ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೂಡಿಗೆರೆ ಜೇಸಿ ಭವನದಲ್ಲಿ ಹಮ್ಮಿ ಕೊಳ್ಳಲಾಯಿತು.
1 min read
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
8 -3 -2022ರಂದು ಸಂಜೆ 4ರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೂಡಿಗೆರೆ ಜೇಸಿ ಭವನದಲ್ಲಿ ಹಮ್ಮಿ ಕೊಳ್ಳಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃತಿ ಪ್ರದೀಪ್ ವಹಿಸಿದರು ಈ ಕಾರ್ಯಕ್ರಮ ಉದ್ದೇಶಿಸಿ ಸ್ವಾಗತವನ್ನು ನಿಕಟಪೂರ್ವ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ಅವರು ನೆರವೇರಿಸಿಕೊಟ್ಟರು ಕಾರ್ಯಕ್ರಮದ ಉದ್ಘಾಟನೆಯನ್ನು ಬಿಸಿ ಗೀತಾರವರು ಮಾಡಿದರು ಉದ್ಘಾಟಕರಾ ನುಡಿ ಸಮಾಜದಲ್ಲಿ ಹೆಣ್ಣು ಮುಂದೆ ಬರಲು ಗಂಡಿನ ಸಹಕಾರ ಬೇಕು ಮತ್ತು ಧೈರ್ಯವಿರಬೇಕು ಧೈರ್ಯವಿದ್ದರೆ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ ಎಂಬ ಹಿತ ನುಡಿಯನ್ನು ನುಡಿದರು ಸಿವಿಲ್ ನ್ಯಾಯಾಧೀಶರಾದ ಕೃಷ್ಣರವರು ಸಮಾಜದಲ್ಲಿ ಹೆಣ್ಣು ಗಂಡು ಎಂಬ ಭೇದ ಬೇಡ ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸಿ ಭ್ರೂಣಹತ್ಯೆ ಮಾಡಬೇಡಿ ಎಂದು ಸಲಹೆ ನೀಡಿದರು ಅಧ್ಯಕ್ಷರಾದ ವಿದ್ಯಾ ರಾಜು ಅವರು ಪ್ರತಿವರ್ಷದಂತೆ ಈ ವರ್ಷವೂ ಮಹಿಳಾ ದಿನಾಚರಣೆಯನ್ನು ನಮ್ಮ ಜೇಸಿ ವತಿಯಿಂದ ಆಯೋಜನೆ ಮಾಡಲಾಗುತ್ತದೆ ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು ಮುಖ್ಯ ಭಾಷಣಕಾರದ ಜಲಜಾಕ್ಷಿ ಮೇಡಂ ರವರು ಹೆಣ್ಣು ಸಂಸಾರದ ಕಣ್ಣು ಹೆಣ್ಣು-ಗಂಡಿಗೆ ಎಲ್ಲ ಕ್ಷೇತ್ರದಲ್ಲೂ ಸರಿಸಮ ಹೆಣ್ಮಕ್ಕಳೇ ಸ್ಟ್ರಾಂಗು ಗುರು ನಿಮ್ಮ ನಿಮ್ಮ ಮಕ್ಕಳಿಗೆ ನೀವೇ ಸಂಸ್ಕಾರವನ್ನು ಕಲಿಸಿ ಎಂದೂ ಸಲಹೆ ನೀಡಿದರು ಈ ಕಾರ್ಯಕ್ರಮದ ನಿರ್ದೇಶಕರಾದ ರಮ್ಯ ಸಂದೇಶ್ ಅವರು ಐದು ದಿನಗಳ ಕಾಲ ನಡೆದ ಮಹಿಳಾ ದಿನದ ವರದಿ ಓದಿದರು ಅಧ್ಯಕ್ಷರಾದ ಕೃತಿ ಪ್ರದೀಪ್ ರವರು ಮಹಿಳೆಯರನ್ನು ಉದ್ದೇಶಿಸಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ತಾಯಿ ಮನೆಯಿಂದ ಗಂಡನ ಮನೆ ಸೇರುವ ಹೆಣ್ಣು ಎಲ್ಲರಿಗೂ ಆಸರೆಯಾಗಿ ಜವಾಬ್ದಾರಿಯ ಜೀವನ ನಡೆಸುತ್ತಾಳೆ ಹೆಣ್ಣನ್ನು ಗೌರವಿಸಿ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು ಸನ್ಮಾನಿತರು ಎಂಜಿಎಂ ಆಸ್ಪತ್ರೆಯ ನರ್ಸ್ ಮತ್ತು ಜೇಸಿ ಸಂಸ್ಥೆಯ ಸುಚಿತ್ರ ಪ್ರಸನ್ನ ಮತ್ತು ಕಾರ್ಯಕ್ರಮದ ಗಣ್ಯರಾದ ಜಲಜಾಕ್ಷಿ ಮೇಡಂ (ಉಪಾ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ) B.C ಗೀತಾ ಮೇಡಂ | ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ ಸ್ಥಾಪಕರು ಮತ್ತು ಅಧ್ಯಕ್ಷರು) ಸಿವಿಲ್ ನ್ಯಾಯಾಧೀಶರು ಕೃಷ್ಣ ಸರ್ ಅವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ವಂದನಾರ್ಪಣೆಯನ್ನು ಜೆಸಿ ಸಂಧ್ಯಾ ಸುದೀಪ್ ನೆರವೇರಿಸಿಕೊಟ್ಟರು ಜೆ ಸಿ ಪೂರ್ವ ಅಧ್ಯಕ್ಷರು ಜೇಸಿ ಮಹಿಳಾ ಪೂರ್ವಅಧ್ಯಕ್ಷರು ಜೇಸಿ ಸದಸ್ಯರು ಜೇಸಿ ಮಹಿಳಾಸದಸ್ಯರು ಕುನ್ನಹಳ್ಳಿ ಗ್ರಾಮಸ್ಥರು ನೆರೆದಿದ್ದರು