“ಕಸದೊಳಗೆ ಮುಳುಗಿದ ಪಟ್ಟಣ ಪಂಚಾಯಿತಿ..”
1 min read
ಮೂಡಿಗೆರೆ ಬೇಲೂರು ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಹಾಕಿ ಗಬ್ಬೆದ್ದ ಪಟ್ಟಣ ಪಂಚಾಯಿತಿ ಎಂದು ತೊರಿಸಿ ಕೊಟ್ಟಿದೆ.ಕಸವನ್ನು ಸರಿಯಾದ ವಿಲೇವಾರಿ ಮಾಡದೆ ಸಬೂಬು ಹೇಳುವ ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು.
ಪ.ಪಂ ಸದಸ್ಯರ ಮನೆಯ ಕೂಗಳತೆಯಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ.ಸಾರ್ವಜನಿಕರು ಕಸವನ್ನು ತಮ್ಮ ಮನೆಯ ಮುಂದೆ ಬರುವ ಗಾಡಿಗೆ ಹಾಕುವುದನ್ನು ಬಿಟ್ಟು ಬೆಳಿಗ್ಗೆ ಐದು ಗಂಟೆಯಿಂದ ತಮ್ಮ ವಾಹನದಲ್ಲಿ ತಂದು ಈ ಜಾಗದಲ್ಲಿ ಹಾಕುತ್ತಾರೆ.

ಬೆಳಗಿನ ವಾಯು ವಿಹಾರಕ್ಕೆ ತೆರಳುವವರಿಗೆ ಕಸದ ಗಬ್ಬು ನಾತ. ಇನ್ನೊಂದೆಡೆ ನಾಯಿಗಳ ಕಾಟ.ಮತ್ತು ಬೀದಿ ದನಗಳ ಕಾಟ ನಿರಂತರವಾಗಿದೆ.ಆರೊಗ್ಯವಂತ ಜನರು ವಾಯುವಿಹಾರಕ್ಕೆ ತೆರಳಿ ಖಾಯಿಲೆಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಪಟ್ಟಣವನ್ನು ಸರಿಯಾಗಿ ನಿರ್ವಹಿಸಿ ಶುಚಿಯಾಗಿಡಲು ಸಾಧ್ಯವಾಗದ ಪಟ್ಟಣ ಪಂಚಾಯಿತಿ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಕಸ ವಿಲೇವಾರಿಯಲ್ಲಿ ಸಾರ್ವಜನಿಕರಿಗೆ ಮೂರು ಕಾಸಿನ ಜವಾಬ್ದಾರಿ ಇಲ್ಲದಿರುವುದು ವಿಪರ್ಯಾಸವೆ ಸರಿ.ಪಟ್ಟಣದ ಪ್ರಜೆಗಳಿಗೂ ಸಹ ಜವಬ್ದಾರಿ ಇದೆ ಎನ್ನುವುದನ್ನು ಮರೆಯಬಾರದು.
ಪಟ್ಟಣ ಪಂಚಾಯಿತಿಯ ಸೌಲಭ್ಯ ಪಡೆದ ತಾವುಗಳಿಗೆ ತಮ್ಮ ಪಟ್ಟಣದ ಶುಚಿತ್ವಕ್ಕೆ ಮಹತ್ವ ಕೊಡಿ.
ಕಂದಾಯ ಮಾತ್ರ ಕಟ್ಟಿ ಸುಮ್ಮನಿರಬೇಡಿ.ಅಭಿವೃದ್ದಿ ಬಗ್ಗೆ ಧ್ವನಿ ಎತ್ತುವ ಹಕ್ಕು ಸಹ ನಿಮಗಿದೆ ಅನ್ನುವುದನ್ನು ಮರೆಯಬಾರದು.
ಪಟ್ಟಣ ಪಂಚಾಯಿತಿ ಕೂಡಲೆ ಬಿಡಾಡಿ ದನಗಳನ್ನ ಸ್ಥಳಾಂತರ ಮಾಡುವುದು ಒಳ್ಳೆಯದು.
ಬೀದಿ ನಾಯಿಗಳನ್ನು ಸಹ ಸ್ಥಳಾಂತರ ಮಾಡಬೇಕು.
ಮೂಡಿಗೆರೆ ಪಟ್ಟಣದ ಜನತೆಯ ಮತದಿಂದ ಗೆದ್ದ ಎಲ್ಲಾ ಹನ್ನೊಂದು ಸದಸ್ಯರು ಒಂದೆಡೆ ಖಾಸಗಿಯಾಗಿ ಸೇರಿ ಸಭೆ ನಡೆಸಿ ಮೂಡಿಗೆರೆ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ.
ಮೀಸಲಾತಿ ಆಧಾರದಲ್ಲಿ ಪಟ್ಟಣದ ಎಲ್ಲಾ ಕಡೆ ಸ್ಪರ್ಧೆ ಬಯಸುವ ಜನ ಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿಗೆ ಸಹಕರಿಸಿ ಎಂಬುದು ಸ್ಥಳಿಯರ ಕೂಗು.
ಭ್ರಷ್ಟಾಚಾರದದಲ್ಲಿ ಮಾತ್ರ ಸರಿಯಾಗಿ ವಿಲೆವಾರಿ ಮಾಡಿಕೊಳ್ಳುತಿದ್ದಾರೆಂದು ಬಲ್ಲ ಸಾರ್ವಜನಿಕರು ನಮ್ಮ ವಾಹಿನಿಗೆ ತಿಳಿಸಿದ್ದಾರೆ.
ಹೀಗೆ ಮುಂದುವರಿದರೆ ಜನರು ತಾಳ್ಮೆಗೆಟ್ಟು ಪಟ್ಟಣ ಪಂಚಾಯಿತಿಯ ಎದುರು ಧರಣಿ ಕೂರದೆ ಇರುವುದಿಲ್ಲ. ನೆನಪಿರಲಿ!!!…… ಪಟ್ಟಣ ಪಂಚಾಯಿತಿಯ ಅಧಿಕಾರಿಗಳೇ ಹಾಗೂ ಅಧ್ಯಕ್ಷರು ಮತ್ತು ಸದಸ್ಯರುಗಳೇ….
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.