45 ವರ್ಷ ಪ್ರಾಯದ ಶಂಕರ್ ಎಂಬ ಅನಾಥ ವ್ಯಕ್ತಿಗೆ ಬೆಂಗಳೂರಿನ ಫೋಸ ಹ್ಯುಮ್ಯಾನಿಟರಿಯಾನ್ ಹೋಮ್ಸ್ ಬನ್ನೇರುಘಟ್ಟ ಬೆಂಗಳೂರು ಇಲ್ಲಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
1 min readದಿನಾಂಕ:12/03/2022 ನೇ ಶನಿವಾರದಂದು ಚಿಕ್ಕಮಗಳೂರು ಜಿಲ್ಲೆ , ಚಿಕ್ಕಮಳೂರು ತಾಲ್ಲೂಕು ವಸ್ತಾರೆ ಹೋಬಳಿಯ ಕೂದುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಗಸೆ ಗ್ರಾಮದಲ್ಲಿ 45 ವರ್ಷ ಪ್ರಾಯದ ಶಂಕರ್ ಎಂಬ ಅನಾಥ ವ್ಯಕ್ತಿಗೆ ಕುಟುಂಬಸ್ಥರು ಯಾರು ಇರುವುದಿಲ್ಲ, ಇವರಿಗೆ ಪಾರ್ಶ್ವವಾಯು ಕಾಯಿಲೆ ಆಗಿದ್ದು, ಆಲ್ದೂರು ಪೊಲೀಸ್,ಗ್ರಾಮಾಭಿವೃದ್ಧಿ ಅಧಿಕಾರಿ ಸಹಕಾರದೊಂದಿಗೆ,
ಗ್ರಾಮಸ್ತರಾದ ಲೋಕೇಶ್,ದಿನೇಶ್, ರುದ್ರೇಶ್, ಕುಮಾರ್ ಬಿ.ಇ,ಭಾನುಪ್ರಕಾಶ್ ಹಾಗೂ ತಡಗಸೆ ಗ್ರಾಮಸ್ಥರ ಸಹಕಾರದೊಂದಿಗೆ,
ರೋಗಿಯನ್ನು, ಕಾಪಿನಾಡು ಸಮಾಜ ಸೇವಕರಾದ ಅಸೈನಾರ್ ಬಿಳಗುಳ, ಎಂ ಕೆ ಅಬ್ದುಲ್ ರೆಹಮಾನ್ ,ಚಂದ್ರು ಬಿಳಗುಳ ಇವರುಗಳು, 45 ವರ್ಷ ಪ್ರಾಯದ ಶಂಕರ್ ಎಂಬ ಅನಾಥ ವ್ಯಕ್ತಿಗೆ ಬೆಂಗಳೂರಿನ ಫೋಸ ಹ್ಯುಮ್ಯಾನಿಟರಿಯಾನ್ ಹೋಮ್ಸ್ ಬನ್ನೇರುಘಟ್ಟ ಬೆಂಗಳೂರು ಇಲ್ಲಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ