“ಕರೆಂಟ್ ಹೊಡೆದು ಅಸುನೀಗಿದ ಮಂಗ.”
1 min read
ವಿದ್ಯುತ್ ಅವಘಡ ಸಂಭವಿಸಿ ಎರಡು ಮಂಗಗಳಲ್ಲಿ ಒಂದು ಮಂಗಕ್ಕೆ ಗಾಯಗೊಂಡಿದ್ದು ಮತ್ತೊಂದು ಅಸುನೀಗಿದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ
ನಿಡುವಾಳೆಯ ನೇರಳಗಂಡಿಯಲ್ಲಿ ಆಹಾರ ಹುಡುಕಿಕೊಂಡು ಬಂದ ಮಂಗಗಳಿಗೆ 11ಕೆವಿ ವಿದ್ಯುತ್ ತಗುಲಿ ಅವಘಡ ಆಗಿತ್ತು. ಒಂದು ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಂದಕ್ಕೆ ನಿಡುವಾಳೆ ಯುವಕರ ತಂಡ ನಿಡುವಾಳೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಧರ್ಭದಲ್ಲಿ ನಿಡುವಾಳೆಯ ಆಟೋ ಚಾಲಕರಾದ ಹರೀಶ್ ಉರುವಿನಖಾನ್, ಸುರೇಶ್ ಅಂಬೇಡ್ಕರ್ ನಗರ, ಭಗತ್ ಸಿಂಗ್ ನಗರದ ಪ್ರದೀಪ್ , ಚೇತನ್, ಪ್ರವೀಣ್, ಸಂಜಯ್, ವಸಂತ ಇದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








