“ಮಿಲಾದ್ ಕಾನ್ಫರೆನ್ಸ್ -2023 : ಮದ್ರಸ ಮಕ್ಕಳ ಪ್ರತಿಭಾನ್ವೇಷಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ ಚಕ್ಕಮಕ್ಕಿಯಲ್ಲಿ ಹುಬ್ಬುರ್ರಸೂಲ್ ಮಿಲಾದ್ ಕಾನ್ಫರೆನ್ಸ್ ಇದರ ಅಂಗವಾಗಿ ಮದ್ರಸ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಚಕ್ಕಮಕ್ಕಿ ಇದರ ವತಿಯಿಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರದಲ್ಲಿ ಮದ್ರಸ ಮಕ್ಕಳು ಸಂತೋಷದಿಂದ ಪಾಲ್ಗೊಂಡು ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ನಬಿ ಮದ್ಹ್ ಗಾನ ಹಾಗೂ ಜೀವನ ಚರಿತ್ರೆಗಳನ್ನು ಹಾಡಿ ಹೊಗಳಿದರು.
ಈ ಸಂದರ್ಭದಲ್ಲಿ ಬದ್ರಿಯಾ ಜುಮ್ಮಾ ಮಸಿದಿಯ ಖತೀಬರಾದ ಜಮಾಲುದ್ದೀನ್ ಫೈಝಿ ಮತ್ತು ಸಹ ಅಧ್ಯಾಪಕರಾದ ಸಫ್ವಾನ್ ಫೈಝಿ ಹಾಗೂ ದಾರುಲ್ ಬಯಾನ್ ಖಲಂದರಿಯಾ ಎಜುಕೇಶನ್ ಇನ್ಸ್ಟಿಟ್ಯೂಟ್ ಇದರ ಪ್ರಾಂಶುಪಾಲರಾದ ಸಿನಾನ್ ಫೈಝಿ ಖಲಂದರಿ ಮತ್ತು ಕಾರ್ಯದರ್ಶಿ ಝೈದ್ ಫೈಝ್ ಖಲಂದರಿ ಅವರನ್ನು ಜಮಾಅತ್ ಕಮಿಟಿಯ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬದ್ರಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಹಾಜಿ,ನಜೀರ್ ಹಾಜಿ,ಎ.ಸಿ.ಅಯ್ಯೂಬ್ ಹಾಜಿ,ನಾಸೀರ್ ಹಾಜಿ ಝೆನಿತ್,ಅಬುಬಕ್ಕರ್,ಮೊಯ್ದುಕುಞಿ,ಎಸ್.ಮುಹಮ್ಮದ್,ಪಿ.ಮುಹಮ್ಮದ್,ಪಿ.ಕೆ.ಹಸನಬ್ಬ ಮತ್ತು ಜಮಾಅತ್ ಕಮಿಟಿಯ ಪದಾಧಿಕಾರಿಗಳು ಹಾಗೂ ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಯಾಸೀರ್,ಕಾರ್ಯದರ್ಶಿ ಮನ್ಸೂರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ತೀರ್ಪುಗಾರರಾಗಿ ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಇದರ ಪ್ರಧಾನ ಕಾರ್ಯದರ್ಶಿ ಇಮ್ರಾನ್,ಮಜೀದ್ ಫೈಝಿ ಖಲಂದರಿ ಭಾಗವಹಿಸಿದ್ದರು.
ಮದ್ರಸ ಮಕ್ಕಳಿಂದ ಕೊನೆಯಲ್ಲಿ ಬುರ್ದಾ ಮಜ್ಲಿಸ್ ನಡೆಯಿತು.
✍🏻ಬರಹ ಕೃಪೆ.✍🏻
ಸಿದ್ದಿಕ್ ಚಕ್ಕಮಕ್ಕಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.