“76ನೇ ಸ್ವಾತಂತ್ರ್ಯ ದಿನಾಚರಣೆಯಲ್ಲೊಂದು ಆಸ್ಪತ್ರೆಗೆ ವೀಲ್ ಚೇರ್ ಕೊಡುಗೆ.”
1 min read
ದಿನಾಂಕ 15/08/2023ರ ಮಂಗಳವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಎಂ.ಜಿ.ಎಂ.ಆಸ್ಪತ್ರೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು.
ಮಾಜಿ ಸಚಿವರಾದ ಮೋಟಮ್ಮ ಅವರು ಧ್ವಜಾರೋಹಣ ನೆರವೇರಿಸಿ ದೇಶಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 76 ವರ್ಷಗಳು ತುಂಬಿದ್ದು ಸ್ವಾತಂತ್ರ್ಯ ದಿನಾಚರಣೆ ಬರಿಯ ದಿನಾಚರಣೆ ಆಗಬಾರದು ಇದು ಪ್ರತಿಯೊಂದು ಮನೆಯಲ್ಲಿ ಆಚರಿಸುವಂತಾಗಬೇಕು ಎಂದರು.

ಎಂ.ಜಿ.ಎಂ.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಶಾಂಭವಿ ಅವರು ಮಾತನಾಡಿ ಸ್ವಾತಂತ್ರ್ಯವನ್ನು ಪಡೆಯಲು ಎಷ್ಟೋ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನದ ವರ ಇದನ್ನು ಮತ್ತೆ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದರು.


ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕಿನ ಅಂಜುಮನ್ ಸಂಸ್ಥೆಯಿಂದ ಕಾರ್ಯದರ್ಶಿಗಳಾದ ಝಿಯಾವುಲ್ಲಾ ಅವರ ಭಾವ ದಿ.ಹಮೀದ್ ಖಾನ್( ಆರೋಗ್ಯ ಇಲಾಖೆಯ ನಿವೃತ್ತ ಚಾಲಕ) ಅವರ ನೆನಪಿನಲ್ಲಿ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಕೊಡುಗೆಯಾಗಿ ವೀಲ್ ಚೇರ್ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಂ.ಜಿ.ಎಂ.ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು,ನೌಕರರು ಮತ್ತು ಝಿಯಾವುಲ್ಲಾ ಅವರ ಕುಟುಂಬದವರು,ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಜಿ.ಸುರೇಂದ್ರ,ಬಿ.ಎಸ್.ಜಯರಾಮ್, ಸಮಾಜ ಸೇವಕರಾದ ಅಬ್ದುಲ್ ರೆಹಮಾನ್,ಕಾಂಗ್ರೆಸ್ ಯುವ ಮುಖಂಡ ಬದ್ರುದ್ದೀನ್,ಪಟ್ಟಣ ಪಂಚಾಯಿತಿ ಸದಸ್ಯ ಹಂಝ,ಸುರೇಶ್ ಜೈನ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.