“ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಭೇಟಿ ಮಾಡಿ ಮಕ್ಕಳನ್ನು ಶಾಲೆಗೆ ಕರೆತಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೇಮಂತ್ ರಾಜ್.”
1 min read
ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಚಂದ್ರಾಪುರ ಶಾಲಾ ವ್ಯಾಪ್ತಿಯ ಜನವಸತಿ ಪ್ರದೇಶವಾದ ಕೆ ಚಂದ್ರಾಪುರ ಎಸ್ಟೇಟ್ ಇಲ್ಲಿಗೆ ಉತ್ತರ ಕರ್ನಾಟಕದ ಚಿತ್ರದುರ್ಗ ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಿಂದ 30ಕ್ಕೂ ಹೆಚ್ಚು ಕುಟುಂಬಗಳು ಕಾಫಿ ತೋಟದ ಕೆಲಸಕ್ಕಾಗಿ ವಲಸೆ ಬಂದಿದ್ದು ಇಲ್ಲಿ ಶಾಲಾ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಹೇಮಂತ್ ರಾಜ್ ಅವರು ಚಿನ್ನಿಗ ಸಿ. ಆರ್. ಪಿ. ಸುನಿಲ್ ಮತ್ತು ಚಂದ್ರಪುರ ಮತ್ತು ಗಾಡಿ ಚೌಕ ಶಾಲೆಯ ಶಿಕ್ಷಕರುಗಳಾದ ಅಣ್ಣಯ್ಯ,ರಾಜಪ್ಪ ಮತ್ತು ಪಂಚಾಕ್ಷರಿ ಅವರ ತಂಡ ರಚಿಸಿ ಚಂದ್ರಪುರ ಎಸ್ಟೇಟ್ ಗೆ ದಿನಾಂಕ 30/06/2023ರ ಬೆಳಿಗ್ಗೆ ಏಳು ಗಂಟೆಗೆ ಖುದ್ದು ಭೇಟಿ ನೀಡಿದರು. ಬೆಳಗಿನ ಸಮಯವಾದ್ದರಿಂದ ಎಲ್ಲಾ ಕೂಲಿ ಕಾರ್ಮಿಕರು ನೇರ ಸಂಪರ್ಕಕ್ಕೆ ಸಿಕ್ಕಿ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೇರವಾಗಿ ಪೋಷಕರೊಂದಿಗೆ ಚರ್ಚೆ ಸಂವಾದ ನಡೆಸಿ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಮನವೊಲಿಸಿದರು.

ಎಸ್ಟೇಟ್ ನ ಮ್ಯಾನೇಜರ್ ಅವರೊಂದಿಗೆ ಚರ್ಚೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು. ಇದೇ ದಿನ ಶಾಲಾ ವೇಳೆಗೆ 10 ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ದಾಖಲು ಮಾಡಿಕೊಳ್ಳಲಾಗಿದೆ.

ಇನ್ನುಳಿದ 5 ರಿಂದ 10 ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವ ಎಲ್ಲ ಕ್ರಮ ವಹಿಸಲಾಗಿದೆ.
ಈ ಸಂದರ್ಭದಲ್ಲಿ ಚಿನ್ನಿಗ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಮಂತ್ ರವರು,ಸದಸ್ಯರಾದ ನಾಗಮ್ಮ ಹಾಗೂ ಚಂದ್ರಾಪುರದ ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರ ಶೇಕರ್ ಗ್ರಾಮಸ್ಥರಾದ ದಿನೇಶ್ ಮತ್ತು ಸುಬ್ಬಣ್ಣ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










