“ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಿ.ಪಿ.ಐ ಪಕ್ಷಕ್ಕೆ ಮತ ನೀಡಿ : ಸಂತೋಷ್ ಕುಮಾರ್.”
1 min read
ಹೋರಾಟ ಹಾದಿಯಲ್ಲಿ ಸಾಗಿ ಜನರ ಕಷ್ಟ ಮತ್ತು ಸಮಸ್ಯೆಗಳನ್ನು ಪರಿಹರಿಸಿ ಅವರ ಬದುಕನ್ನು ಹಸನಾಗಿಸುವ ಮೂಲಕ ಬಂದಂತಹ ಪಕ್ಷ ಭಾರತೀಯ ಕಮ್ಯುನಿಸ್ಟ್ ಪಕ್ಷ,ಭಾರತದಲ್ಲಿರುವ ಇನ್ನುಳಿದ ರಾಷ್ಟ್ರೀಯ ಪಕ್ಷಗಳು ಹಣ, ಹೆಂಡವನ್ನು ಹಂಚಿ ಗೆಲ್ಲುವ ಮೂಲಕ ಅಧಿಕಾರವನ್ನು ಹಿಡಿದು ಭ್ರಷ್ಟಾಚಾರದ ಮೂಲಕ ಜನರ ರಕ್ತವನ್ನು ಹೀರುವುದರಲ್ಲಿ ಎತ್ತಿದ ಕೈ,ಇಂತಹ ಕೆಟ್ಟ ಪಕ್ಷಗಳನ್ನು ಸೋಲಿಸಿ ಬಡವರ ಪರವಾಗಿ ನಿಲ್ಲುವ ಭಾರತೀಯ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ರಮೇಶ್ ಕೆಳಗೂರು ಅವರನ್ನು ಗೆಲ್ಲಿಸಿ ಎಂದು ನಮ್ಮ ವಾಹಿನಿಯ ಜೊತೆ ಮಾತನಾಡುತ್ತಾ ಕೇರಳದ ರಾಜ್ಯ ಸಭಾ ಸದಸ್ಯರಾದ ಸಂತೋಷ್ ಕುಮಾರ್ ಹೇಳಿದರು.
ಈಗ ಇರುವ ಬಿಜೆಪಿ ಪಕ್ಷವು ಈ ದೇಶದ ಮತ್ತು ವಿದೇಶದಲ್ಲಿರುವ ಕಾರ್ಪೋರೇಟ್ ಕಂಪನಿಗಳ ಪಕ್ಷವಾಗಿದೆ, ಇವರಿಗೇನಾದರೂ ನಾಳೆ ನಾವು ಮತ ಕೊಟ್ಟು ಗೆಲ್ಲಿಸಿದರೆ ಇವರುಗಳು ಪೂರ್ತಿ ದೇಶವನ್ನೇ ಮಾರುತ್ತಾರೆ ಜೊತೆಗೆ ಬಿಜೆಪಿ ಸರ್ಕಾರವು ಅದಾನಿ ಮತ್ತು ಅಂಬಾನಿ ಇವರುಗಳ ಕೈಗೊಂಬೆಯಾಗಿದೆ ಆದ್ದರಿಂದ ಸಿ.ಪಿ.ಐ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಸಾಹಿತಿಗಳು ಹಾಗೂ ಸಿ.ಪಿ.ಐ ಪಕ್ಷದ ಮುಖಂಡರಾದ ಸಿದ್ಧನಗೌಡ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಾತಿ ಸುಂದರೇಶ್ ಅವರು ಮಾತನಾಡುತ್ತಾ ರೆಸಾರ್ಟ್ ರಾಜಕಾರಣದ ಮೂಲ ಬೇರು ಬಿಜೆಪಿ ಪಕ್ಷ,ಇಂತಹ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ 40% – 80% ಸರ್ಕಾರ ಆಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಬಿಜೆಪಿ ಪಕ್ಷದ ವಿರುದ್ಧ ಗುಡುಗಿದರು ಜೊತೆಗೆ ಜನ ಸಾಮಾನ್ಯರ ಸಮಸ್ಯೆಗಳನ್ನು ಹುಟ್ಟಿನಿಂದಲೇ ನೋಡಿಕೊಂಡು ಬೆಳೆದ ಹಾಗೂ ನೂರಾರು ಜನರ ಕಣ್ಣೀರನ್ನು ಒರೆಸಿ ಅವರ ಕಷ್ಟಗಳನ್ನು ಹೋರಾಟದ ಮೂಲಕ ಬಗೆಹರಿಸಿ ಬೆನ್ನೆಲುಬಾಗಿ ನಿಂತ ಹುಟ್ಟು ಹೋರಾಟಗಾರರಾದ ರಮೇಶ್ ಕೆಳಗೂರು ಅವರು ಸಿ.ಪಿ.ಐ ಪಕ್ಷದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಅವರನ್ನು ಮತದಾರ ಬಂಧುಗಳು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ ಪಕ್ಷದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಸಮಿತಿಯ ಅಧ್ಯಕ್ಷರಾದ ಬಿ.ಕೆ.ಲಕ್ಷ್ಮಣ್ ಕುಮಾರ್,ಸಿ.ಪಿ.ಐ ಪಕ್ಷದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ರಮೇಶ್ ಕೆಳಗೂರು,ಸಿ.ಪಿ.ಐ ಪಕ್ಷದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಗಳಾದ ಲೋಕೇಶ್,ಸಿ.ಪಿ.ಐ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ರಾಧ ಸುಂದರೇಶ್,ಸಿ.ಪಿ.ಐ ಪಕ್ಷದ ಹಿರಿಯ ಮುಖಂಡರಾದ ಗೋಪಾಲ್ ಎನ್.ಶೆಟ್ಟಿ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

