“ಸಾಂತ್ವನ ಮತ್ತು ಚೆಕ್ಕಿನ ಆದೇಶ.”
1 min read
ಇತ್ತೀಚಿಗೆ ಬಾರಿ ಮಳೆಯಿಂದಾಗಿ ಮೂಡಿಗೆರೆ ಕ್ಷೇತ್ರದ ಕಸಬಾ ಹೋಬಳಿಯ ದಾರದಹಳ್ಳಿ ಗ್ರಾಮದ ಶ್ರೀಮತಿ ದೇವಮ್ಮ ಇವರು ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮರಣ ಹೊಂದಿರುತ್ತಾರೆ.
22/07/2023ರಂದು ಮಾನ್ಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮರವರು ಭೇಟಿ ಮಾಡಿ,ಅವರ ಮನೆಯವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

ಇದೆ ಸಂದರ್ಭದಲ್ಲಿ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ಇವರ ಪ್ರಯುತ್ನದಿಂದಾಗಿ ಸರ್ಕಾರದಿಂದ ಮೃತರಿಗೆ ಮಂಜೂರಾದ ಐದು ಲಕ್ಷ ರೂ. ಗಳ ಚೆಕ್ ನ ಆದೇಶ ಪ್ರತಿಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಾದ ಶ್ರೀ ರಾಜೇಶ್, ಮೂಡಿಗೆರೆ ತಹಸೀಲ್ದಾರ್ ಶ್ರೀ ತಿಪ್ಪೇಸ್ವಾಮಿ, ಕಂದಾಯ ಅಧಿಕಾರಿಗಳು, ಇನ್ನಿತರೆ ಅಧಿಕಾರಿಗಳು ಹಾಗೂ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಂದ್ರ. ಪಟ್ಟಣ ಪಂಚಾಯತ್ ಸದಸ್ಯರಾದ ರಮೇಶ್ ಹೊಸಕೆರೆ ,ಎಂ. ಎನ್. ಅಶ್ವಥ್. ಮಾಕೋನಹಳ್ಳಿ, ಶಿವಕುಮಾರ್ ಕಾಂಗ್ರೆಸ್ ಕಾರ್ಯದರ್ಶಿ, ಜಯರಾಮ್ ಕೆಸವಳಲು, ತಾ. ಪ. ಮಾಜಿ ಅಧ್ಯಕ್ಷರು,
ಮಯೂರ್ ದಾರದಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ಸುಧೀರ್ ದಾರದಹಳ್ಳಿ ಪ. ಜಾತಿ ವಿಭಾಗದ ಅಧ್ಯಕ್ಷರು, ರಾಮು ಕೆಸವಳಲು, ರಮೇಶ್ ಕಡಿದಾಳ್, ದೀಪು ಕಡಿದಾಳ್, ವಿಜಯ.ಕೆಸವಳಲು., ಗೋಪಾಲ ದಾರದಹಳ್ಳಿ ಮತ್ತು ಶ್ರೀಮತಿ ದೇವಮ್ಮ ಇವರ ಮನೆಯವರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











