लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕಾಂಗ್ರೆಸ್ ಪಕ್ಷದ ಬಿರುಗಾಳಿಗೆ ಬಿಜೆಪಿ ಪಕ್ಷ ಧೂಳಿಪಟವಾಗಲಿದೆ: ಬಿ.ಬಿ.ನಿಂಗಯ್ಯ.”

1 min read


ಬಿಜೆಪಿ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಮೂಡಿಗೆರೆ ವಿಧಾನಸಭೆ ಸೇರಿದಂತೆ ರಾಜ್ಯಾಧ್ಯಂತ ಕಾಂಗ್ರೆಸ್ ಪಕ್ಷದ ಅಲೆ ಬಿರುಗಾಳಿಯಂತೆ ಬೀಸುತ್ತಿದೆ. ಈ ಬಿರುಗಾಳಿಗೆ ಬಿಜೆಪಿ ಧೂಳಿಪಟವಾಗುವ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವಸ್ತಾರೆ ಹೋಬಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಅವರ ಪರ ಮತಯಾಚಿಸಿ ಮಾತನಾಡಿದರು. ಬಿಜೆಪಿ ಒಂದು ಸುಳ್ಳಿನ ಪಕ್ಷ ಅವರಿಗೆ ಆಡಳಿತ ನಡೆಸುವುದೇ ಗೊತ್ತಿಲ್ಲ. ಜನ ಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. 40 ಪರ್ಸಂಟೇಜ್, ಕೋಮುವಾದ, ಭ್ರಷ್ಟಾಚಾರ, ಬೆಲೆ ಏರಿಕೆ, ಪಿಎಸ್‌ಐ ನೇಮಕ ಹಗರಣ ಸೇರಿದಂತೆ ಭ್ರಷ್ಟ ಜನರ ಸಂತೆಯಾಗಿದೆ. ಪ್ರಣಾಳಿಕೆಯಲ್ಲಿ ಹೇಳಿದ ಯಾವುದೇ ಕೆಲಸ ಮಾಡಿಲ್ಲ. 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಮೋಸ ಮಾಡಿದವರು, ಈ ಬಾರಿಯ ಪ್ರಣಾಳಿಕೆಯಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಮತ್ತೆ ಬೊಗಳೆ ಬಿಡುತ್ತಿದ್ದಾರೆ. ಅವರ ಎಲ್ಲಾ ಯೋಜನೆಗಳು ರೈತರ ಹಾಗೂ ಬಡ ಜನರ ವಿರೋಧಿಯಾಗಿದೆ. ಇದರಿಂದ ಬಿಜೆಪಿಯ ತಂತ್ರ ಈ ಬಾರಿ ನಡೆಯದು ಎಂದು ಹೇಳಿದರು.
ಅಭ್ಯರ್ಥಿ ನಯನಾ ಮೋಟಮ್ಮ ಮಾತನಾಡಿ, ಹಿಂದಿನ ಶಾಸಕರಿಗೆ ಅತಿವೃಷ್ಟಿಯಿಂದಾಗಿ ಬೆಳೆನಾಶ, ಮನೆ ಕಳೆದುಕೊಂಡ ಅನೇಕ ನಿರಾಶ್ರಿತರಿಗೆ ಇಂದಿಗೂ ಪರಿಹಾರ ಕೊಡಿಸಲು ಸಾಧ್ಯವಾಗಿಲ್ಲ. ಮೂಡಿಗೆರೆ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಫಾರಂ ನಂ 53 ಅರ್ಜಿ ವಿಲೇ, ಕಾಡಾನೆ ಹಾವಳಿ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳೆಲ್ಲದಕ್ಕೂ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂದೀಪ್, ಮುಖಂಡರಾದ ಜಿ.ಎಚ್.ಹಾಲಪ್ಪಗೌಡ, ಎಂ.ಪಿ.ಮನು, ಎಚ್.ಎಚ್.ದೇವರಾಜ್, ದೇವರಾಜ್‌ಗೌಡ, ಪೂರ್ಣೇಶ್, ಪ್ರಕಾಶ್ ಅರೆನೂರು, ಮಹೇಶ್, ರಾಜೇಗೌಡ, ಲಕ್ಷ್ಮಣ್‌ಗೌಡ ನೆರಡಿ, ಚಂದ್ರೇಗೌಡ, ಗೋಪಾಲ್‌ಗೌಡ ಮತ್ತಿತರರಿದ್ದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *