“ದಲಿತ ಸಭೆ.”
1 min read
ದಿನಾಂಕ 14/05/2023ರ ಭಾನುವಾರದಂದು ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ, ಬಣಕಲ್ ಪೊಲೀಸ್ ಠಾಣೆಯಲ್ಲಿ ದಲಿತ ಸಭೆ ನಡೆಯಿತು.


ಈ ಸಭೆಯಲ್ಲಿ ಹಲವಾರು ಗ್ರಾಮಗಳಲ್ಲಿನ ಕುಂದು ಕೊರೆತಗಳ ಬಗ್ಗೆ ಸಭೆಯಲ್ಲಿದ್ದ ಮುಖಂಡರು ಗಮನಕ್ಕೆ ತಂದರು.
ಸಮಸ್ಯೆಗಳನ್ನು ಆಲಿಸಿದ ಬಣಕಲ್ ಠಾಣೆಯ ಪಿ.ಎಸ್.ಐ ರನ್ನಗೌಡ ಪಾಟೀಲ್ ರವರು ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಇಲಾಖೆ ಪ್ರಯತ್ನಿಸುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಎಸ್.ಪಿ ಪಕ್ಷದ ಕಾರ್ಯದರ್ಶಿ ಪಿ.ಕೆ ಮಂಜುನಾಥ್,ಬಿ.ಎಸ್.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ದೇವರಾಜ್ ಸಬ್ಳಿ,ಬಿ.ಎಸ್.ಪಿ.ಬಣಕಲ್ ಹೋಬಳಿ ಅಧ್ಯಕ್ಷರಾದ ಹೊನ್ನೇಶ್,ಬೆಟ್ಟಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕುಮಾರ್ ಹಾಗೂ ದಲಿತ ಮುಖಂಡರಾದ ಪರಮೇಶ್, ಗಿರೀಶ್, ಮಂಜಯ್ಯ ಹಾಗೂ ಎ.ಎಸ್.ಐ ಶಶಿ ಇದ್ದರು.
ಚಿತ್ರ ಹಾಗೂ ಬರಹ ಕೃಪೆ.
ಬಕ್ಕಿ ಮಂಜುನಾಥ್.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.


