“ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ – 2023.”
1 min read
ದಿನಾಂಕ 09/07/2023ರ ಭಾನುವಾರದಂದು 10:30ಕ್ಕೆ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಪಟ್ಟಣದ ಜೇಸಿ ಭವನದಲ್ಲಿ ವೃತ್ತಿ ಶಿಕ್ಷಣ ಕಾರ್ಯಗಾರ ನಡೆಯಲಿದ್ದು ತಾಲ್ಲೂಕಿನ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೂಡಿಗೆರೆ ಜೆಸಿಐ ಅಧ್ಯಕ್ಷೆ ಸವಿತಾ ರವಿ ನಮ್ಮ ವಾಹಿನಿಯ ಮೂಲಕ ವಿದ್ಯಾರ್ಥಿಗಳನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ನಿರ್ದೇಶಕರು ಹಾಗೂ ಸೀನಿಯರ್ ಜೆಸಿ ಸದಸ್ಯರಾದ ಜೆ.ಸಿ.ಬಿ.ಎನ್.ಮನಮೋಹನ್ ಮಾತನಾಡಿ ಈ ಕಾರ್ಯಕ್ರಮವು ಅನೇಕ ವೃತ್ತಿ ಶಿಕ್ಷಣ ಕೋರ್ಸ್ ಗಳ ಮಾಹಿತಿಯ ಕಣಜವಾಗಿದ್ದು ದ್ವಿತೀಯ ಪಿಯುಸಿಯಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಜೀವನದಲ್ಲಿ ಉತ್ತಮ ರೀತಿಯ ಸಾಧನೆಗಳನ್ನು ಮಾಡಲು ಸಹಕಾರಿ ಆಗುತ್ತದೆ ಹಾಗೂ ಪಿ.ಯು.ಸಿ.ಯ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದು ವಾಹಿನಿಯೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸೀನಿಯರ್ ಜೆಸಿ ಕಾರ್ಯದರ್ಶಿಗಳಾದ ದುಂಡುಗ ಪ್ರದೀಪ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









