लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ,ಚಿಕ್ಕಮಗಳೂರು ತಾಲ್ಲೂಕಿನ,ಆಲ್ದೂರು ಸಮೀಪದ ವಸ್ತಾರೆ ಹೋಬಳಿಯ ನಾಡಕಚೇರಿಯಲ್ಲಿ ರಾಜಸ್ವ ನಿರೀಕ್ಷಕರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಜನಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ವಸ್ತಾರೆ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ನಂತರ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ರಾಜಸ್ವ ನಿರೀಕ್ಷಕ ರವಿಕುಮಾರ್ ವಸ್ತಾರೆ ಗ್ರಾಮಕ್ಕೆ ಬಂದು ನಾಲ್ಕು ವರ್ಷಗಳು ದಾಟಿದ್ದು, ಸಾರ್ವಜನಿಕರ ಕೆಲಸಗಳನ್ನು ನಿಗದಿತ ಸಮಯಕ್ಕೆ ಪೂರ್ತಿಗೊಳಿಸುತ್ತಿಲ್ಲ . ಕೂಲಿ ಕಾರ್ಮಿಕರು ಮತ್ತು ರೈತರಿಗೆ ಸಣ್ಣ ಪುಟ್ಟ ಕೆಲಸಗಳಿಗೂ ತಿಂಗಳುಗಟ್ಟಲೆ ಅಲೆದಾಡಿಸುತ್ತಿದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿ, ತಹಶೀಲ್ದಾರ್ ಸುಮಂತ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಸುಮಂತ್, ‘ದೂರಿನ ಆಧಾರದಲ್ಲಿ ಕಾನೂನಿನ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಕೋರಿ ಜಿಲ್ಲಾಧಿಕಾರಿಗೆ ವರದಿ ತಲುಪಿಸಲಾಗುವುದು’ಎಂದು ತಿಳಿಸಿದರು.
ಉಪ ತಹಶೀಲ್ದಾರ್ ಫರ್ದಾನ ಮಹ್ತಾಬ್, ಡಾ.ಬಿ.ಆರ್.ಅಂಬೇಡ್ಕರ್ ಜನಜಾಗೃತಿ ವೇದಿಕೆ ಅಧ್ಯಕ್ಷ ಹೆಡದಾಳು ಕುಮಾರ್, ಉಪಾಧ್ಯಕ್ಷ ಹುಣಸೆಮಕ್ಕಿ ಲಕ್ಷ್ಮಣ್, ಗೌರವಾಧ್ಯಕ್ಷ ಬಾಚಿಗನಹಳ್ಳಿ ಪದ್ಮಯ್ಯ, ಕಾರ್ಯದರ್ಶಿ ಕೃಷ್ಣ ಪ್ರಸಾದ್, ಮುಖಂಡರಾದ ಮೈಲಿಮನೆ ಕೃಷ್ಣಮೂರ್ತಿ, ನವರಾಜು ಎಚ್, ಕಠಾರದಹಳ್ಳಿ ಗಣೇಶ್ ಮೂರ್ತಿ, ಚಂದ್ರಶೇಖರ್ ಪುರಿ, ಹಾಂದಿ ರಮೇಶ್, ಚೆನ್ನಗೊಂಡನಹಳ್ಳಿ ಜಗದೀಶ್, ನೊಜ್ಜೆಪೇಟೆ ಜಗದೀಶ್, ಕೂದುವಳ್ಳಿ ಸತೀಶ್, ಪಿ.ಎಸ್.ಐ.ಅಕ್ಷತಾ ಕೆ.ಪಿ.,ಎ.ಎಸ್.ಐ.ಬಸವರಾಜು ಇದ್ದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *