“ಬಂಪರ್ ಫಸಲಿನ ಕನಸು ನುಚ್ಚುನೂರು.”
1 min read
ಚಿಕ್ಕಮಗಳೂರು ಜಿಲ್ಲೆಯ,ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ಕಪ್ಪು ಕೊಳೆ ರೋಗ ಹೆಚ್ಚಾಗಿದ್ದು ಕಾಫಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಕಾಫಿ ಬೆಳೆ ಗಗನಕ್ಕೆ ಏರಿದ ಸಂತಸ ಅನುಭವಿಸುವ ಮುನ್ನವೇ ಕಾಫಿ ಫಸಲಿಗೆ ಕಪ್ಪು ಕೊಳೆ ರೋಗ ತಗುಲಿದ್ದು ಬೆಳೆಗಾರರ ಮುಖದಲ್ಲಿ ಬೇಸರ ತಂದಿದೆ.

50 ಕೆಜಿ ತೂಕದ ರೋಬೋಸ್ಟ ಕಾಫಿಗೆ ಸದ್ಯ 6,500 ಸಾವಿರದ ವರೆಗೆ ಧಾರಣೆ ಇದ್ದು ಕಾಫಿಗೆ ಉತ್ತಮ ಬೆಲೆ ಇರುವುದರಿಂದ ಬೆಳೆಗಾರರು ಬೇಸಿಗೆಯಲ್ಲಿ ಸಾಕಷ್ಟು ಖರ್ಚು ಮಾಡಿ ನೀರಾವರಿ ಕಲ್ಪಿಸಿ ದುಬಾರಿ ಗೊಬ್ಬರ ಬಳಸಿ ತೋಟ ನಿರ್ವಹಣೆ ಮಾಡಿದ್ದಾರೆ.ಆದರೆ ಈಗ ಅನೇಕ ತೋಟಗಳಲ್ಲಿ ಕಪ್ಪು ಕೊಳೆ ಬಾಧೆ ಕಂಡು ಬಂದಿದೆ ಇದರಿಂದ ಫಸಲಿನ ಜೊತೆಗೆ ಆದಾಯದಲ್ಲಿ ಗಣನೀಯ ಕಡಿತವಾಗಲಿದೆ ಈ ಬಾರಿ ಜೂನ್ ತಿಂಗಳಲ್ಲಿ ಕನಿಷ್ಠ ಮಳೆಯಾಗಿದ್ದರಿಂದ ಕಾಫಿ ಕಾಯಿಗಳ ಗಾತ್ರ ದೊಡ್ಡದಾಗಿತ್ತು ಉತ್ತಮ ಫಸಲು ಕೂಡ ಇತ್ತು ಇದೀಗ ಜುಲೈ ತಿಂಗಳ ಮಳೆಯ ಒಡೆತಕ್ಕೆ ಸಿಕ್ಕಿ ಕಾಫಿ ಮಿಡಿ ಉದುರುತ್ತಿವೆ ಎಂದು ಬೆಳೆಗಾರರದ ನವೀನ್ ಕಳಕೋಡು,ಸುಧೀರ್ ಗೌಡ ಅಬ್ಬು ಗುಡಿಗೆ ಅವರು ಬೇಸರದಿಂದ ಹೇಳಿದರು.
ಕಳೆದ ಮೂರು ವರ್ಷಗಳಿಂದ ಧಾರಾಕಾರ ಮಳೆ ಆಗುತ್ತಿದ್ದು ಅಡಿಕೆ ಗಿಡಗಳಿಗೂ ಈ ವರ್ಷ ವೃದ್ಧಿಸಿದ ಕಾಫಿಕಾಯಿ ಗೊಂಚಲಿಗೂ ಹಾನಿ ಮಾಡಿವೆ ಜುಲೈ ತಿಂಗಳಲ್ಲಿ ಕಳಸ ತಾಲ್ಲೂಕಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ 42 ಇಂಚು ಮಳೆಯಾಗಿದೆ. ಕಳಕೋಡು,ಸಂಸೆ,ಹಿರೇಬೈಲ್ ಹಾಗೂ ಹಲವು ಪ್ರದೇಶದಲ್ಲಿ ಇದು 50 ಇಂಚು ದಾಟಿದೆ.
ಮೇ ಮತ್ತು ಜೂನ್ ತಿಂಗಳಲ್ಲಿ ಮಳೆ ಇಲ್ಲದೆ ಗಿಡಗಳಿಗೆ ಗೊಬ್ಬರ ಪೂರೈಸುವುದೇ ಕಷ್ಟ ಆಗಿತ್ತು ಇದರಿಂದ ಗಿಡಗಳಲ್ಲಿ ಶಕ್ತಿ ಸಾಲದೇ ಈಗ ಫಸಲನ್ನು ಉದುರಿಸುತ್ತಿದೆ ಕೊಳೆಕಾಯಿ ಜೊತೆಗೆ ಹಸಿರು ಕಾಯಿ ಕೂಡ ನೆಲಕ್ಕೆ ಉದುರುತ್ತಿದೆ.
ಶೇ 20ರಷ್ಟು ಬೆಲೆ ನಷ್ಟ ಆಗಬಹುದು ಎಂದು ನವೀನ್ ಕಳಕೋಡು ಹೇಳಿದರು.
ಮಳೆ ಬಿಡುವು ನೀಡಿದ್ದು, ಈಗಾಗಲೇ ಬಹಳಷ್ಟು ಫಸಲು ನೆಲಕ್ಕೆ ಉದುರಿದ್ದು ಬೆಳೆಗಾರರ ಬಂಪರ್ ಫಸಲಿನ ಕನಸು ನುಚ್ಚುನೂರಾಗಿದೆ ಎಂದು ಕೃಷಿಕರಾದ ರತ್ನವರ್ಮ ಜೈನ್ ಮತ್ತು ಹರ್ಷೇಂದ್ರ ಜೈನ್ ಹಾಗೂ ಕೇಶವ ರತ್ನ ರಾಜ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.