ಉದ್ಘಾಟನೆಯಾಗದ 50 ಲಕ್ಷದ ರೈತ ಸಂಪರ್ಕ ಕೇಂದ್ರದ ಕಟ್ಟಡ : ಉದ್ಘಾಟನೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ
1 min read
ಕೊಡಗು ಜಿಲ್ಲೆ,ಸೋಮವಾರಪೇಟೆ ತಾಲ್ಲೂಕಿನ, ಶನಿವಾರಸಂತೆ ಹೋಬಳಿಗೆ ಸೇರಿದ ರೈತ ಸಂಪರ್ಕ ಕೇಂದ್ರದ 50 ಲಕ್ಷ ಮೌಲ್ಯದ ಕಟ್ಟಡ ನಿರ್ಮಾಣ
ನಿರ್ಮಾಣವಾಗಿದ್ದರು ಇದನ್ನು ಉದ್ಘಾಟನೆ ಮಾಡದೆ ಕೃಷಿ ಇಲಾಖೆಯ ಅಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ನಮ್ಮ ತೆರಿಗೆ ಹಣದಿಂದ ಕಟ್ಟಿದ ಕಟ್ಟಡ ಉದ್ಘಾಟನೆಗೊಳ್ಳದೆ ಪಾಳುಬೀಳುತ್ತಿದೆ.

ಆದರೆ ರೈತರಿಗೆ ಉಪಯೋಗವಾಗಲೆಂದು ಈ ಕಟ್ಟಡ ನಿರ್ಮಿಸಿದರೆ ಅಧಿಕಾರಿಗಳು ಕಟ್ಟಡ ಉದ್ಘಾಟನೆ ಮಾಡದೆ ಅಸಡ್ಡೆ ತೋರುತ್ತಿದ್ದಾರೆ. ಈ ಕಟ್ಟಡ ಈಗ ಗಿಡಗಂಟಿಗಳಿಂದ ಕೂಡಿದ್ದು 50 ಲಕ್ಷದ ಕಟ್ಟಡ ಮುಚ್ಚಿ ಹೋಗಿರುತ್ತದೆ.
ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ ಹೇಗಿದೆ ನೋಡಿ
ಇಂಥ ಅಧಿಕಾರಿಗಳು ನಮಗೆ ಇರಬೇಕಾ ಎಂಬುವುದೇ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಶ್ನೆ.
ಈ ಕಟ್ಟಡ ಬೇಗನೆ ಉದ್ಘಾಟನೆಗೊಂಡು ರೈತರಿಗೆ ಉಪಯೋಗವಾಗಬೇಕು ಆದ್ದರಿಂದ ಇನ್ನು 15 ದಿನದೊಳಗೆ ಈ ಕಟ್ಟಡ ಉದ್ಘಾಟನೆಗೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಮಾನ್ಯ ಲೋಕಾಯುಕ್ತರಿಗೆ ಹಾಗೂ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಕೃಷಿ ಅಧಿಕಾರಿಗಳ ಮೇಲೆ ದೂರು ಸಲ್ಲಿಸುತ್ತದೆ ಎಂದು
ಸೋಮವಾರ ಪೇಟೆ ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
✍🏻ಬರಹ ಕೃಪೆ.✍🏻

ಫ್ರಾನ್ಸಿಸ್ ಡಿಸೋಜ.
ಕರವೇ ತಾಲ್ಲೂಕು ಅಧ್ಯಕ್ಷ.
ಸೋಮವಾರಪೇಟೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.