“ಭರವಸೆಯ ಶಾಸಕರಿಗೊಂದು ಸಾಹಿತಿಯ ಪತ್ರ”
1 min read
ನಿಮ್ಮ ಇಂದಿನ ವಿಧಾನ ಸಭಾ ಕಲಾಪದಲ್ಲಿ ಮೊದಲ ಬಾರಿಗೆ ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸಿದ್ದು ನೋಡಿ ಖುಷಿಯಾಯ್ತು.ಕುಡಿಯುವ ನೀರಿನಬಗ್ಗೆ ಮಾತಾಡಿದ್ರಿ.
ಹಾಗೇಯೆ ಮೂಡಿಗೆರೆ ತಾಲೂಕಿನ ಹಲವಾರು ಹಳ್ಳಿಯಲ್ಲಿ ಅತಿದೊಡ್ಡ ಸಮಸ್ಯೆ ಯಾಗಿರುವ ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿ ಕಾರ್ಮಿಕರು ರೈತರು ಬೆಳೆ ಬೆಳೆಯುವುದನ್ನು ಬಿಟ್ಟಿದ್ದಾರೆ.ಆನೆ, ಕಾಡುಕೋಣ, ಕಾಡುಹಂದಿ, ಮಂಗ, ಕಡವೆ, ನವಿಲುಗಳು ಬೆಳೆದ ಬೆಳೆಗಳನ್ನು ನಾಶಮಾಡುತ್ತಿವೆ. ಆನೆಗಳಂತೂ ಯಾವ ಬೆಳೆಯನ್ನು ಬಿಡದೆ ನಾಶಮಾಡುತ್ತಿವೆ.ಭತ್ತ ಮತ್ತು ಏಲಕ್ಕಿ ಬೆಳೆಯುವ ಭಾಗವಾದ ಭೈರಾಪುರ, ಹೊಸಕೆರೆ, ಹೇರಿಕೆ, ಸತ್ತಿಗನಹಳ್ಳಿ, ಊರುಬಗೆ, ಹೊಸಹಳ್ಳಿ, ಮೇಕನಗದ್ದೆ, ಬಕ್ಕಡಿ,ಸಾಲಿಗೆರೆ, ಹೊನ್ನೆಕೂಲು, ಗೌಡಹಳ್ಳಿ.ಗುತ್ತಿ~ ಗುತ್ತಿಹಳ್ಳಿ ತ್ರಿಪುರ ಮುಂತಾದ ಊರುಗಳ ಸಾವಿರಾರು ಹೆಕ್ಟೇರ್ ಗದ್ದೆ ಇಂದು ಪಾಳು ಬಿದ್ದಿವೆ.ಮೊದಲು ಎಲ್ಲರಿಗೂ ಅನ್ನ ನೀಡುತ್ತಿದ್ದ ರೈತರೆಲ್ಲರೂ ಇಂದು ಅಂಗಡಿ ಯಿಂದ ಅಕ್ಕಿ ತಂದು ತಿನ್ನುವ ಪರಿಸ್ಥಿತಿ ಬಂದಿದೆ. ಏಲಕ್ಕಿ ತೋಟಗಳು ಪಾಳುಬಿದ್ದಿವೆ. ಕಾಫಿ ಮಾಡಿದರೂ ಕಾರ್ಮಿಕರ ಸಮಸ್ಯೆ ಜೊತೆಗೆ ಅತಿವೃಷ್ಟಿಯಿಂದ ಬಂದ ಫಸಲೂಕೂಡಾ ಕೈಗೆ ಸಿಗುತ್ತಿಲ್ಲ.ಹೀಗಿರುವಾಗ ಕಾಡುಪ್ರಾಣಿಗಳ ಕೃತ್ಯ ದಿಂದ ಬೆಳೆನಾಶದಿಂದ ಮನುಷ್ಯರು ಬದುಕುವುದಾದರೂ ಹೇಗೆ? ಅವರ ಜೀವನಕ್ಕೆ ಅರ್ಥಿಕ ಮೂಲವಾದರೂ ಯಾವುದು? ಮುಂದೆ ಅಕ್ಕಿ ಕೊಳ್ಳಲು ಸಾಧ್ಯವಿಲ್ಲ. ಎಕರೆ ಲೆಕ್ಕದಲ್ಲಿ ಆಸ್ತಿಯಿದ್ದರೂ ಲೆಕ್ಕಕ್ಕೆ ಮಾತ್ರವಾಗಿದೆ.ರೈತರ ಬದುಕು ದುಸ್ತರವಾಗಿದೆ.ಆದ್ದರಿಂದ ತಾವು ಸರಕಾರದ ಗಮನ ಸೆಳೆದು ಮುಖ್ಯಮಂತ್ರಿಗಳ ವಿಶೇಷವಾಗಿ ಗಮನಕ್ಕೆ, ತಂದು ಅರಣ್ಯ ಇಲಾಖೆಯ ಜೊತೆ ಚರ್ಚಿಸಿ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಡಬೇಕಾಗಿ ಸಮಸ್ತ ಮೂಡಿಗೆರೆ ತಾಲ್ಲೂಕಿನ ಜನತೆಯ ಪರವಾಗಿ ಮನವಿ
ಬರಹ ಕೃಪೆ.

ಉಮೇಶ್ ಹೊಸಹಳ್ಳಿ.
ಸಾಹಿತಿಗಳು,ಉಪನ್ಯಾಸಕರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್,ಅವಿನ್ ಟಿವಿ.
9448305990.