“ಮೂಡಿಗೆರೆಯ ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ದರ್ಬಾರ್.”
1 min read
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಕ.ರಾ.ರ.ಸಾ.ನಿ ಬಸ್ ನಿಲ್ದಾಣವು ಅವ್ಯವಸ್ಥೆಯ ಗೂಡಾಗಿದೆ.
ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳಾದ ಕಾರು ಬೈಕುಗಳದ್ದೇ ದರ್ಬಾರ್ ಆಗಿದೆ. ಬಸ್ ನಿಲ್ದಾಣದ ಒಳಗೆ ಎಲ್ಲೆಂದರಲ್ಲಿ ತಮ್ಮ ಖಾಸಗಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು ಅಲ್ಲದೆ ಬೈಕ್ ಸವಾರರು ಅಡ್ಡಾದಿಡ್ಡಿ ಓಡಿಸುತ್ತಿದ್ದು ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತಿದ್ದು ದೂರದಿಂದ ಬರುವಂತಹ ಸಾರಿಗೆ ಬಸ್ಸುಗಳು ಈ ಖಾಸಗಿ ವಾಹನಗಳು ಬಸ್ಸು ಚಲಿಸುವ ಮಾರ್ಗ ಮಧ್ಯ ನಿಲ್ಲಿಸಿ ಎಲ್ಲೆಂದರಲ್ಲಿ ಹೋಗುತ್ತಾರೆ. ಬಸ್ ಚಾಲಕರು ತುಂಬಾ ಸಮಾಧಾನದಿಂದ ಅವರು ಬರುವವರಿಗೆ ಕಾದು ತಾವು ಮುಂದೆ ಸಾಗುತ್ತಾರೆ. ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಇಂತಿಷ್ಟು ಸಮಯಕ್ಕೆ ನಿರ್ದಿಷ್ಟ ನಿಲ್ದಾಣವನ್ನು ತಲುಪುವ ಸಮಯವನ್ನು ನಿಗದಿಪಡಿಸಿರುತ್ತಾರೆ. ಆದರೆ ಈ ಖಾಸಗಿ ವಾಹನಗಳ ದರ್ಬಾರಿನಿಂದ ಈ ಮೂಡಿಗೆರೆ ನಿಲ್ದಾಣದಲ್ಲಿ 10 ರಿಂದ 15 ನಿಮಿಷಗಳ ಕಾಲ ವ್ಯರ್ಥವಾಗುತ್ತದೆ ಚಾಲಕರು ತುಂಬಾ ಸಮಾಧಾನ ಮತ್ತು ತಾಳ್ಮೆಯಿಂದ ಇದನ್ನು ಸಹಿಸಿಕೊಂಡು ಮೂಡಿಗೆರೆ ಬಸ್ ನಿಲ್ದಾಣದ ಅಧಿಕಾರಿಗಳ ವಿರುದ್ಧ ಅಸಹನೆಯನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ ಎಂದು ಇಡೀ ಶಾಪ ಹಾಕುತ್ತಿದ್ದಾರೆ.

ಇದಲ್ಲದೆ ಪ್ರಯಾಣಿಕರು ಮೂಡಿಗೆರೆ ಮತ್ತು ಸಕಲೇಶಪುರಕ್ಕೆ ಬಸ್ ಬಂದು ನಿಂತ ತಕ್ಷಣ ಪ್ರಯಾಣಿಕರು ಆತುರ ಆತುರದಿಂದ ಓಡಿ ಹೋಗಿ ಸೀಟನ್ನು ಕಾಯ್ದಿರಿಸುವದನ್ನು ನಾವು ಗಮನಿಸುತ್ತಿದ್ದೇವೆ. ಈ ಆತುರದಲ್ಲಿ ಓಡಿ ಹೋಗುವಾಗ ಎದುರಿನಿಂದ ಬೈಕ್ ಸವಾರರು ನಿಲ್ದಾಣದ ಒಳಗೆ ತಮ್ಮ ವೇಗಕ್ಕು ಮಿತಿ ಇಲ್ಲದಂತೆ ಅಡ್ಡ ಬಂದು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಾರೆ ಆಕಸ್ಮಿಕವಾಗಿ ಪ್ರಾಣಿಕರು ಏನಾದರೂ ಪ್ರಶ್ನೆ ಮಾಡಲು ಮುಂದಾದರೆ ಕ್ಷಣಾರ್ಧದಲ್ಲಿ 10ರಿಂದ15 ಜನರ ಗುಂಪು ಸೇರಿ ಪ್ರಯಾಣಿಕರ ಮೇಲೆ ಎರಗುತ್ತಾರೆ. ಇದೆಲ್ಲವೂ ದಿನನಿತ್ಯ ನೋಡಿಯೂ ಕೂಡ ನೋಡದ ಹಾಗೆ ವರ್ತಿಸುತ್ತಿರುವವರು ಮೂಡಿಗೆರೆಯ ಬಸ್ ನಿಲ್ದಾಣದ ಅಧಿಕಾರಿಗಳು ಇವರ ಬೇಜವಾಬ್ದಾರಿತನಕ್ಕೆ ವಿವಿಧ ಕಡೆಯಿಂದ ಬಂದಂತಹ ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಕೆಲವರ್ಷದ ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮೇನ್ ಗೇಟ್ ಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಿದ್ದರು ಮತ್ತು ಬಸ್ ನಿಲ್ದಾಣದ ಒಳಗಡೆ ನಿರ್ಬಂಧವನ್ನು ಕೂಡ ವಿಧಿಸಲಾಗಿತ್ತು ಅದೆಲ್ಲವನ್ನು ಈಗ ಗಾಳಿಗೆ ತೂರಲಾಗಿದೆ ಈ ಬಸ್ ನಿಲ್ದಾಣದಲ್ಲಿ ತಮ್ಮ ಕಾರು ಮತ್ತು ಬೈಕುಗಳನ್ನು ಪಾರ್ಕಿಂಗ್ ಮಾಡಿ ಮಾಲೀಕರು ದೂರದ ಊರಿಗೆ ತಮ್ಮ ಕೆಲಸಗಳಿಗೆ ಹೋಗುತ್ತಾರೆ ಅವರು ಬರುವುದು ರಾತ್ರಿ ಈ ವಾಹನಗಳಿಂದ ಒಂದು ಕಡೆ ಪ್ರಯಾಣಿಕರಿಗೆ ಕಿರಿಕಿರಿಯಾದರೆ ಇನ್ನೊಂದು ಕಡೆ ಬಸ್ ಚಾಲಕರಿಗೆ ಮತ್ತೊಂದು ರೀತಿಯ ಕಿರಿಕಿರಿ ಉಂಟಾಗುತ್ತಿದೆ.
ಶಾಸಕರೇ ಇತ್ತ ಗಮನಹರಿಸಿ.

ಪ್ರಯಾಣಿಕರಿಗೆ ಏನಾದರೂ ಅವಗಡ ಸಂಭವಿಸುವ ಮೊದಲು ಕೆ.ಎಸ್.ಆರ್.ಟಿ.ಸಿ ಯ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ವಾಹನಗಳಿಗೆ ಒಳಗೆ ಪ್ರವೇಶ ನಿರ್ಬಂಧಿಸಿ ಬಸ್ಸುಗಳಿಗೆ ಸೂಕ್ತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಒತ್ತಾಯ.
ಮೂಡಿಗೆರೆಯ ಶಾಸಕರಾದ ನಯನ ಮೊಟಮ್ಮನವರೇ ಮೂಡಿಗೆರೆಯಲ್ಲಿ ಖಾಸಗಿ ವಾಹನಗಳಿಗೆ ಸೂಕ್ತ ರೀತಿಯ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ ಆದುದರಿಂದ ಮುಂದಿನ ದಿನಗಳಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಖಾಸಗಿ ವಾಹನಗಳಿಗೆ ಸೂಕ್ತವಾದ ಪಾರ್ಕಿಂಗ್ ಸ್ಥಳವನ್ನು ಗುರುತಿಸಿ ಖಾಸಗಿ ವಾಹನಗಳ ಮಾಲೀಕರಿಗೆ ಪಾರ್ಕಿಂಗ್ ಗೆ ಅನುವುಮಾಡಿಕೊಡಿ. ದೂರದ ಊರಿನಲ್ಲಿ ಕೆಲಸ ಮಾಡುವವರು ಮತ್ತು ದೂರದ ಜಿಲ್ಲೆಗಳಿಗೆ ಆಸ್ಪತ್ರೆಗಳಿಗೆ ತೆರಳಲು ಸಾರ್ವಜನಿಕರು ಮುಂಜಾನೆಯೇ ತಮ್ಮ ವಾಹನಗಳನ್ನು ಮೂಡಿಗೆರೆಯ ಪಟ್ಟಣದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಾರೆ.ಅವರು ತಮ್ಮ ಕೆಲಸಗಳನ್ನು ಮುಗಿಸಿ ಬರುವಾಗ ತಡರಾತ್ರಿ ಆಗಿರುತ್ತದೆ ಅವರು ಬರುವವರೆಗೂ ತಮ್ಮ ವಾಹನಗಳಿಗೆ ಯಾವುದೇ ರೀತಿಯ ಭದ್ರತೆಯು ಕೂಡ ಇರುವುದಿಲ್ಲ ಆದುದರಿಂದ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒಂದೇ ಅದು ಸೂಕ್ತ ಪಾರ್ಕಿಂಗ್ ವ್ಯವಸ್ಥೆ.

✍🏻ಬರಹ ಕೃಪೆ.✍🏻
ಸಿ.ಎಲ್.ಪೂರ್ಣೇಶ್
ಚಕ್ಕುಡಿಗೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




