“ಅಂತರಾಷ್ಟ್ರೀಯ ಯೋಗ ದಿನಾಚರಣೆ.”
1 min read
ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಮೂಡಿಗೆರೆ
ಮತ್ತು
ಎಲೀಟ್ ಮೈಂಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಚಿನ್ನಿಗ – ಜನ್ನಾಪುರ
ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 21/06/2023ರ ಬುಧವಾರದಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನ ಮಾಡಲಾಯಿತು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಜಮೀಲಾ ವಹಿಸಿದ್ದರು ಹಾಗೂ ಉದ್ಘಾಟನೆಯನ್ನ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಬೃಂದಾರವರು ವೇದಿಕೆಯಲ್ಲಿ ಆಸೀನರಾಗಿದ್ದು ಗಿಡಕ್ಕೆ ನೀರನ್ನ ಹಾಕುವುದರ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ಮತ್ತು ಸರ್ವರಿಗೂ ಶುಭಾಶಯವನ್ನು ಕೋರಿದರು.


ನಂತರ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರಾದ ಶ್ರೀಮತಿ ಜಮೀಲಾ ರವರು ಯೋಗವು ಪ್ರಾಚೀನ ಕಾಲದಿoದಲೂ ಆಚರಣೆಯಲ್ಲಿದ್ದಂತಹ ಪದ್ಧತಿಯಾಗಿದೆ, ಇದರಿಂದ ದೇವಾನು ದೇವತೆಗಳು, ಋಷಿಮುನಿಗಳು ಹಾಗೂ ಸಾಧು-ಸಂತರು ತಮ್ಮ ದೇಹದ ಮತ್ತು ಮನಸ್ಸನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿಯಾಯಿತು ಎಂದು ಹೇಳುವ ಮೂಲಕ ಯೋಗದ ಮಹತ್ವ ಹಾಗೂ ಅದರಿಂದಾಗುವ ಪ್ರಯೋಜನಗಳನ್ನ ವೇದಿಕೆಯಲ್ಲಿ ಹಂಚಿಕೊಂಡರು.


ನಂತರ ಶಾಲೆಯ ದೈಹಿಕ ಶಿಕ್ಷರಾದ ಶ್ರೀಯುತ ಜಯಪಾಲ್ ರವರು ಯೋಗವನ್ನ ಯಾವ ಯಾವ ಸಮಯದಲ್ಲಿ ಮಾಡಬೇಕು, ಹೇಗೆ ಮಾಡಬೇಕು, ಯಾರು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಮಾನವ ಜನ್ಮ ಪ್ರಕೃತಿ ನಿರ್ಮಿತವಾದದ್ದು ಅದನ್ನ ನಾವು ಅರೋಗ್ಯವಾಗಿ, ಸುಂದರವಾಗಿ, ಸದೃಢವಾಗಿ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಯೋಗವನ್ನ ಮಾಡುವ ಉದ್ದೇಶ ದೇಹ ಮತ್ತು ಮನಸ್ಸನ್ನ ಕೇಂದ್ರೀಕರಿಸಿ ಮನಸ್ಸು ಚಂಚಲವಾಗುವುದನ್ನ ತಡೆಗಟ್ಟುವುದು ಹಾಗೂ ಜೀವನಕ್ಕೆ ಅಗತ್ಯವಿರುವ ವಿಷಯಗಳನ್ನ ಸಂಗ್ರಹಿಸಲು ಯೋಗದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ನಂತರ ಯೋಗ ಮಾಡುವ ಮುಂಚೆ ಸಾಮಾನ್ಯ ವ್ಯಾಯಾಮಗಳನ್ನ ಮಾಡಲಾಯಿತು ನಂತರ ಶ್ಲೋಕಗಳನ್ನ ಹೇಳುವ ಜೊತೆಯಲ್ಲಿ ಸೂರ್ಯನಮಸ್ಕಾರವನ್ನ ಮಾಡಲಾಯಿತು.



ನಂತರ ಶಾಲೆಯ ವಿಜ್ಞಾನ ಶಿಕ್ಷರಾದ ಶ್ರೀಯುತ ವಿಜೇಂದ್ರ ರವರು ಮಕ್ಕಳಿಗೆ ಮತ್ತು ಶಿಕ್ಷರಿಗೆ ಕೆಲವೊಂದು ಆಸನಗಳನ್ನ ಮಾಡುವ ಜೊತೆಗೆ ಅದರ ಪ್ರಯೋಜನಗಳನ್ನ ತಿಳಿಸಲಾಯಿತು. ನಂತರ ಪ್ರಾಣಾಯಾಮ ಮತ್ತು ಅದರ ಮಹತ್ವವನ್ನ ತಿಳಿಸಲಾಯಿತು. ನಂತರ ಪ್ರತಿಯೊಬ್ಬರೂ ಧ್ಯಾನವನ್ನ ಮಾಡುವ ಮೂಲಕ ಕಾರ್ಯಕ್ರಮವನ್ನ ಯಶಸ್ವಿಯಾಗಿ ನಡೆಸಲಾಯಿತು.


ಈ ಕಾರ್ಯಕ್ರಮದಲ್ಲಿ ಮಾರ್ಸ್ ತಂಡದ 4ಮತ್ತು7ನೇ ತರಗತಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯನ್ನ ಹಾಡುವ ಮೂಲಕ 9ನೇ ತರಗತಿ ವಿದ್ಯಾರ್ಥಿ ಪ್ರೇರಣ್ ಸರ್ವರನ್ನ ಸ್ವಾಗತಿಸಿದರು ನಂತರ 9ನೇ ತರಗತಿ ವಿದ್ಯಾರ್ಥಿ ಸಚಿನ್ ಎಲ್ಲರನ್ನು ವಂದಿಸಿದರು ಹಾಗೂ 9ನೇ ತರಗತಿ ವಿದ್ಯಾರ್ಥಿನಿಯಾದ ಅಂಷರಿ ರವರು ಕಾರ್ಯಕ್ರಮವನ್ನ ನಿರೂಪಿಸುವ ಮೂಲಕ ಯೋಗ ದಿನಾಚರಣೆಯನ್ನು ಚಂದಗಾಣಿಸಿದರು.

ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ಮಾರ್ಸ್ ತಂಡದ ಶಿಕ್ಷಕರಾದ ಶ್ರೀಯುತ ವಿಜೇಂದ್ರ, ಶ್ರೀಮತಿ ಜಯಶ್ರೀ ಮತ್ತು ಕುಮಾರಿ ನಸ್ರೀನ ರವರು ವಹಿಸಿದ್ದರು. ಅವರಿಗೆ ಎಲ್ಲ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಮತ್ತು ವಿದ್ಯಾರ್ಥಿ ನಾಯಕರುಗಳು ಹಾಗೂ ಮಕ್ಕಳೆಲ್ಲರೂ ಸಹಕರಿಸಿದರು.
ಇವರೆಲ್ಲರಿಗೂ ಶಾಲಾ ಆಡಳಿತ ಮಂಡಳಿಯ ಪರವಾಗಿ ಮತ್ತು ಮುಖ್ಯ ಶಿಕ್ಷಕರ ಪರವಾಗಿ ಧನ್ಯವಾದಗಳನ್ನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರುಗಳಾದ ಶ್ರೀಮತಿ ಮಧುರ, ಬಿಂಧು, ಅಷ್ಟಮಿ, ಅನುಪ, ಫಿಲೋಮೀನ ಪಿಂಟೋ ಗೌತಮಿ, ನಿಶಾ ಮೇಡಂ ಹಾಜರಿದ್ದರು.
ಬರಹ ಕೃಪೆ.
ಜಯಪಾಲ್ ಹೊಸಹಳ್ಳಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











