लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಅನುಮಾನಾಸ್ಪದ ಸಾವಿನ ಪ್ರಕರಣ ಭೇದಿಸಿದ ಪೊಲೀಸರು….. ಅಭಿನಂದಿಸಿದ ಸವಿತಾ ಸಮಾಜ……”

1 min read

ದಿನಾಂಕ 26/04/2023 ರಂದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ತುಮಕೂರಿನ ಬೊಲೆರೋ ಪಿಕ್ ಅಪ್ ಮತ್ತು ಸ್ಕೂಟಿಯ ನಡುವೆ
ಅಪಘಾತವಾಗಿದ್ದು,ಅಪಘಾತಕ್ಕೀಡಾದ ವ್ಯಕ್ತಿಯನ್ನು ಅವರ ವಾಹನದಲ್ಲೇ ಕರೆತಂದು ಕೊಟ್ಟಿಗೆಹಾರದ ಹೆಬ್ಬರಿಗೆ ಸಮೀಪ ರಸ್ತೆಯ ಬದಿ ಬೀಸಾಕಿ ಹೋಗಿದ್ದರು.

ಸಾರ್ವಜನಿಕರು ಬಣಕಲ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದಾಗ ಬಣಕಲ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಶಶಿ ಮತ್ತು ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು,ಉಪ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ,ಡಿವೈಎಸ್ಪಿ ಪುರುಷೊತ್ತಮ್,ಆರಕ್ಷಕ ವೃತ್ತ ನಿರೀಕ್ಷಕರಾದ ಸೋಮೇಗೌಡ,ಬಣಕಲ್ ಪೊಲೀಸ್ ಠಾಣಾಧಿಕಾರಿಗಳಾದ ಜಂಬೂರಾಜ್ ಮಹಾಜನ್,ರನ್ನಗೌಡ ಪಾಟೀಲ್ ಹಾಗೂ ತಂಡ ಕೇವಲ ಹದಿಮೂರು ಗಂಟೆಯಲ್ಲಿ ಪ್ರಕರಣ ಭೇದಿಸಿ, ಸಂಬಂಧಪಟ್ಟವರನ್ನು ದಸ್ತಗಿರಿ ಮಾಡಲಾಯಿತು.

ಯಾವುದೇ ರಸ್ತೆ ಅಪಘಾತದ ಪ್ರಕರಣದಲ್ಲಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಲ್ಲಿ ಬದುಕುಳಿಯುವ ಸಾಧ್ಯತೆ ಇದೆ ಇದನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ.
ಅಪಘಾತಗಳು ಆಕಸ್ಮಿಕವಾಗಿದ್ದು ಯಾವುದೇ ರೀತಿಯ ಭಯಪಡದೆ ಪೊಲೀಸರಿಗೆ ಮಾಹಿತಿ ನೀಡುವುದು ಅವರ ಕರ್ತವ್ಯವಾಗಿದೆ ಎಂದು ಆರಕ್ಷಕ ವೃತ್ತ ನಿರೀಕ್ಷಕರಾದ ಸೋಮೇಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ನ್ಯಾಯ ಒದಗಿಸಿಕೊಟ್ಟ ಆರಕ್ಷಕ ವೃತ್ತ ನಿರೀಕ್ಷಕ ಸೋಮೇಗೌಡ ಅವರ ಕಚೇರಿಗೆ ಮೃತರ ಪತ್ನಿ,ಮಗು,ಅತ್ತೆ,ಮಾವ ಹಾಗೂ ಅಪಾರ ಬಂಧು ಬಳಗದವರು ಬಂದು ದಿನಾಂಕ 29/04/2023 ರ ಶನಿವಾರದಂದು ಅಭಿನಂದನೆ ಸಲ್ಲಿಸಿದರು.ಇದರ ನೇತೃತ್ವವನ್ನು
ಫಲ್ಗುಣಿ ಗ್ರಾಮದ ರಾಜಶೇಖರ್ ವಹಿಸಿದ್ದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

About Author

Leave a Reply

Your email address will not be published. Required fields are marked *