लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಈ ಮೂರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ

1 min read
Featured Video Play Icon

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕ, ಚಿಕ್ಕಮಗಳೂರು
“””””””””””””””””””””””””””””””””””””””””””
ಇವರಿಗೆ,,,
ಮಾನ್ಯ,,, ಸಂಪಾದಕರು/ ವರದಿಗಾರರು,

     ಪ್ರಕಟಣೆ ಕೃಪೆಗಾಗಿ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ವಿಜ್ಞಾನವನ್ನು ಜನ ವಿಜ್ಞಾನವನ್ನಾಗಿ ಮಾಡಿ, ವಿದ್ಯಾರ್ಥಿ ಯುವಜನರಲ್ಲಿ ವೈಜ್ಞಾನಿಕತೆಯನ್ನು ಪಸರಿಸಿ ವೈಚಾರಿಕತೆಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿನ ಕಳೆದ ಒಂದು ದಶಕದಿಂದ ಇಡೀ ಕರ್ನಾಟಕ ರಾಜ್ಯದಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ,

ಈ ನಿಟ್ಟಿನಲ್ಲಿ ಕಳೆದ ವರ್ಷದಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಸರ್ ಸಿ, ವಿ, ರಾಮನ್ ಅವರ ಹೆಸರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಆನ್ಲೈನ್ ಮೂಲಕ ನಡೆಸಿದ್ದು, ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು , ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 1334 ವಿದ್ಯಾರ್ಥಿಗಳು ಭಾಗಿಯಾಗಿ, ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಹೆಸರು ತಂದುಕೊಡುವುದರ ಜೊತೆಗೆ, ಚಿಕ್ಕಮಗಳೂರು ಜಿಲ್ಲಾ ಮಟ್ಟದಲ್ಲಿ ಮೂರು ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಬಹುಮಾನಕ್ಕೆ ಭಾಜನರಾಗಿ, ಇಂದು ನಡೆಯುವ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಈ ಮೂರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ

ರಾಜ್ಯಮಟ್ಟದ ಸ್ಪರ್ಧೆಗೆ ಈ ಮೂರು ವಿದ್ಯಾರ್ಥಿಗಳು ಆಯ್ಕೆಯಾಗುವುದರ ಜೊತೆಗೆ*
ವಿಶೇಷವಾಗಿ, ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಣ್ಣ-ತಮ್ಮಂದಿರಿಬ್ಬರೂ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಕೆಲವು ಮಿಲಿ ಸೆಕೆಂಡ್ ಗಳ ಅಂತರದಲ್ಲಿ ಉತ್ತರಿಸಿ ಬಹುಮಾನಕ್ಕೆ ಪಾತ್ರರಾಗಿದ್ದಾರೆ

ಪ್ರಥಮ ಬಹುಮಾನ
ಮಂಜುನಾಥ್ ಹೆಚ್, ಸಿ
9ನೇ ತರಗತಿ,
ದುರ್ಗಾಪರಮೇಶ್ವರಿ ಪ್ರೌಢಶಾಲೆ, ಬಂಡಿಗಡಿ, ಕೊಪ್ಪ ತಾಲೂಕು,

ದ್ವಿತೀಯ ಬಹುಮಾನ
ಅಜಿತ್ ಹೆಚ್, ಕೆ
8ನೇ ತರಗತಿ
ದುರ್ಗಾಪರಮೇಶ್ವರಿ ಪ್ರೌಢಶಾಲೆ, ಬಂಡಿಗಡಿ,
ಕೊಪ್ಪ ತಾಲೂಕು,

ತೃತೀಯ ಬಹುಮಾನ
ಎಸ್,ಪ್ರಣಯ್ ಕುಮಾರ್ ಜೈನ್
10ನೇ ತರಗತಿ,
ವಾಗ್ದೇವಿ ವಿಲಾಸ ಪ್ರೌಢಶಾಲೆ , ಬೀರೂರು,
ಕಡೂರು ತಾಲೂಕು,

ಕೆಜೆವಿಎಸ್ ಜಿಲ್ಲಾಧ್ಯಕ್ಷರಾದ ಮುಗುಳಿಕಟ್ಟೆ ಲೋಕೇಶ್ ಅವರ ನೇತೃತ್ವದಲ್ಲಿ ರಸಪ್ರಶ್ನೆ ಸ್ಪರ್ಧೆಯ ಜಿಲ್ಲಾ ಸಂಯೋಜಕರಾಗಿ ರಾಷ್ಟ್ರೀಯ ವಿಜ್ಞಾನಿ ಶಿಕ್ಷಕಿ ಪ್ರಶಸ್ತಿಗೆ ಘೋಷಣೆಯಾಗಿರುವ
ಪೂಜಾದೇವಿ ಎಂ,ಡಿ, ಮತ್ತು ಜಿಲ್ಲೆಯ ಪ್ರತಿ ತಾಲೂಕಿಗೆ ಒಬ್ಬಬ್ಬರು ತಾಲೂಕು ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿದ್ದರು,

ಚಿಕ್ಕಮಗಳೂರು ತಾಲೂಕಿನಿಂದ ಸಿಎಂ ಜ್ಯೋತಿ, ಮೂಡಿಗೆರೆ ತಾಲೂಕಿನಿಂದ ಮಂಜಪ್ಪ ದೊಡ್ಮನಿ, ಕಳಸ ತಾಲೂಕಿನಿಂದ ಸಂದೇಶ್, ಕಡೂರು ತಾಲೂಕಿನಿಂದ ವೇದಾವತಿ, ಅಜ್ಜಂಪುರ ತಾಲೂಕಿನಿಂದ ದಯಾನಂದ್, ತರೀಕೆರೆ ತಾಲೂಕಿನಿಂದ ಕುಮಾರಸ್ವಾಮಿ, ನರಸಿಂಹರಾಜಪುರ ತಾಲೂಕಿನಿಂದ ಜ್ಯೋತಿ, ಕೊಪ್ಪ ತಾಲೂಕಿನಿಂದ ತಮನ್ನಾ ಹಾಗೂ ಶೃಂಗೇರಿ ತಾಲೂಕಿನಿಂದ ಸುನಿತಾ ಇವರು ಸಂಯೋಜಕರಾಗಿ,ಆಯಾಯ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಕಾರ ಪಡೆದು, ಜಿಲ್ಲಾ ಪದಾಧಿಕಾರಿಗಳ ಬೆಂಬಲದೊಂದಿಗೆ ಕರ್ತವ್ಯ ನಿರ್ವಹಿಸಿದ್ದರು,

ಬಹುಮಾನಿತ ವಿಜೇತ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ,
ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲಾ ವಿದ್ಯಾರ್ಥಿಗಳಿಗೆ,
ರಸಪ್ರಶ್ನೆ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಡಲು ದುಡಿದ ಪ್ರತಿಯೊಬ್ಬರಿಗೂ, ಸಹಕರಿಸಿದ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ, ಪ್ರೌಢಶಾಲಾ ಮತ್ತು ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೂ, ಎಲ್ಲ ಶಾಲೆಯ ಮುಕ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರಿಗೂ, ಪೋಷಕ ವರ್ಗಕ್ಕೂ , ಪ್ರಚಾರ ಕೊಟ್ಟ ಮಾಧ್ಯಮದ ಮಿತ್ರರಿಗೂ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕರ್ನಾಟಕ ಜ್ಞಾನ ವಿಜ್ಞಾನ ಜಿಲ್ಲಾ ಸಮಿತಿಯು ಈ ಮೂಲಕ ಅಭಿನಂದನೆ ಸಲ್ಲಿಸುತ್ತದೆ,🙏🌹

ತಮ್ಮ ವಿಶ್ವಾಸಿ,,,,
ಡಿ, ಎಂ, ಮಂಜುನಾಥಸ್ವಾಮಿ
ಪ್ರಧಾನ ಕಾರ್ಯದರ್ಶಿ,
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕ, ಚಿಕ್ಕಮಗಳೂರು

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

About Author

Leave a Reply

Your email address will not be published. Required fields are marked *