“ಚಿನ್ನಿಗ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ : ಚಿಣ್ಣರ ಕಲಾ ಸಂಪತ್ತು ಅನಾವರಣ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಅಣಜೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆಗಳ ಚಿನ್ನಿಗ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ವೈಭವದಿಂದ ಸಡಗರದಿಂದ ನಡೆಯಿತು.

ಈ ಕಾರ್ಯಕ್ರಮ ಉದ್ಘಾಟಿಸಿ ಮೂಡಿಗೆರೆ ಭರವಸೆ ಶಾಸಕಿ ನಯನ ಮೋಟಮ್ಮ ಮಾತನಾಡಿದರು.


ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರದೀಪ್ ವಹಿಸಿದ್ದರು.
ಇದೆ ಸಂಧರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುಬ್ರಾಯಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಲಕ್ಷ್ಮೀ, ಗ್ರಾ.ಪಂ.ಉಪಾಧ್ಯಕ್ಷರು ಶ್ರೀಮತಿ ನಾಗಮ್ಮ, ಗ್ರಾ.ಪಂ.ಸದಸ್ಯರಗಳಾದ,ಮಲ್ಲೇಶ್ ಅಣಜೂರು, ಸುನೀಲ್ ನೀಡುಗೂಡು, ಪ್ರವೀಣ್, ಭಾಗ್ಯಮ್ಮ, ಗ್ರಾ.ಪಂ.ಮಾಜಿ ಅಧ್ಯಕ್ಷರು ಸಲ್ಮಾ ಸಾದಿಕ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ಶ್ರೀಮತಿ ಪುನರ್ವ, ಶಿಕ್ಷಣ ಸಂಯೋಜಕರು ಸ್ಮಿತಾ ಸವಿತಾ ಲೋಭೋ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜ್, ಕಾರ್ಯದರ್ಶಿ ನವೀನ್, ಸಹ ಕಾರ್ಯದರ್ಶಿ ವೀಣಾ.ಎಂ.ಕೆ, ಜಯಂತ್ ನಾಯಕ್, ಚಂದ್ರಶೇಖರ, ಫೈರೋಝ್ ಅಹಮದ್, ಕೃಷ್ಣಪ್ಪ, ಅಬ್ದುಲ್ ಕರೀಂ, ರಮೇಶ್, ಗಿರೀಶ್ ಮುಂತಾದವರು ಭಾಗವಹಿಸಿದ್ದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ನಾಮ ನಿರ್ದೇಶಿತ ಸದಸ್ಯ ಬಕ್ಕಿ ಮಂಜುನಾಥ್ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಬಕ್ಕಿ ರವೀಂದ್ರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
✍🏻ಬರಹ ಕೃಪೆ.✍🏻

ಬಕ್ಕಿ ಮಂಜುನಾಥ್.
ಮೂಡಿಗೆರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.