“ರಸ್ತೆ ಬದಿಯಲ್ಲಿ ಒಣಗಿ ನಿಂತಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಕರವೇ ಕಾರ್ಯಕರ್ತರಿಂದ ಮನವಿ.”
1 min read
ಶನಿವಾರಸಂತೆ ಹೋಬಳಿಗೆ ಸೇರಿದ ರಾಜ್ಯ ಹೆದ್ದಾರಿಯಲ್ಲಿ ಇರುವ ಹೆಗ್ಗಳ ಗ್ರಾಮದ ರಸ್ತೆ ಬದಿಯಲ್ಲಿ ದೊಡ್ಡ ಮರ ಒಂದು ಒಣಗಿ ನಿಂತಿರುತ್ತದೆ ಇದರ ಬದಿಯಲ್ಲಿ ಶಾಲೆ ಮಕ್ಕಳು ವೃದ್ಧರು ಹಾಗೂ ಜನ ವಸತಿ ಪ್ರದೇಶವಾಗಿರುವುದರಿಂದ ಇಲ್ಲಿ ಜನರು ಹೆಚ್ಚಿನದಾಗಿ ತಿರುಗಾಡಿಕೊಂಡಿರುತ್ತಾರೆ ಹಾಗೂ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ತೊಂದರೆ ಉಂಟಾಗುತ್ತಿದ್ದು ಹಾಗಾಗಿ ಈ ಮರದ ಕೊಂಬೆಗಳು ಈಗಾಗಲೇ ಒಣಗಿ ಬೀಳುವ ಹಂತದಲ್ಲಿದೆ ಜನರಿಗೆ ತೊಂದರೆಯಾಗುವ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಆಗುವ ಕಾರಣದಿಂದ ಬೇಗನೆ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಒಣಗಿ ನಿಂತಿರುವ ಮರಗಳನ್ನು ತೆರವುಗೊಳಿಸದೆ ಹೋದಲ್ಲಿ ಮುಂದೆ ಈ ಮರಗಳಿಂದ ಯಾರಿಗಾದರೂ ಹಾನಿ ಸಂಭವಿಸಿದ್ದೆ ಆದರೆ ಇದಕ್ಕೆ ಅರಣ್ಯ ಇಲಾಖೆ ಜವಾಬ್ದಾರಿ ಆಗಿರುತ್ತದೆ ಹಾಗೂ ಶನಿವಾರ ಸಂತೆಯಿಂದ ಸೋಮವಾರಪೇಟೆ ಹೋಗುವ ರಸ್ತೆ ಉದ್ದಕ್ಕೂ ತುಂಬಾ ಮರಗಳು ಒಣಗಿ ನಿಂತಿರುತ್ತದೆ ಅವುಗಳನ್ನು ಸಹ ತೆರವುಗೊಳಿಸುವಂತೆ ತಿಳಿಸಿದರು.
ಬರಹ ಕೃಪೆ.
ಫ್ರಾನ್ಸಿಸ್ ಡಿಸೋಜ
ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ.9449255831.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.