“ಬುದ್ಧಿವಂತರಿಂದ ತಪ್ಪೇ.???!!!”
1 min read
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳಲ್ಲಿ ಆದಂತಹ ಪ್ರಮಾದಗಳನ್ನು ಸರಿಪಡಿಸಲು ಅಗತ್ಯವಾದ ಕಚೇರಿಗಳು ಮೂಡಿಗೆರೆ ಪಟ್ಟಣದಲ್ಲಿರುವುದು ಮೂರು ಮತ್ತೊಂದು ಇದರಿಂದ ಜನ ಸಾಮಾನ್ಯರಿಗೆ ಸಮಯಕ್ಕೆ ಸರಿಯಾಗಿ ಕೆಲಸ ಆಗುತ್ತಿಲ್ಲ ಜೊತೆಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳ ಜೋಡಣೆಗೆ ಶುಲ್ಕದೊಂದಿಗೆ ಸಮಯ ನಿಗದಿಪಡಿಸಿ ಜನರಿಗೆ ಮತ್ತಷ್ಟು ತೊಂದರೆಯಾಗಿದೆ.ಈ ಪ್ರಮಾದಗಳು ಸರ್ಕಾರ ನೇಮಿಸಿದ ಸಿಬ್ಬಂದಿಗಳಿಂದ ಆಗಿರುವಂತಹದ್ದು ಇದಕ್ಕೆ ನೇರ ಹೊಣೆ ಸರ್ಕಾರ.ಈ ಸಮಸ್ಯೆಗಳನ್ನು ಸರಿಪಡಿಸಬೇಕು.
ಆದಷ್ಟು ಬೇಗ ಕಚೇರಿಗಳನ್ನು ಹೆಚ್ಚಿಸುವುದರೊಂದಿಗೆ ನುರಿತ ಸಿಬ್ಬಂದಿಗಳನ್ನು ನೇಮಿಸಬೇಕೆಂದು ವಂದೇ ಮಾತರಂ ಬಳಗದ ವತಿಯಿಂದ ಪ್ರಶಾಂತ್ ಚಿಪ್ರಗುತ್ತಿ ಅವರು ನಮ್ಮ ವಾಹಿನಿಯ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










