“ಪ್ರತಿ ವಿದ್ಯಾರ್ಥಿಗೆ ಪ್ರಜಾಪ್ರಭುತ್ವದ ಅರಿವು ಅಗತ್ಯ” – ವಸಂತ್ ಹಾರ್ಗೋಡು.
1 min read
ಶ್ರೀ ವಿದ್ಯಾ ಭಾರತಿ ವಿದ್ಯಾ ಸಂಸ್ಥೆ( ರಿ ) ಬಣಕಲ್. ನಲ್ಲಿ 2023-24ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ದಿನಾಂಕ : 17 : 06 : 2023 ಶನಿವಾರದಂದು ಅರ್ಥವತ್ತಾಗಿ ನಡೆಸಲಾಯಿತು.
ಒಂದು ವಾರದಿಂದ ನಡೆದ ಚುನಾವಣ ಪ್ರಕ್ರಿಯೆಯಲ್ಲಿ ಚುನಾವಣ ಹಂತಗಳಾದ ನಾಮಪತ್ರ ಸಲ್ಲಿಕೆ. ನಾಮಪತ್ರ ವಾಪಸ್ಸು ಪಡೆಯುವುದು. ನಾಮಪತ್ರ ಪರಿಶೀಲನೆ. ಮತಪ್ರಚಾರ. ಮತದಾನ ಈ ರೀತಿಯಲ್ಲೆ ಚುನಾವಣೆ ನಡೆಸಲಾಯಿತು.

ಈ ಸಾಲಿನಲ್ಲಿ 9 ಸ್ಥಾನಗಳಿಗೆ ಒಟ್ಟು 23 ಸ್ಪರ್ಧಿಗಳು ಒಳಗೊಂಡಿದ್ದವು. ಸ್ಪರ್ಧಿಗಳು ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯನ್ನು ನೀಡಿ ಅಣಕು ಚುನಾವಣೆಯಲ್ಲಿ ಉತ್ಸಾಹದೊಂದಿಗೆ ಭಾಗವಹಿಸಿದರು.
ಶನಿವಾರ ನಡೆದ ಚುನಾವಣೆಯಲ್ಲಿ ಮತ ವಿದ್ಯಾರ್ಥಿಗಳು ತಮಗೆ ಶಾಲೆಯಿಂದ ನೀಡಲಾಗಿದ್ದ ಪತ್ರ ಬಳಸಿ ಮತದಾನ ಮಾಡಿದರು. ಮತದಾನಕ್ಕೆ ಎರಡು ಮತಗಟ್ಟೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಸುಮಾರು 200 ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಮತದಾನದ ಮೂಲಕ ಶಾಲಾ ಮಂತ್ರಿಮಂಡಲಕ್ಕೆ ನಾಯಕರನ್ನು ಚುನಾಯಿಸಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶಾಲೆಯ ಸಮಾಜ ವಿಜ್ಞಾನದ ಶಿಕ್ಷಕರಾದ ವಸಂತ್ ಹಾರ್ಗೋಡು ಮಾತನಾಡಿ ಭಾರತದ ಭವಿಷ್ಯತ್ತಿನ ಪ್ರಜೆಗಳಾದ ಪ್ರಜಾಪ್ರಭುತ್ವದ ಅರಿವು ಅಗತ್ಯವಾಗಿ ಬೇಕಾಗಿದೆ. ಶಾಲೆಗಳಲ್ಲಿ ಈ ರೀತಿಯ ಅಣಕು ಚುನಾವಣೆಯನ್ನು ಕ್ರಮಬದ್ಧವಾಗಿ ನಡೆಸುವುದರಿಂದ ಮಕ್ಕಳ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗುವುದರ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆ ಮತ್ತು ಸರ್ಕಾರದ ಜವಬ್ದಾರಿಗಳ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ.
ಹೀಗೆ ವಿದ್ಯಾರ್ಥಿ ಮಂತ್ರಿಮಂಡಲಕ್ಕೆ ಸದಸ್ಯರನ್ನು ಚುನಾಯಿಸಿದ್ದು ಅವರಿಗೆ ಸಚಿವ ಸ್ಥಾನದೊಂದಿಗೆ ಶಾಲಾ ಜವಾಬ್ದಾರಿಯನ್ನು ನೀಡಿ.ಪ್ರಮಾಣವಚನವನ್ನು ನಿಗದಿಪಡಿಸಿದ ದಿನಾಂಕದಂದು ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮಾಲತಿ.ಟಿ.ಆರ್. ಮತ್ತು ನಾಗರಾಜು.ಸಿ.
ಶಿಕ್ಷಕರಾದಭಕ್ತೇಶ್.ಮನಮೋಹನ್.ಪದ್ಮಶ್ರೀ.ಗೀತಾ.
ಲಿಂಗರಾಜು.ಲೋಕೇಶ್.ಪ್ರತಾಪ್.ಅಶ್ವಿತಾ.ರಂಜಿತಾ.
ಅನುಷ.ಆಶಾ.ಪಲ್ಲವಿ.ಪೂಜ.ಇತರರಿದ್ದರು.


ಬರಹ ಮತ್ತು ಚಿತ್ರ ಕೃಪೆ.
ವಸಂತ್ ಹಾರ್ಗೋಡು
ವರದಿ….
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್. ಅವಿನ್ ಟಿ.ವಿ

