆ ಈ ಮಾದರಿಯಾಗಬೇಕು ಎಂದರು.

ಸಮಾಜ ಸೇವಾ ರತ್ನ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶಶಿಧರ್ ಕನ್ನಗೆರೆ.ಒಟ್ಟಿಗೆ ಸೇರುವ ಸಂಸ್ಕಾರವನ್ನು ಬೆಳೆಸಿಕೊಂಡು ಸೇವಾ ಮನೋಭಾವನೆಯಿಂದ ಜೀವನ ರೂಪಿಸಿಕೊಳ್ಳಬೇಕು. ಮತ್ತು ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಸೇವಾ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಂಘದ ಸದಸ್ಯರಾದ ದಿಲೀಪ್ ಕನ್ನಗೆರೆ ಮಾತನಾಡಿ ಹಣಕ್ಕಿಂತ ಏಕಮನಸ್ಸಿನಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯವಾಗಿದೆ. ಯಾವುದೇ ಸಮಾಜದಲ್ಲಿ ಯಾವುದೇ ಭೇದವಿಲ್ಲದೆ ಸಮಾನ ಮನಸ್ಕರಾಗಿ ಸೇವಾ ಮನೋಭಾವನೆಯಿಂದ ಜೀವಿಸಬೇಕು .
ಶಿಕ್ಷಕರಾದ ವಿಜಯೇಂದ್ರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ತತ್ವ ಆದರ್ಶಗಳನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿಕೊಟ್ಟರು. ಮಕ್ಕಳಿಂದ ಶಾಲಾ ಆವರಣದ ಕಾರ್ಯವನ್ನು ನಿಗದಿಪಡಿಸಲಾಗಿದೆ.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ. ಉಪಾಧ್ಯಕ್ಷರಾದ ಬಿ.ಈ.ಸುಬ್ರಾಯಗೌಡ. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮಾಲತಿ.ಟಿ.ಆರ್. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ನಾಗರಾಜು.ಸಿ ಮತ್ತು ಉಪಮುಖ್ಯ ಶಿಕ್ಷಕರಾದ ವಸಂತ ಹಾರ್ಗೋಡು. ಸೇವಾ ಭಾರತಿ ಸದಸ್ಯರು ಶಾಲಾ ಶಿಕ್ಷಕರಾದ ಭಕ್ತೇಶ್. ಲೋಕೇಶ್. ಲಿಂಗರಾಜು. ಶೇಖರಪ್ಪ. ಲೀಲಾಮಣಿ. ಶ್ವೇತಾ. ಗೀತಾ. ಕುಸುಮ.ಎಸ್.ಶೆಟ್ಟಿ. . ಪ್ರತಾಪ್. ಅಶ್ವಿತಾ. ರಂಜಿತಾ. ಅನುಷಾ. ಆಶಾ. ಪಲ್ಲವಿ. ಪೂಜಾ. ಹಾಗೂ ಶಾಲಾ ವಿದ್ಯಾರ್ಥಿಗಳು. ಭಾಗವಹಿಸಿದರು.



ಬರಹ ಮತ್ತು ಚಿತ್ರ ಕೃಪೆ
ವಸಂತ್ ಹಾರ್ಗೋಡು.
ವರದಿ
ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್ ಅವಿನ್ ಟಿ.ವಿ




