“ಮಲೆನಾಡ ಹುಡುಗನಿಗೆ ಡಾಕ್ಟರೇಟ್ ಗರಿ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲೂಕಿನ,ಬೀಜುವಳ್ಳಿ ಜೀವನ್ ಜ್ಯೋತಿ ಎಸ್ಟೇಟ್ ಮಾಲಿಕರಾದ ಶ್ರೀ ಎಂ. ಬಿ. ಗೋಪಾಲಗೌಡ (LIC ಗೋಪಾಲಗೌಡ)ಹಾಗೂ ಶ್ರೀಮತಿ ಶಶಿಕಲಾ ಅವರ ಸುಪುತ್ರ ತೇಜಸ್ವಿ ಗೋಪಾಲಗೌಡ ಕೇರಳ ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಷಯದಲ್ಲಿ ದಿನಾಂಕ 03.06.2023 ರಂದು ಘಟಿಕೋತ್ಸವದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಇಂದಿನಿಂದ ಮೂಡಿಗೆರೆಯ ಮತ್ತೊಬ್ಬ ಯುವಕ ಡಾಕ್ಟರ್ ತೇಜಸ್ವಿ ಗೋಪಾಲಗೌಡ ಎಂದು ಕರೆಸಿಕೊಳ್ಳುತ್ತಾರೆ. ಈ ಯುವಕ ಮೂಡಿಗೆರೆಯ ಕೃಷಿಗೆ ಒಂದು ಮಾನ್ಯತೆ ಹೊಂದಿದ ಕೀರಿಟವೇ ಸರಿ. ಈ ಪ್ರತಿಭಾನ್ವಿತ ಯುವಕ ಮೂಡಿಗೆರೆಯ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬಿ. ಎಸ್. ಸಿ. ಹಾಗೂ ಎಂ. ಎಸ್. ಸಿ. ಪದವಿ ಪಡೆದಿದ್ದರು. ಮೂಡಿಗೆರೆಯ ಜನ ಸಮೂಹ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದಿಂದ ಮಲೆನಾಡ ಹೆಮ್ಮೆಯ ಯುವಕನಿಗೆ ಶುಭ ಹಾರೈಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






