“ಅಗಸ್ತ್ಯ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭ.”
1 min read
ಮೈ ನೇಮ್ ಈಸ್ ಅಣ್ಣಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು,ಗರುಡ ಗಮನ ವೃಷಭ ವಾಹನ ಎಂಬ ಯಶಸ್ವಿ ಚಿತ್ರಗಳನ್ನು ನೀಡಿದ ಕಳಸದ ಉದ್ಯಮಿ ಬಿ.ವಿ.ರವಿ ರೈ ಅವರು ಅಗಸ್ತ್ಯ ಫಿಲ್ಮ್ ಎಂಬ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಅದರ ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ.

ಈ ಹಿಂದೆ ಲೈಟರ್ ಬುದ್ಧ ಫಿಲ್ಮ್ ಎಂಬ ನಿರ್ಮಾಣ ಸಂಸ್ಥೆಯೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಇದೀಗ ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಇವರ ಮೊದಲ ಚಿತ್ರ “ಮೈನೇಮ್ ಈಸ್ ಅಣ್ಣಪ್ಪ.” ರಾಜ್ ಬಿ ಶೆಟ್ಟಿ ಹಾಗೂ ಲೈಟರ್ ಬುದ್ಧ ಫಿಲ್ಮ್ ಭಾಂದವ್ಯ ಶುರುವಾಗಿ ಅದು ಮುಂದುವರೆದು

“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು.” “ಗರುಡ ಗಮನ ವೃಷಭ ವಾಹನ” ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೆಗ್ಗಳಿಗೆ ರವಿ ರೈ ಅವರದ್ದು.
ಕರೋನದ ಬಿಸಿ ಇವರ ವೈಯಕ್ತಿಕ ಉದ್ಯಮಕ್ಕೆ ತಟ್ಟಿದ ಹಿನ್ನಲೆಯಲ್ಲಿ ಒಂದು ಬಾರಿ ಸಿನಿಮಾ ರಂಗದಿಂದ ದೂರ ಉಳಿಯಬೇಕೆಂದುಕೊಂಡ ರೈಗಳಿಗೆ ಬೆನ್ನೆಲುಬಾಗಿ ನಿಂತವರು ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ. ರವಿ ರೈ ಅವರನ್ನು ನಂಬಿ

ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಭಾಗಿಯಾಗಲು ಅವಕಾಶ ಮಾಡಿ ಕೊಟ್ಟು ಭರ್ಜರಿ ಯಶಸ್ಸನ್ನು ಕೂಡ ಕಂಡುಕೊಂಡ ಬಿ.ವಿ.ರವಿ ರೈ ಅವರು ನಮ್ಮ ವಾಹಿನಿಯೊಂದಿಗೆ ಅಗಸ್ತ್ಯ ಫಿಲ್ಮ್ ನಿರ್ಮಾಣ ಸಂಸ್ಥೆ ಅದೊಂದು ನನ್ನ ಕನಸಿನ ಕೂಸು ಇದಕ್ಕೆ ರಾಜ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರ ಬಹುದೊಡ್ಡ ಸಹಕಾರ ಇದೆ.

ಇನ್ನು ಮುಂದೆ ಅಗಸ್ತ್ಯ ಫಿಲ್ಮ್ ಹಾಗೂ ಲೈಟರ್ ಬುದ್ಧ ಫಿಲ್ಮ್ ಜೊತೆಗೂಡಿ ಚಿತ್ರವೊಂದನ್ನು ಅತೀ ಶೀಘ್ರದಲ್ಲಿ ಘೋಷಿಸಲಿದ್ದೇವೆ. ಅಗಸ್ತ್ಯ ಫಿಲ್ಮ್ ಯಾವತ್ತಿಗೂ ಲೈಟರ್ ಬುದ್ಧ ಫಿಲ್ಮ್ ನ ಒಂದು ಅಂಗ ಸಂಸ್ಥೆ ಎನ್ನುವುದು ನನಗೆ ಖುಷಿ ತರುತ್ತೆ.
ನನ್ನ ಅಗಸ್ತ್ಯ ಫಿಲ್ಮ್ ನಿರ್ಮಾಣ ಸಂಸ್ಥೆಯ ಲಾಂಛನವನ್ನು ಕಳಸ ಶ್ರೀ ಕಲಸೇಶ್ವರ ಸ್ವಾಮಿಯವರ ಜೀರ್ಣಾಷ್ಠಬಂಧ ಮತ್ತು ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ದಿನದಂದೇ ಬಿಡುಗಡೆ ಮಾಡುತ್ತಿರುವುದು ಕೂಡ ತುಂಬಾ ಖುಷಿಯನ್ನು ತಂದುಕೊಟ್ಟಿದೆ. ರಾಜ್ ಬಿ ಶೆಟ್ಟಿ, ಪ್ರವೀಣ್ ಶ್ರಿಯಾನ್ ಹಾಗೂ ಲೈಟರ್ ಬುದ್ಧ ಸಿನಿ ತಂಡಕ್ಕೆ ಸದಾ ನಾನು ಚಿರಋಣಿಯಾಗಿರುತ್ತೇನೆ ಎಂದು ರವಿ ರೈ ಅವರು ತಮ್ಮ ಮನದಾಳದ ಮಾತನ್ನು ಹೇಳಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








