“ಶಿರಾಡಿಘಾಟಿ ಬಂದ್??????????.”
1 min read
ಇನ್ನೇನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್ ಆಗಲಿದೆ ಎಚ್ಚರ ಎಂದು ಮಲೆನಾಡ ರಕ್ಷಣಾ ಸೇನೆಯ ಸ್ಥಾಪಕ ಅಧ್ಯಕ್ಷರಾದ ಜಾನೇ ಕೆರೆ ಸಾಗರ್ ತಿಳಿಸಿದ್ದಾರೆ
ಹೌದು ಸ್ವಾಮಿ ಇದು ಭವಿಷ್ಯ ನುಡಿಯುತ್ತಿರುವುದಾದರೂ ಇದುವೇ ಕಹಿ ಸತ್ಯ ಎಂದಿರುವ ಅವರು ಕಳೆದ ಹಲವು ವರ್ಷದಿಂದ ಸಕಲೇಶಪುರದ ದೋಣಿಗಲ್ ನಲ್ಲಿ ಗುಡ್ಡ ಮತ್ತು ರಾಷ್ಟ್ರೀಯ ಹೆದ್ದಾರಿ ಕುಸಿಯುತ್ತಿದ್ದು ಇದುವರೆಗೆ ಯಾವುದೇ ರೀತಿಯ ಸೂಕ್ತ ಕ್ರಮ ಸರ್ಕಾರ ಆಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಗಲಿ ಕೈಗೊಂಡಿಲ್ಲ.
ಅದರ ನಡುವೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ನಿಮಿತ್ತ ಸಕಲೇಶಪುರದ ಹೃದಯ ಭಾಗವನ್ನೇ ಯಂತ್ರೋಪಕರಣಗಳ ಸಹಾಯದಿಂದ ಗುಡ್ಡಗಳನ್ನು ಬಗೆದಿರುವ ಕಾರಣ ಚಂಪಕ ನಗರ, ಆನೆಮಹಲ್ ಸುತ್ತಮುತ್ತ ಗುಡ್ಡ ಕುಸಿಯುವ ಸಂಭವ ಇದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ ಇಲ್ಲಿ ಶಾಲೆ, ಕಾಲೇಜ್ ಗೆ ತೆರಳುವ ವಿಧ್ಯಾರ್ಥಿಗಳಿಗೆ ತೊಂದರೆ ಆಗುವುದು ಕಟ್ಟಿಟ್ಟ ಬುತ್ತಿ. ಹಾಗೇ ವಾಹನ ಸವಾರರಿಗೆ ಅಪಘಾತ ಕೂಡ ಕಟ್ಟಿಟ್ಟ ಬುತ್ತಿಯೆ..! ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳ ತೀರದು. ಇನ್ನೂ ಹೇಳಲು ಹಲವಿದೆ. ನಾವು ಹೇಳಿದ ಭವಿಷ್ಯ ನಿಜವಾಗಬಾರದೆಂಬ ಆಶಯ ನಮ್ಮದು.
ಈ ಬಾರಿ ಶಿರಾಡಿ ಘಾಟ್ ಬಂದ್ ಆಗಬಾರದೆಂಬ ಆಶಯ ನಮ್ಮದು. ಅಕಸ್ಮಾತ್ ಬಂದ್ ಆದರೆ ಇದಕ್ಕೆ ಹಾಸನ ಜಿಲ್ಲಾಡಳಿತವೇ ನೇರ ಹೊಣೆ ಎಚ್ಚರ ಎಂದು ಅವರು ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










