लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಉಳ್ಳವರಿಗೆ ಭೂಮಿ ಮಾಡಿಕೊಟ್ಟ ಭ್ರಷ್ಟ ಅಧಿಕಾರಿಗಳು : ಸಂತೋಷ್ ಜಿ. ಅಗ್ರಹಾರ.

1 min read

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬೀಡು ಹೋಬಳಿಯ ಜಿ.ಅಗ್ರಹಾರ ಗ್ರಾಮದ ಸರ್ವೆ ನಂಬರ್ 565 ರಲ್ಲಿ ಗೋಮಾಳ ಮತ್ತು ನೆಡುತೋಪು ಎಂದು ದಾಖಲೆಗಳಲ್ಲಿದ್ದು, ಆ ಭೂಮಿಯನ್ನು ಜಿ.ಅಗ್ರಹಾರ ಪರಿಶಿಷ್ಟ ಜಾತಿ ಕಾಲೋನಿಯ ಗ್ರಾಮಸ್ಥರಿಗೆ ನಿವೇಶನಕ್ಕಾಗಿ ಕಾಯ್ದಿರಿಸಿಕೊಂಡು ನಿವೇಶನ ಹಂಚಿಕೆ ಮಾಡಬೇಕೆಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದರು ಆದರೆ 2015 ರಿಂದೀಚೆಗೆ 14 ಎಕರೆ ಭೂಮಿಯನ್ನು ಆ ಸಂದರ್ಭದಲ್ಲಿದ್ದ ಭ್ರಷ್ಟ ಅಧಿಕಾರಿಗಳು ಸಂಗೀತಾ ಮತ್ತು ಸುಭದ್ರಮ್ಮ ಎಂಬ ಇಬ್ಬರು ವ್ಯಕ್ತಿಗಳ ಹೆಸರಿಗೆ ಮಂಜೂರು ಮಾಡಿದ್ದಾರೆ ಎಂದು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಂತೋಷ್ ಜಿ.ಅಗ್ರಹಾರ ಕಿಡಿಕಾರಿದರು.

ಪ್ರಸ್ತುತ ಆ ಜಾಗದಲ್ಲಿ ಅರಣ್ಯ ಇಲಾಖೆಯವರು ನೆಟ್ಟು ಬೆಳೆಸಿದ ಕಾಡು ಜಾತಿಯ ಮರಗಳಿವೆ, ಆದರೆ ಪಹಣಿ ಹಾಗೂ ಇತರೆ ದಾಖಲೆಗಳಲ್ಲಿ ಕಾಫಿ & ಮೆಣಸು ಎಂದು ಬರುತ್ತಿದೆ ಜೊತೆಗೆ ಆಶ್ಚರ್ಯವೇನೆಂದರೆ ಮಂಜೂರುಮಾಡಿದ ದಾಖಲೆಗಳೇ ಇಲ್ಲದಂತಾಗಿದೆ. ಆ ಸ್ಥಳದಲ್ಲಿ ಮಂಜೂರು ಮಾಡಿಸಿಕೊಂಡ ವ್ಯಕ್ತಿಗಳು ಯಾವುದೇ ರೀತಿಯ ಕೃಷಿ ಚಟುವಟಿಕೆ ಮಾಡಿಲ್ಲ ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಮಂಜೂರಾತಿಯನ್ನು ರದ್ದುಗೊಳಿಸಿ ಆ ಭೂಮಿಯನ್ನು ಜಿ.ಅಗ್ರಹಾರ ಪರಿಶಿಷ್ಟ ಜಾತಿ ಕಾಲೋನಿಯ ಗ್ರಾಮಸ್ಥರಿಗೆ ನಿವೇಶನಕ್ಕಾಗಿ ಕಾಯ್ದಿರಿಸಬೇಕೆಂದು ನಮ್ಮ ವಾಹಿನಿಯ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುನಿಲ್ ಜಿ.ಅಗ್ರಹಾರ ಉಪಸ್ಥಿತರಿದ್ದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *