ಉಳ್ಳವರಿಗೆ ಭೂಮಿ ಮಾಡಿಕೊಟ್ಟ ಭ್ರಷ್ಟ ಅಧಿಕಾರಿಗಳು : ಸಂತೋಷ್ ಜಿ. ಅಗ್ರಹಾರ.
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬೀಡು ಹೋಬಳಿಯ ಜಿ.ಅಗ್ರಹಾರ ಗ್ರಾಮದ ಸರ್ವೆ ನಂಬರ್ 565 ರಲ್ಲಿ ಗೋಮಾಳ ಮತ್ತು ನೆಡುತೋಪು ಎಂದು ದಾಖಲೆಗಳಲ್ಲಿದ್ದು, ಆ ಭೂಮಿಯನ್ನು ಜಿ.ಅಗ್ರಹಾರ ಪರಿಶಿಷ್ಟ ಜಾತಿ ಕಾಲೋನಿಯ ಗ್ರಾಮಸ್ಥರಿಗೆ ನಿವೇಶನಕ್ಕಾಗಿ ಕಾಯ್ದಿರಿಸಿಕೊಂಡು ನಿವೇಶನ ಹಂಚಿಕೆ ಮಾಡಬೇಕೆಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದರು ಆದರೆ 2015 ರಿಂದೀಚೆಗೆ 14 ಎಕರೆ ಭೂಮಿಯನ್ನು ಆ ಸಂದರ್ಭದಲ್ಲಿದ್ದ ಭ್ರಷ್ಟ ಅಧಿಕಾರಿಗಳು ಸಂಗೀತಾ ಮತ್ತು ಸುಭದ್ರಮ್ಮ ಎಂಬ ಇಬ್ಬರು ವ್ಯಕ್ತಿಗಳ ಹೆಸರಿಗೆ ಮಂಜೂರು ಮಾಡಿದ್ದಾರೆ ಎಂದು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಂತೋಷ್ ಜಿ.ಅಗ್ರಹಾರ ಕಿಡಿಕಾರಿದರು.
ಪ್ರಸ್ತುತ ಆ ಜಾಗದಲ್ಲಿ ಅರಣ್ಯ ಇಲಾಖೆಯವರು ನೆಟ್ಟು ಬೆಳೆಸಿದ ಕಾಡು ಜಾತಿಯ ಮರಗಳಿವೆ, ಆದರೆ ಪಹಣಿ ಹಾಗೂ ಇತರೆ ದಾಖಲೆಗಳಲ್ಲಿ ಕಾಫಿ & ಮೆಣಸು ಎಂದು ಬರುತ್ತಿದೆ ಜೊತೆಗೆ ಆಶ್ಚರ್ಯವೇನೆಂದರೆ ಮಂಜೂರುಮಾಡಿದ ದಾಖಲೆಗಳೇ ಇಲ್ಲದಂತಾಗಿದೆ. ಆ ಸ್ಥಳದಲ್ಲಿ ಮಂಜೂರು ಮಾಡಿಸಿಕೊಂಡ ವ್ಯಕ್ತಿಗಳು ಯಾವುದೇ ರೀತಿಯ ಕೃಷಿ ಚಟುವಟಿಕೆ ಮಾಡಿಲ್ಲ ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಮಂಜೂರಾತಿಯನ್ನು ರದ್ದುಗೊಳಿಸಿ ಆ ಭೂಮಿಯನ್ನು ಜಿ.ಅಗ್ರಹಾರ ಪರಿಶಿಷ್ಟ ಜಾತಿ ಕಾಲೋನಿಯ ಗ್ರಾಮಸ್ಥರಿಗೆ ನಿವೇಶನಕ್ಕಾಗಿ ಕಾಯ್ದಿರಿಸಬೇಕೆಂದು ನಮ್ಮ ವಾಹಿನಿಯ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುನಿಲ್ ಜಿ.ಅಗ್ರಹಾರ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.