AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ,ಕಳಸ ತಾಲ್ಲೂಕಿನ, ತೋಟದೂರು ಗ್ರಾಮ ವ್ಯಾಪ್ತಿಯ ಶ್ರೀ ಸತ್ಯಸಾರಮಾನಿ ದೈವಸ್ಥಾನ ಕಗ್ಗನಳ್ಳ , ಪಡೀಲ್ ನಲ್ಲಿ ದಿನಾಂಕ 10/09/2023ರ ಭಾನುವಾರದಂದು ಯುವಶಕ್ತಿ ಸಂಭ್ರಮ ಕಾರ್ಯಕ್ರಮ ನಿಮಿತ್ತ ಗ್ರಾಮೀಣ ಕ್ರೀಡಾಕೂಟ.
ಸಮಾರಂಭದಲ್ಲಿ ಕ್ಷೇತ್ರದ ಗುರಿಕಾರರಾದ ಲಕ್ಷ್ಮಣ್ ರವರು ದೀಪ ಬೆಳಗಿ ಚಾಲನೆ ಮಾಡಿದರು.
ಆದಿದ್ರಾವಿಡ ಸಮಾಜ ಜಿಲ್ಲಾಧ್ಯಕ್ಷರಾದ ಸುರೇಶ್ ಆರ್ಡಿಕೊಪ್ಪ ಧ್ವಜಾರೋಹಣ ನೆರವೇರಿಸಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕ್ರೀಡಾಕೂಟ ಉತ್ತಮ ರೀತಿಯಲ್ಲಿ ಜಿಲ್ಲೆಯಲ್ಲಿ ನಡೆಸಿಕೊಂಡು ಬರುತ್ತಿರುವ ಸಮಾಜವನ್ನು ಮುನ್ನಡೆಸಲು ಕಗ್ಗನಳ್ಳಿ ದೈವಸ್ಥಾನ ಸಮಿತಿಯ ಕಾರ್ಯ ಶ್ಲಾಘನೀಯ. ಇನ್ನೂ ಇಂತಹ ಕಾರ್ಯ ನಡೆಯಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಮಹಾಬಲ , ಖಜಾಂಚಿ ಶ್ರೀನಿವಾಸ್, ಕಾರ್ಯದರ್ಶಿ ಪ್ರಭಾಕರ್, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಅಚ್ಚಮ್ಮ, ಕಾಂತು, ಅಭಿ , ನಂದೀಶ್ ಪಾತ್ರಿ ಇದ್ದರು.
ಕಾರ್ಯಕ್ರಮದ ತೀರ್ಪುಗಾರರಾಗಿ ಶೇಖರ್ ವಿ.ಜಿ, ನಿರೂಪಕರರಾಗಿ ಹಿರಿಯರಾದ ಗೌರವಾನ್ವಿತ ಶ್ರೀನಿವಾಸ್ ಮಿಜಾರು ಹಾಗೂ ಶಿವಪ್ಪ ಪಡೀಲು ಕಾರ್ಯ ನಿರ್ವಹಿಸಿದರು.
ಪುಟಾಣಿ ಕೃಷ್ಣ ವೇಷ ಸ್ಪರ್ಧೆ, ಕಿರಿಯರಿಗೆ ಹಾಗೂ ಹಿರಿಯರಿಗೆ ಗುಂಡುಎಸೆತ ಕಾರ್ಯಕ್ರಮ, ಮ್ಯೂಸಿಕಲ್ ಛೇರ್, ಹಗ್ಗ ಜಗ್ಗಾಟ, ಬಾಲಿಂದ ಬಕೆಟ್, ಲಕ್ಕಿಗೇಂ, ಮೊಸರು ಕುಡಿಕೆ ಆಟ. ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ಭಾಗವಹಿಸಿದ್ದು ಎಲ್ಲರಿಗೂ ಊಟದ ವ್ಯವಸ್ಥೆ. ಮಾಡಿದ್ದರು.

✍🏻ಬರಹ ಮತ್ತು ಚಿತ್ರ ಕೃಪೆ✍🏻.

ವಸಂತ್ ಹಾರ್ಗೋಡು.

ವರದಿ

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು

ಬ್ಯೂರೋ ನ್ಯೂಸ್,ಅವಿನ್ ಟಿ.ವಿ.

9448305990.

About Author

Leave a Reply

Your email address will not be published. Required fields are marked *