“ಸಂಸ್ಕಾರದ ನೇಮಿ’ರಾಜ’.”
1 min read
ಜಪ್ಪದಕಲ್ಲು ರೆಸಾರ್ಟ್ ವತಿಯಿಂದ ನೆರವಿನಹಸ್ತ ಘೋಷಣೆ.

ಚಕ್ಕುಡಿಗೆ ದಿ|| ಮೊಗಣ್ಣಗೌಡ ಮತ್ತು ದಿ|| ಹೊವಮ್ಮ ಅವರ ನೆನಪಿಗಾಗಿ.

ಚಕ್ಕುಡಿಗೆ ದಿ|| ಮೊಗಣ್ಣಗೌಡ ಮತ್ತು ಹೊವಮ್ಮರವರ ಸ್ಮರಣಾರ್ಥವಾಗಿ ಇವರ ಮೊಮ್ಮಗ ಜಪ್ಪದಕಲ್ಲು ರೆಸಾರ್ಟ್ ಮಾಲೀಕರಾದ ಶ್ರೀಯುತ ಸಿ.ಆರ್.ನೇಮಿರಾಜ್ ರವರು ದಿನಾಂಕ 07/09/2023ರ ಗುರುವಾರದಂದು ಹೆಗ್ಗರವಳ್ಳಿಯ ಸೈಟ್ ಮನೆಯಲ್ಲಿ ದಿನಾಂಕ 06/09/2023ರ ಬುಧವಾರದಂದು ಮೃತರಾದ ಕಿಟ್ಟು ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನಗಳನ್ನು ಸಲ್ಲಿಸಿ ಅವರ ಮನೆಯಲ್ಲಿಯೇ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡು ಚಕ್ಕುಡಿಗೆ ಮತ್ತು ಹೆಗ್ಗರವಳ್ಳಿ ಗ್ರಾಮಗಳಲ್ಲಿ ಯಾವುದೇ ಜನಾಂಗದ ಬಡವ ಬಲ್ಲಿದವರು ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಮೃತರಾದಲ್ಲಿ ಜಪ್ಪದಕಲ್ಲು ರೆಸಾರ್ಟ್ ವತಿಯಿಂದ ಮೃತರಾದ ದಿನದಂದೆ ಅಂತಿಮ ಸಂಸ್ಕಾರಕ್ಕೆ ರೂ 5000/- ರೂಪಾಯಿಗಳನ್ನು ನೆರವು ನೀಡಲಾಗುವದು ಎಂದು ಗ್ರಾಮಸ್ಥರುಗಳ ಸಮ್ಮುಖದಲ್ಲಿ ಘೋಷಣೆ ಮಾಡಿದ್ದೂ, ಗುರುವಾರದಂದು ಕಿಟ್ಟು ಅವರ ಅಂತಿಮ ಸಂಸ್ಕಾರಕ್ಕೆ 5000 ಸಾವಿರ ರೂಪಾಯಿಗಳನ್ನು ಕೊಡುವುದರ ಮೂಲಕ ನೆರವಿನ ಹಸ್ತಕ್ಕೆ ಚಾಲನೆ ನೀಡಿದರು.

ಯಾವುದೊ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಮರಣ ಸಾಂತ್ವನಕ್ಕೆ ಸಹಾಯಧನ ನೀಡುತ್ತಿದ್ದದ್ದು ನಾವು ನೋಡಿದ್ದೇವೆ.


ಆದರೆ ಊರಿನ ಮುಖಂಡರುಗಳು ರೆಸಾರ್ಟ್ ಮಾಲೀಕರು ಅಂತಿಮ ಸಂಸ್ಕಾರಕ್ಕೆ ಹಣ ನೀಡುತ್ತಿರುವದನ್ನು ನೋಡಿದ್ದು ಕೇಳಿದ್ದು ಇದೇ ಮೊದಲು. ಅದೇನೆ ಆಗಿರಲಿ ಕಷ್ಟ ಕಾಲಕ್ಕೆ ಮಿಡಿದ ಹೃದಯ ನೇಮಿರಾಜ್ ರವರದ್ದು.





ಕಾರಣ ಇವರ ಹೆಸರಲ್ಲೇ ರಾಜ್ ಇದ್ದಾರೆ. ಇಷ್ಟೇ ಅಲ್ಲಾ ಮುಂದಿನ ದಿನಗಳಲ್ಲಿ ಜಪ್ಪದಕಲ್ಲು ರೆಸಾರ್ಟ್ ವತಿಯಿಂದ ಮತ್ತಷ್ಟು, ಮೊಗದಷ್ಟು ಮಹತ್ವದ ಯೋಜನೆಗಳು ಇದ್ದು ಅವೆಲ್ಲವು ಮುಂಬರುವ ದಿನಗಲ್ಲಿ ಕಾರ್ಯರೂಪಕ್ಕೆ ಬಂದು ಇ ಜಪ್ಪದಕಲ್ಲು ರೆಸಾರ್ಟ್ ಕರ್ನಾಟಕದಲ್ಲೇ ಮುಗಿಲೆತ್ತರಕ್ಕೆ ಬೆಳೆದು ಇನ್ನಷ್ಟು ಸೇವೆಯನ್ನು ಮಾಡಲು ನಮ್ಮೂರ ಗ್ರಾಮದ ದೇವಾನು ದೇವತೆಗಳು ನಿಮ್ಮನ್ನು ಅನುಗ್ರಹಿಸಲಿ.ಗ್ರಾಮಸ್ಥರುಗಳ ಪರವಾಗಿನಿಮಗಿದೋ ಧನ್ಯವಾದಗಳು.
ಬರಹ ಕೃಪೆ.
ಸಿ. ಎಲ್. ಪೂರ್ಣೇಶ್.
ಚಕ್ಕುಡಿಗೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




