“ಮೀಲಾದ್ ಕಾನ್ಫರೆನ್ಸ್ – 2023.”
1 min read
ದಿನಾಂಕ 25/09/2023ರ ಸೋಮವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ,ಚಕ್ಕಮಕ್ಕಿಯ ಬದ್ರಿಯ ಜುಮ್ಮಾ ಮಸೀದಿಯಲ್ಲಿ ಮೀಲಾದ್ ಕಾನ್ಫರೆನ್ಸ್ ಇದರ ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಿತು.

ಬದ್ರಿಯಾ ಜುಮ್ಮಾ ಮಸೀದಿಯ ಸಹ ಅಧ್ಯಾಪಕರಾದ ಸಫ್ವಾನ್ ಫೈಝಿಯವರು ನೆರೆದಿರುವ ಸರ್ವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ 10ನೇ ವರ್ಷದ ಮಜ್ಲಿಸುನ್ನೂರ್ ಕಾರ್ಯಕ್ರಮ ಕೂಡ ಜರುಗಿತು.ಕಾರ್ಯಕ್ರಮವನ್ನು ದುವಾಃದ ಮೂಲಕ ಉದ್ಘಾಟಿಸಿ ಮತ್ತು ಉದ್ಘಟನಾ ನುಡಿಯನ್ನು ಬದ್ರಿಯ ಜುಮ್ಮಾ ಮಸೀದಿಯ ಖತೀಬರಾದ ಜಮಾಲುದ್ದೀನ್ ಫೈಝಿಯವರು ನುಡಿದರು.
ದಾರುಲ್ ಬಯಾನ್ ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ ಇದರ ಪ್ರಾಂಶುಪಾಲರಾದ ಸಿನಾನ್ ಫೈಝಿ ಖಲಂದರಿ ಮುಖ್ಯ ಪ್ರಭಾಣಕಾರರಾಗಿ ಮಾತನಾಡಿದರು.



ಈ ಸಂದರ್ಭದಲ್ಲಿ ಬದ್ರಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಮತ್ತು ಪದಾಧಿಕಾರಿಗಳು,ನಜೀರ್ ಹಾಜಿ,ಎ.ಸಿ.ಅಯ್ಯೂಬ್ ಹಾಜಿ,ನಾಸೀರ್ ಝೆನಿತ್,ಅಬುಬಕ್ಕರ್,ಮೊಯ್ದುಕುಞಿ,ಎಸ್.ಮುಹಮ್ಮದ್,ಪಿ.ಮುಹಮ್ಮದ್,ಝೈದ್ ಫೈಝಿ ಖಲಂದರಿ ಹಾಗೂ ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಯಾಸೀರ್,ಕಾರ್ಯದರ್ಶಿ ಮನ್ಸೂರ್,ಖಜಾಂಚಿ ಬಿ.ಎಂ.ಅಝೀಝ್ ಹಾಗೂ ಪದಾಧಿಕಾರಿಗಳು,ಊರಿನ ಮುಸ್ಲಿಂ ಮುಖಂಡರು ಮತ್ತು ಮುಸ್ಲಿಂ ಬಾಂಧವರು ಹಾಜರಿದ್ದರು.
✍🏻ಬರಹ ಕೃಪೆ.✍🏻
ಯಾಸೀರ್ ಬಗ್ಗಸಗೋಡು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




