“ನಿಧನ ವಾರ್ತೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಪಟ್ಟಣದ ಛತ್ರಮೈದಾನ ನಿವಾಸಿ ಹಾಗೂ ಕರ್ನಾಟಕ ಕ್ಯಾಂಟೀನ್ ಮಾಲೀಕರಾದ ಅಬ್ದುಲ್ ಖಾದರ್ (70ವರ್ಷ) ಇವರು ಇಂದು (ದಿನಾಂಕ 05/08/2023ರ ಶನಿವಾರದಂದು) ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತರು ಅನೇಕ ವರ್ಷಗಳಿಂದ ಪಟ್ಟಣದ ಜೆ ಎಂ ರಸ್ತೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು.ಇವರು ಪತ್ನಿ,ಒಂದು ಗಂಡು ಮತ್ತು ಎರಡು ಹೆಣ್ಣುಮಕ್ಕಳು,ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರು ಜನಾನುರಾಗಿಯಾಗಿದ್ದು ಪ್ರಸ್ತುತ ಮೂಡಿಗೆರೆಯ ಬದ್ರೀಯ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಮೃತರ ಅಗಲಿಕೆಗೆ ಇವರ ಗೆಳೆಯರ ಬಳಗ ಮತ್ತು ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.
ಇವರ ಅಂತ್ಯಕ್ರಿಯೆಯು ಇಂದು (ದಿನಾಂಕ 05/08/2023ರ ಶನಿವಾರದಂದು) ರಾತ್ರಿ ಸುಮಾರು 10ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.