“ಕೆ.ಜೆ.ವಿ.ಎಸ್. ದಶಮಾನೋತ್ಸವ ಸಮಾರಂಭ.”
1 min read
ದಿನಾಂಕ 22/09/2023ರ ಶುಕ್ರವಾರದಂದು ಹೊಯ್ಸಳ ಸಾಮ್ರಾಜ್ಯದ ನೆಲೆಬೀಡು ಅಂಗಡಿ ಗ್ರಾಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ದಶಮಾನೋತ್ಸವ ಸಮಾರಂಭ ನಡೆಯಿತು.
ವಿಜ್ಞಾನವನ್ನು ವೈಚಾರಿಕವಾಗಿ ನಮ್ಮ ನಿತ್ಯದ ಬದುಕಿಗೆ ಬಳಸಿಕೊಳ್ಳಲು ವಿಫಲರಾದರೆ ಅದು ವ್ಯಕ್ತಿಗತವಾದ ಸಮಗ್ರ ಬದುಕಿಗೆ ಮತ್ತು ಇಡೀ ಸಮಾಜಕ್ಕೆ ದೊಡ್ಡ ನಷ್ಟವಾಗುತ್ತದೆ ಎಂದು ಮೂಡಿಗೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್ ಅಭಿಪ್ರಾಯಪಟ್ಟರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಮೂಡಿಗೆರೆ ಸಮೀಪದ ಅಂಗಡಿ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಜೆವಿಎಸ್ ದಶಮಾನೋತ್ಸವ ಮತ್ತು ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು, ವೈಚಾರಿಕ ಸಂದೇಶವನ್ನು ನೀಡುವ ವಿಜ್ಞಾನದ ಪ್ರಯೋಗಾತ್ಮಕ ಚಟುವಟಿಕೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ವಿಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳವ ಬಗ್ಗೆ ವಿದ್ಯಾರ್ಥಿ ಯುವ ಜನರಿಗೆ ಶಿಕ್ಷಕ ಸಮೂಹ ಜಾಗೃತಿ ಮೂಡಿಸಬೇಕು, ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ,ಶಿಕ್ಷಣ ಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಕೆಜೆವಿಎಸ್ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ವೈಜ್ಞಾನಿಕ ಯುಗದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಮನೋವಿಕಾಸ ಕುರಿತು ಶರಣ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಗಂಗಾಧರ ಶಿವಪುರ ಪ್ರಧಾನ ಭಾಷಣವನ್ನು ಮಾಡಿ, ವಿಜ್ಞಾನದ ಸಂಶೋಧನೆಗಳ ಫಲಗಳು ಮನುಷ್ಯ ಮತ್ತು ಜೀವ ವೈವಿಧ್ಯತೆಯ ಸಾವಿಗೆ ಕಾರಣವಾಗದೆ, ಅವುಗಳು ಪರಿಸರದ ಬೆಳವಣಿಗೆಗೆ ಮತ್ತು ಮಕ್ಕಳ ಮನೋವಿಕಾಸದ ಅಭಿವೃದ್ಧಿಗೆ ಸಹಾಯಕವಾಗಬೇಕು, ವಿಜ್ಞಾನ ನಮ್ಮನ್ನು ಬಳಸಿಕೊಳ್ಳದೆ ನಾವು ವಿಜ್ಞಾನವನ್ನು ನಮ್ಮ ನಮ್ಮ ಆರೋಗ್ಯ ಮತ್ತು ನೆಮ್ಮದಿಯ ಬದುಕಿಗೆ ಹೆಚ್ಚು ಹೆಚ್ಚು ದುಡಿಸಿಕೊಳ್ಳಬೇಕು ಎಂದರು.
ಕೆಜೆವಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ, ಕೆಜೆವಿಎಸ್ ಸಂಘಟನೆಯು ಕೇವಲ ವಿಜ್ಞಾನದ ಸಂಗತಿಗಳಿಗೆ ಸೀಮಿತವಾಗದೆ, ಈ ನೆಲ ಜಲ ಪರಿಸರ, ಜೀವವಿದ್ಯತೆ ಹಾಗೂ ಮಾನವೀಯ ಮೌಲ್ಯದಂತ ಹತ್ತು ಹಲವು ಸಂಗತಿಗಳಿಗೆ, ಹಲವು ವಿಚಾರಗಳೊಂದಿಗೆ ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ರಾಜದಾದ್ಯಂತ ಈ ನೆಲದ ಜನರ ಒಂದು ನಾಡಿಮಿಡಿತದೊಂದಿಗೆ ಧ್ವನಿಯಾಗುತ್ತಲೇ ಬರುತ್ತಿದೆ, ಬಹು ಮುಖ್ಯವಾಗಿ ವಿದ್ಯಾರ್ಥಿ ಯುವಜನರಲ್ಲಿ ಹೊಸ ಚಿಂತನೆಯನ್ನು ಬಿಚ್ಚಿ ಬೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಸಮಿತಿಯ ಚಟುವಟಿಕೆಗಳನ್ನು ವಿವರಿಸಿದರು, ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಜಿಲ್ಲಾಧ್ಯಕ್ಷ ಮುಗಳಿಕಟ್ಟೆ ಲೋಕೇಶ್ ಅವರು ವಹಿಸಿಕೊಂಡಿದ್ದರು, ಕೆಜೆವಿಎಸ್ ಹುಟ್ಟು ಅದರ ಆಶಯ ಉದ್ದೇಶ ಮತ್ತು ಹಿನ್ನೆಲೆಯನ್ನು ವಿವರಿಸಿ, ಸಂಘಟನೆಯ ಮುಂದಿನ ಚಟುವಟಿಕೆ ಮತ್ತು ರೂಪುರೇಷೆಗಳು ಯಾವ ರೀತಿ ಮಾದರಿಯಾಗಿರಬೇಕು ಎಂಬ ಸ್ಪಷ್ಟ ನೆಲುವುಗಳನ್ನು ವ್ಯಕ್ತಪಡಿಸಿ ದಶಮಾನೋತ್ಸವ ಸಮಾರಂಭಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು, ಈ ಸಂದರ್ಭದಲ್ಲಿ, ನೀರು ಮತ್ತು ನೈರ್ಮಲ್ಯ ಕುರಿತು ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯ ರಾಜ್ಯಮಟ್ಟದ ವಿಜೇತ ವಿದ್ಯಾರ್ಥಿ ಅಂಗಡಿ ಪ್ರೌಢಶಾಲೆಯ ಕು ಸೌಜನ್ಯl, ಮತ್ತು ಮೂಡಿಗೆರೆ ಬೆಥನಿ ಶಾಲೆ ಶಿಕ್ಷಕಿ ಕಮಲ ಮತ್ತು ಆ ಶಾಲೆಯ ವಿದ್ಯಾರ್ಥಿನಿಗಳು ಹಾಗೂ ಕೆಜೆವಿಎಸ್ ಕೊಡ ಮಾಡುವ ಅನಿತಾ ಕೌಲ್ ಹಾಗೂ ಸಾವಿತ್ರಿಬಾಯಿ ಪುಲೆ ರಾಜ್ಯಪ್ರಶಸ್ತಿ ಪಡೆದ ಪ್ರಕಾಶ್,ಹೆಚ್ ಎ, ಹಾಲೇಗೌಡ,ಇಂಪಾ, ಬಿ ಪಿ ಸೌಭಾಗ್ಯ, ಹಾಗೂ ಹಿರಿಯ ನಿವೃತ್ತ ಶಿಕ್ಷಕರಾದ ನಾಗರತ್ನ, ಸೀತಮ್ಮ, ಗಂಗಮ್ಮ, ಮತ್ತು ಕೆಜೆವಿಎಸ್ ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಗುರುತರವಾಗಿ ಗುರುತಿಸಿಕೊಂಡು ಸಕ್ರಿಯವಾಗಿ ದುಡಿಯುತ್ತಿರುವ ಶಿಕ್ಷಕಿಯರಾದ ವೇಣಿ, ವೀಣಾ,ಜಿಟಾ, ಸೋಮಶೇಖರ್ ಇತರರನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದಶಮಾನೋತ್ಸವದ ಪ್ರಯುಕ್ತ ಸನ್ಮಾನಿಸಲಾಯಿತು, ವೇದಿಕೆಯಲ್ಲಿ ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಹೆಚ್ ಎಂ,ಶಾಂತಕುಮಾರ್,ಕೆಜೆವಿಎಸ್ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಆರ್, ಪ್ರಕಾಶ್, ಅಂಗಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ, ಇ, ರಾಮೇಶ್ವರಪ್ಪ,ಜಾನಪದ ಗಾಯಕ ಬಕ್ಕಿ ಮಂಜುನಾಥ್, ಎಸ್ ಡಿ ಎಂ ಸಿ ಅಧ್ಯಕ್ಷ ಸತೀಶ್,ಶರಣೆ ಸಿದ್ದಮ್ಮ, ಶಿಕ್ಷಕಿ ನಾಗರತ್ನ, ಸೀತಮ್ಮ, ಹಾಲೇಗೌಡ ಮುಂತಾದವರು ಮಾತನಾಡಿದರು,ಶಿಕ್ಷಕಿ ಲತಾ ಕಾರ್ಯಕ್ರಮ ನಿರೂಪಣೆ ಮಾಡಿ, ಮಂಜಪ್ಪ ದೊಡ್ಮನಿ ಸ್ವಾಗತಿಸಿ, ಆರ್.ಪ್ರಕಾಶ್ ವಂದಿಸಿದರು.

ವಿದ್ಯಾರ್ಥಿಗಳಿಂದ ಪ್ರಾರ್ಥನೆ,ಮತ್ತು ನಾಡಗೀತೆ, ಬಕ್ಕಿ ಮಂಜುನಾಥ್ ಅವರಿಂದ ಜನಪದ ಗಾಯನ ಮತ್ತು ಹಾಲೇಗೌಡರಿಂದ ಪವಾಡ ಬಯಲು ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಮಲೆನಾಡ ಕೋಗಿಲೆ ಬಕ್ಕಿ ಮಂಜುನಾಥ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೇಮಂತ್ ರಾಜ್ ಅವರನ್ನು ಸನ್ಮಾನಿಸಲಾಯಿತು.
✍🏻ಬರಹ ಕೃಪೆ.✍🏻

ಡಿ.ಎಂ.ಮಂಜುನಾಥ್ ಸ್ವಾಮಿ.
ಚಿಕ್ಕಮಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.