“ಸಿಇಟಿಯಲ್ಲಿ ರಾಜ್ಯಕ್ಕೆ 33 ನೇ ರ್ಯಾಂಕ್(Rank) ಪಡೆದ ಬಿ.ಯು.ದೀಕ್ಷಿತ್ ಪಟೇಲ್.”
1 min read
ಮೂಡಿಗೆರೆ ತಾಲೂಕಿನ, ಭೈರಾಪುರ ಗ್ರಾಮದ ಬಿ.ಯು.ದೀಕ್ಷಿತ್ ಪಟೇಲ್ ಅವರು ಸಿಇಟಿಯಲ್ಲಿ ರಾಜ್ಯಕ್ಕೆ 33 ನೇ ಸ್ಥಾನ ಪಡೆದಿದ್ದಾರೆ.



ಜೆಇಇ ಕಾಮನ್ ರ್ಯಾಂಕ್ ವಿಭಾಗದಲ್ಲಿ 2878 ನೇ ರ್ಯಾಂಕ್(Rank), ಒಬಿಸಿ ವಿಭಾಗದಲ್ಲಿ 543ನೇ ರ್ಯಾಂಕ್ (Rank) ಪಡೆದು ಎನ್ಐಟಿಗೆ ಅರ್ಹತೆ ಪಡೆದಿದ್ದಾರೆ. ಅಲ್ಲದೇ ಜೆಇಇ ಅಡ್ವಾನ್ಸ್ ಕಾಮನ್ ರ್ಯಾಂಕ್ (Rank) ವಿಭಾದಲ್ಲಿ 1311ನೇ ರ್ಯಾಂಕ್ (Rank), ಒಬಿಸಿ ವಿಭಾಗದಲ್ಲಿ 225ನೇ ರ್ಯಾಂಕ್ (Rank) ಪಡೆದು ಐಐಟಿಗೆ ಅರ್ಹತೆ ಪಡೆದಿದ್ದಾರೆ. ದೀಕ್ಷಿತ್ ಅವರು ಬಿ.ಡಿ.ಉದಯಕುಮಾರ್ ಹಾಗೂ ಎಂ.ಕೆ.ಕಾಮಾಕ್ಷಿ ಅವರ ಪುತ್ರರಾಗಿದ್ದಾರೆ.
ಇವರ ಸಾಧನೆಯಿಂದ ಮೂಡಿಗೆರೆ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ .ಇವರ ಮುಂದಿನ ವಿದ್ಯಾಭ್ಯಾಸ ಸುಗಮವಾಗಲಿ.ನಮ್ಮ ವಾಹಿನಿಯ ಪರವಾಗಿ ಹಾಗೂ ಮೂಡಿಗೆರೆಯ ಜನತೆಯ ಪರವಾಗಿ ಅಭಿನಂದನೆಗಳು
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











