“ಅಭಿವೃದ್ಧಿ ಮತ್ತು ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ : ಬಿ.ಕೆ.ಲಕ್ಷ್ಮಣ್ ಕುಮಾರ್.”
1 min read
ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳ ನಂತರ ಭಾರತ ಕಮ್ಯುನಿಸ್ಟ್ ಪಕ್ಷವು ಸ್ಪರ್ಧಿಸಿ ಸೋಲು ಅನುಭವಿಸಿದ್ದರು ಸಹ ಕ್ಷೇತ್ರದ ಅಭಿವೃದ್ಧಿಗಾಗಿ,ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ.
ಚುನಾವಣೆ ಪ್ರಾರಂಭಕ್ಕೂ ಮೊದಲು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಮತದಾರರ ಮೇಲೆ ಇದ್ದ ವಿಶ್ವಾಸದಿಂದ ನಮ್ಮ ಪಕ್ಷವು ಬೇರೆ ಬೇರೆ ಕ್ಷೇತ್ರದ ಆಕಾಂಕ್ಷಿಗಳು ಇಲ್ಲಿ ಸ್ಪರ್ಧೆಗೆ ತಯಾರಿ ನಡೆಸಿ ಪ್ಲೆಕ್ಸ್ ಹಾಕಿಕೊಳ್ಳುತ್ತಿದ್ದ ಸಂದರ್ಭ ನಾವು ಮೂಡಿಗೆರೆ ಕ್ಷೇತ್ರದ ಮತದಾರರ ಮಾರಾಟಕ್ಕಿಲ್ಲ ಎಂದು ಬಹಳ ವಿಶ್ವಾಸದಿಂದ ಹೇಳಿದ್ದೆವು ಆದರೆ ಇಂದಿನ ಕಲುಷಿತಗೊಂಡಿರುವ ಹಣದ ರಾಜಕೀಯ ವ್ಯವಸ್ಥೆಯಲ್ಲಿ ಶೇಕಡ 80 ರಷ್ಟು ಮೂಡಿಗೆರೆ ಕ್ಷೇತ್ರದ ಮತದಾರರು ಸಹ ಮಾರಾಟ ವಾಗಿರುವುದರಿಂದ ಪ್ರಾಮಾಣಿಕ,ಜನಪರ ಹೋರಾಟದ ರಾಜಕೀಯಕ್ಕೆ ಸೋಲಾಗಿದೆ ಹಾಗಾಗಿ ನಾವು ಸೋತ್ತಿದ್ದೇವೆ . ಸ್ವಲ್ಪ ನೆಮ್ಮದಿ ಎಂದರೆ ಹೊರಗಿನವರಿಗೆ ಮಾರಾಟವಾಗಲಿಲ್ಲ ಸ್ಥಳೀಯರಿಗೆ ತಮ್ಮ ಮತ ಮಾರಿಕೊಂಡರು ಅಷ್ಟೇ ವ್ಯತ್ಯಾಸ ಆದರೆ ರಾಜ್ಯದಲ್ಲಿ ಸಂಪೂರ್ಣ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಘೋಷಣೆ ಜನರಿಗೆ ಅವಶ್ಯಕ ಎನಿಸಿದ್ದವು.
ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸಂಪೂರ್ಣ ಭ್ರಷ್ಟಾಚಾರ ಆಡಳಿತ , ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದರು ಹಾಗಾಗಿ ಜನರಿಗೆ ಪರ್ಯಾಯ ಸರ್ಕಾರ ಅನಿವಾರ್ಯವಾಗಿತ್ತು ಇದರ ಲಾಭ ಕಾಂಗ್ರೆಸ್ ತಾನು ಘೋಷಿಸಿರುವ ಗ್ಯಾರಂಟಿ ಯೋಜನೆಯಿಂದ ಜನರ ವಿಶ್ವಾಸ ಗಳಿಸುವಲ್ಲಿ ರಾಜ್ಯಾದ್ಯಾಂತ ಯಶಸ್ವಿಯಾಯಿತು
ನಮ್ಮ ಪಕ್ಷವು ರಾಜ್ಯದ 215 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದರಿಂದ ರೈತ ಕಾರ್ಮಿಕರ ,ಬಡವರ ಮತಗಳು ಕಾಂಗ್ರೆಸ್ ಸೆಳೆಯುವಲ್ಲಿ ಯಶಸ್ವಿಯಾಯಿತು ಆದರಿಂದ ನಮಗೆ ಮೂಡಿಗೆರೆಯಲ್ಲಿ ನಮ್ಮ ಪಕ್ಷದ ಸಂಪ್ರದಾಯ ಮತಗಳು ಪಡೆಯುವಲ್ಲಿ ಹಿನ್ನಡೆ ಆಗಿದೆ ನಾವು ಚುನಾವಣೆ ಪ್ರಚಾರ ಸಂದರ್ಭದಲ್ಲಿ ನಮ್ಮ ಸಂಪ್ರದಾಯ ಮತಗಳಾದ ಕಾರ್ಮಿಕರಿಗೆ ರಾಜ್ಯ ಮಟ್ಟದಲ್ಲಿ ನಡೆದಿರುವ ಹೊಂದಾಣಿಕೆ ಸ್ಥಳೀಯ ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧೆಯ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲತೆ ಹೊಂದಿದ್ದರಿಂದ ನಾವು ಕಡಿಮೆ ಮತ ಪಡೆಯಲು ಕಾರಣವಾಗಿದೆ .
ಮುಂದೆ ಇಂತಹ ತಪ್ಪುಗಳನ್ನು ಸರಿಪಡಿಸಿ ಜಾಗ್ರತೆ ವಹಿಸುವಂತೆ ಈಗಾಗಲೇ ನಮ್ಮ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷವು ಈ ನ್ಯೂನತೆ ಸರಿಪಡಿಸಿ ಸ್ಪರ್ಧಿಸಲಿದೆ ಈಗಾಗಲೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಚರ್ಚೆಯಲ್ಲಿದೆ ಈ ದೇಶದಲ್ಲಿ ಬಡವರ ಯೋಜನೆ ಬಗ್ಗೆ ಮಾತ್ರ ಸದಾ ಚರ್ಚೆ ಆಗುತ್ತವೆ ಕೇಂದ್ರ ಸರ್ಕಾರ ಈಗಾಗಲೇ ಜಾರಿಯಲ್ಲಿರುವ ಕಿಸಾನ್ ಸಮ್ಮನ್ ,ಶ್ರೀಮಂತರ ಕಾಫಿ ತೋಟಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆ ಅಡಿಯಲ್ಲಿ ಬರುವ ಅನುದಾನಗಳ ಬಗ್ಗೆ ಯಾವತ್ತೂ ಚರ್ಚೆ ನಡೆಯುವುದೇ ಇಲ್ಲ
ಸರ್ಕಾರದ ಎಲ್ಲವೂ ಸಹ ಉಚಿತ ಯೋಜನೆಗಳೇ ಸಾರ್ವಜನಿಕರ ತೆರಿಗೆ ಹಣದಿಂದ ವ್ಯಯ ಆಗುತ್ತದೆ ಆದರೆ ಬಡವರಿಗೆ ಅಕ್ಕಿ,ವಿದ್ಯುತ್ ಉಚಿತ ಎನ್ನುವಾಗ ಮಾತ್ರ ತಕರಾರು ತೆಗೆಯುವ ಜನ ಮತ್ತು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು ಎಲ್ಲರನ್ನೂ ಸಾಮಾಜಿಕ ನ್ಯಾಯದ ಆದಾರದ ಮೇಲೆ ಅಭಿವೃದ್ಧಿ ಹೊಂದುವ ಮತ್ತು ನ್ಯಾಯ ಒದಗಿಸುವ ಕೆಲಸ ಎಲ್ಲಾ ಸರ್ಕಾರ ಮಾಡಬೇಕಾದದ್ದು ಮತ್ತು ನಮ್ಮ ಸಂವಿಧಾನ ಸಹ ಅದೇ ಆಶಯ ಹೊಂದಿರುವುದರಿಂದ ಜನರಿಂದ ಆಯ್ಕೆಗೊಂಡ ಪ್ರಜಾಪ್ರಭುತ್ವ ಸರ್ಕಾರದ ಕೆಲಸ ಸುಳ್ಳು ಆಶ್ವಾಸನೆ ನೀಡದೆ ಕೊಟ್ಟಿರುವ ಎಲ್ಲ ಗ್ಯಾರಂಟಿ ಯೋಜನೆ ಜಾರಿಗೆ ತರಲಿ ಎಂಬುವುದನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ನಾವು ಒತ್ತಾಯಿಸುತ್ತೇವೆ ಎಂದು ನಮ್ಮ ವಾಹಿನಿಯೊಂದಿಗೆ ಬಿ.ಕೆ.ಲಕ್ಷ್ಮಣ್ ಕುಮಾರ್ ಹೇಳಿದರು.
ರಮೇಶ್ ಕೆಳಗೂರು ,ಗೋಪಾಲ್ ಶೆಟ್ಟಿ,ಸುಂದರ್ ಸಂಪ್ಲಿ, ಲೋಕೇಶ್ ಇನ್ನಿತರರು ಇದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್,ಅವಿನ್ ಟಿವಿ.
9448305990.






