“ರಾಷ್ಟ್ರಾಧ್ಯಕ್ಷ ಕಳಸಕ್ಕೆ.”
1 min read



ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಚಿಕ್ಕಮಗಳೂರು ಜಿಲ್ಲೆಯ,ಕಳಸ ತಾಲೂಕಿನ,ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ ಬಹಿರಂಗ ಸಭೆಗೆ ಆಗಮಿಸಿದ್ದರು.

ಈ ಸಂಧರ್ಭದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರ ಪರ ಮತಯಾಚನೆ ಮಾಡಿದರು.
ಇದರಿಂದ ಬಿಜೆಪಿಗರ ಮುಖದಲ್ಲಿ ಗೆಲುವಿನ ಭರವಸೆಯ ಹುಮ್ಮಸ್ಸು ಮೂಡಿದಂತಾಗಿದೆ.


ಸಭೆಯಲ್ಲಿ ಕೇಂದ್ರ ಸಚಿವೆ ಕು.ಶೋಭ ಕರಂದ್ಲಾಜೆ, ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮುರುಡಪ್ಪ,ಕಳಸ ಮಂಡಲ ಅಧ್ಯಕ್ಷ ನಾಗಭೂಷಣ್, ಮೂಡಿಗೆರೆ ಮಂಡಲ ಅಧ್ಯಕ್ಷ ಜೆ.ಎಸ್.ರಘು,ಬಿಜೆಪಿಯ ಹಿರಿಯ ನಾಯಕರುಗಳು, ಸಾವಿರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.