“ಪ್ರಜಾಪ್ರಭುತ್ವ ಉಳಿಸಿ……. ಬಿಜೆಪಿ ಸೋಲಿಸಿ……”
1 min read
1952ರಲ್ಲಿ ಸಾರ್ವತ್ರಿಕ ಚುನಾವಣೆ ಆರಂಭವಾಗಿ ಇತ್ತೀಚಿನವರೆಗೂ ಬಂದಿದೆ.
ಇದುವರೆಗೂ ಚುನಾವಣೆಯಲ್ಲಿ ಕಾಂಗ್ರೆಸ್,ಜೆಡಿಎಸ್,ಬಿಜೆಪಿ ಪಕ್ಷಗಳೇ ಸ್ಪರ್ಧಿಸಿರುವುದು,ಆದರೂ ಕೂಡ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ,ಪ್ರಸ್ತುತ ಚುನಾವಣೆಯಲ್ಲಿ ಮೂರು ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿದೆ ಎಂದು ಸಿ.ಪಿ.ಐ.(ಎಂ.ಎಲ್) ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ನಮ್ಮ ವಾಹಿನಿಗೆ ತಿಳಿಸಿದರು.
2019ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಅನೇಕ ಜನ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿ ಜನರನ್ನು ಶೋಷಣೆ ಮಾಡಿದೆ,ಪ್ರತಿ ಮಾತಿಗೂ ಡಬಲ್ ಇಂಜಿನ್ ಸರ್ಕಾರ ಎನ್ನುವಂತಹ ಬಿಜೆಪಿ ಸರ್ಕಾರ ದುಡಿಯುವ ವರ್ಗದ ಮೇಲೆ ದಾಳಿ ಮಾಡಿದೆ ಜೊತೆಗೆ ಹೋರಾಟ ಮಾಡಿ ಪಡೆದಂತಹ ಎಲ್ಲಾ ಸೌಲಭ್ಯಗಳನ್ನು ಬಿಜೆಪಿ ಸರ್ಕಾರ ಹಾಳುಗೆಡವಿದೆ, ಸಂವಿಧಾನ ವಿರೋಧಿ ಪಕ್ಷ ಏನಾದ್ರೂ ಇದ್ರೆ ಅದು ಬಿಜೆಪಿ ಪಕ್ಷ ಎಂದು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದರು.
ಕೋವಿಡ್ ಸ್ಕ್ಯಾಮ್,ಬೆಲೆ ಏರಿಕೆ,ಪದವಿಧರ ಯುವಕರ ಉದ್ಯೋಗದ ಸ್ಕ್ಯಾಮ್ ಹಾಗೂ ದಲಿತ ವಿರೋಧಿ ಕಾಯ್ದೆ ಮುಂತಾದ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ ಬಿಜೆಪಿ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುವ ಮೂಲಕ ಮತದಾರರು ಪಾಠ ಕಳಿಸಬೇಕಿದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆಯೂ ಹಸಿ ಸುಳ್ಳುಗಳೇ ತುಂಬಿದ ಕಂತೆ ಎಂದು ಗುಡುಗಿದರು.
ಈ ಸಂಧರ್ಭದಲ್ಲಿ ಸಿ.ಪಿ.ಐ.(ಎಂ.ಎಲ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಶೇಖರ್,ಸಿ.ಪಿ.ಐ.(ಎಂ.ಎಲ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣಪ್ಪ,ತಾಲ್ಲೂಕು ಸಮಿತಿ ಸದಸ್ಯರಾದ ಗುರು ಹಾಗೂ ಪ್ರಸಾದ್ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
