“ಛದ್ಮವೇಷ ಸ್ಪರ್ಧೆ.”
1 min read
ದಿನಾಂಕ 11/9/2023 ಸೋಮವಾರದಂದು ಸಂಸ್ಕೃತಿ ಜೇಸಿ ಸಪ್ತಾಹದ ಅಂಗವಾಗಿ ಸಂಜೆ ಆರು ಗಂಟೆಗೆ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು,ಇದರ ಅಧ್ಯಕ್ಷತೆಯನ್ನು ಸವಿತಾ ರವಿಯವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ದೀಪಕ್ ದೊಡ್ಡಯ್ಯ ಸಂಸ್ಥಾಪಕರು ಯುರೇಖಾ ಅಕಾಡೆಮಿ ಮತ್ತು ಬಿಜೆಪಿ ಮುಖಂಡರು ,ಶ್ರೀ ಶಾಂತಕುಮಾರ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ,ಶ್ರೀ ರಂಜಿತ್ ಕೆ ಮುಖ್ಯ ಪ್ರಬಂಧಕರು ಬ್ಯಾಂಕ್ ಆಫ್ ಬರೋಡ ಮೂಡಿಗೆರೆ, ಜೇಸಿ ವಿದ್ಯಾ ರಾಜು ನಿಕಟ ಪೂರ್ವ ಅಧ್ಯಕ್ಷರು, ಜೇಸಿ ಕವಿತಾ ಸಂತೋಷ ಲೇಡಿ ಜೇಸಿ ಕೋ ಆರ್ಡಿನೇಟರ್, ಜೇಸಿ ರೇಖನಾಗರಾಜ ಲೇಡಿ ಜೆಸಿ ಕಾರ್ಯದರ್ಶಿ, ಜೇಸಿ ಪ್ರದೀಪ್ ಕಾರ್ಯದರ್ಶಿ,ಜೇಸಿ ದೀಪಿಕಾ ಪ್ರಸಾದ ಸಪ್ತಾಹದ ನಿರ್ದೇಶಕರು ಹಾಗೂ ದಿನದ ನಿರ್ದೇಶಕರು ಜೇಸಿ ಚರಣ್ ಕುಮಾರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಸಭೆಯಲ್ಲಿ ಜೇಸಿ ಪೂರ್ವ ಅಧ್ಯಕ್ಷರು, ಜೇಸಿ ರೇಟ್ ಪೂರ್ವ ಅಧ್ಯಕ್ಷರು,ಜೇಸಿ ಸದಸ್ಯರು ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮದ ನಂತರ ಪುಟಾಣಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದ್ದು ಈ ಸ್ಪರ್ಧೆಯಲ್ಲಿ 50 ಮಕ್ಕಳು ವಿವಿಧ ವೇಷಾಧಾರಿಗಳಲ್ಲಿ ಪಾಲ್ಗೊಂಡಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




