ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ
1 min read
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಈ, ಬಸವರಾಜ್ ಅವರ ಚಿಕ್ಕಮಗಳೂರು ಬೇಟಿ,
ಜ್ಞಾನ ಎಂದರೆ ಅ ದೊಂದು ಕ್ರಿಯಾಶೀಲತೆ,
ವಿಜ್ಞಾನ ಎಂದರೆ ಯುದ್ಧವಲ್ಲ- ಯುದ್ಧವೆಂಬ ಮಾರಣಹೋಮವಲ್ಲ,
ಅದೊಂದು ಶಾಂತಿ ಮತ್ತು ಸದೃಢತೆ ಹಾಗೂ ಒಂದು ಹೊಸಹುಟ್ಟು ಸಹಬಾಳ್ವೆ ಇದ್ದಂತೆ,
ಈ, ಬಸವರಾಜ್
ಸರ್ ಸಿವಿ ರಾಮನ್ ಅಂತ ವಿಜ್ಞಾನಿ ಯಾರಿಗೆ ಗೊತ್ತಿಲ್ಲ, ಮಹಾ ವಿಜ್ಞಾನಿಯ ಹೆಸರಿನಲ್ಲಿ ಫೆಬ್ರವರಿ 28ರಂದು ಇಡೀ ದೇಶದಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸುತ್ತಾ ಬರುತ್ತಿದ್ದೇವೆ,
ಈ ಸಂಬಂಧ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಸರ್ ಸಿ ವಿ ರಾಮನ್ ವರ ಹೆಸರಿನಲ್ಲಿ ಕಳೆದ ವರ್ಷದಿಂದ, ವಿಜ್ಞಾನವನ್ನು ಸರಳ ವಿಜ್ಞಾನವನ್ನಾಗಿ ಬೋಧಿಸುತ್ತಾ, ಜನವಿಜ್ಞಾನ ಮಾಡುವ ನಿಟ್ಟಿನಲ್ಲಿ ಭಾವಿ ಭಾರತದ ಭವಿಷ್ಯವನ್ನು ಕಟ್ಟುವ ನಮ್ಮ ಮುಂದಿನ ಭಾರತದ ವಾರಸುದಾರರಾದ ಯುವ ಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಇಡೀ ಕರ್ನಾಟಕ ರಾಜ್ಯದಾದ್ಯಂತ ಆನ್ಲೈನ್ ಮೂಲಕ ಏಕಕಾಲಕ್ಕೆ ಜನವರಿ20ರಂದು ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಮಾಡಿ, ಬಹುಮಾನಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಮತ್ತು ಭಾಗಿಯಾದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸಾಪತ್ರ ದೊಂದಿಗೆ ಪ್ರೋತ್ಸಾಹ ನೀಡಿ ಉತ್ತೇಜಿಸುವ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಹೆಸರಿನಲ್ಲಿಒಂದು ಆಂದೋಲನ ವಾಗುತ್ತಿದೆ,
ಈ ನಿಟ್ಟಿನಲ್ಲಿ ಅನ್ಯ ಕಾರ್ಯ ನಿಮಿತ್ತ ಪ್ರವಾಸ ಕೈಗೊಂಡಿರುವ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮತ್ತು ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಮುಖ್ಯ ಸಾರಥಿಯಾದ ಈ, ಬಸವರಾಜ್ ಅವರು ನಿನ್ನೆ ದಿನ ಮಲೆನಾಡಿನ ತವರೂರು ಚಿಕ್ಕಮಗಳೂರು ನಗರಕ್ಕೆ ಆಗಮಿಸಿ ಜಿಲ್ಲೆಯ ವಿಜ್ಞಾನ ಸಂಗಾತಿಗಳೊಂದಿಗೆ ಚರ್ಚೆ ಸಂವಾದ ವಿಚಾರ ವಿಮರ್ಶೆ ಮಾಡಿ, ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಯಶಸ್ವಿಯಾಗುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಒಟ್ಟಿಗೆ ವಿಜ್ಞಾನ ಆಂದೋಲನವನ್ನು ಕಟ್ಟುವ ನಿಟ್ಟಿನಲ್ಲಿ ಚಿಂತನ-ಮಂಥನದ ಸಭೆ ನಡೆಸಿದರು,
ಸಭೆಯ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕೆಜೆವಿಎಸ್ ಅಧ್ಯಕ್ಷರಾದ ಮುಗಳಿಕಟ್ಟೆ ಲೋಕೇಶ್ ವಹಿಸಿಕೊಂಡು ಉತ್ತಮವಾದದ್ದು ಕಂಡಾಗ ಮೆಚ್ಚಿಕೊಳ್ಳಬೇಕು, ಮಕ್ಕಳನ್ನು ದೇವರೆಂದು ನಂಬಿದ ಸಂಸ್ಕೃತಿ-ಸಂಸ್ಕಾರ ನಮ್ಮದು, ಹಂಚಿ ತಿನ್ನುವ ಕೂಡಿಬಾಳುವ ಗುಣವನ್ನು ಬಿತ್ತ ಬೇಕಾಗಿದೆ ಎಂದು ಹಿಂದಿನ ಮತ್ತು ಮುಂದಿನ ಕಾರ್ಯಚಟುವಟಿಕೆಯ ಬಗ್ಗೆ ವಿವರಿಸಿದರು,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಭೆಯ ಉದ್ದೇಶ ಹಾಗೂ ಶ್ರೀ ಬಸವರಾಜ್ ಅವರು ಚಿಕ್ಕಮಗಳೂರಿಗೆ ಭೇಟಿ ನೀಡಿರುವ ಉದ್ದೇಶವನ್ನು ಪ್ರಾಸ್ತಾವಿಕ ಮಾತುಗಳೊಂದಿಗೆ ವಿವರಿಸುತ್ತಾ,,, ಭಾರತದಲ್ಲಿ, ಇಂದಿನ ವರ್ತಮಾನದ ದಿನಗಳಲ್ಲಿ ಒಂದು ರೀತಿ ಕರಿನೆರಳು ದಟ್ಟವಾಗಿ ಅದು ಭೋರ್ಗರೆಯುತ್ತ ಮುಖ್ಯವಾಗಿ ಯುವಜನಾಂಗದ ಮೇಲೆ – ವಿದ್ಯಾರ್ಥಿ ಸಮೂಹದ ಮೇಲೆ ಕೆಂಡದ ಮಳೆಯಂತೆ ಬೀಳುತ್ತಿದೆ, ಈ ಕೆಂಡದ ಮಳೆಗೆ ವಿದ್ಯಾರ್ಥಿ ಯುವಜನಾಂಗ ಬಲಿಯಾಗುತ್ತಿದೆ, ಈ ಬಲಿಯ ಬೆಂಕಿಗೆ ಬಲಿಯಾಗದಂತೆ ಹೊರತರುವ ಕೆಲಸ ವಿಜ್ಞಾನ ಸಂಘಟನೆಯಂತ ಸಂಘಟನೆಯ ಮೇಲೆಯೂ ಜವಾಬ್ದಾರಿ ಕೂಡ ಎಂದರು,
ಪ್ರಾರಂಭದಲ್ಲಿ ಚಿಕ್ಕಮಗಳೂರು ತಾಲ್ಲೂಕು ಕೆಜೆವಿಎಸ್ ಅಧ್ಯಕ್ಷರಾದ ಟಿ ಎನ್, ಕೃಷ್ಣಮೂರ್ತಿಯವರು ತಮ್ಮ ತಾಲೂಕಿಗೆ ಮತ್ತು ಸಭೆಗೆ ಬಂದಿರುವವರನ್ನು ಪ್ರೀತಿಯಿಂದ ಬರಮಾಡಿಕೊಂಡು ಸ್ವಾಗತಿಸಿದರು,
ಸಭೆಯಲ್ಲಿ ಜಿಲ್ಲಾ ಸಂಚಾಲಕಿ ಎನ್, ಅನಿತಾ, ಸಾಹಿತಿ, ಶಾಸನಗಲ್ಲುಗಳ ಸಂಶೋಧಕ ಮೇಕನಗದ್ದೆ ಲಕ್ಷ್ಮಣಗೌಡ, ಚಿಕ್ಕಮಗಳೂರು ತಾಲೂಕು ಕಾರ್ಯದರ್ಶಿ ಜ್ಯೋತಿ, ಆಕಾಶ ವೀಕ್ಷಣೆ ಸಂಪನ್ಮೂಲ ವ್ಯಕ್ತಿ ಮಂಜುಳಾ ಹಲ್ಮಿಡಿ, ಕೆಜಿವಿಎಸ್ ತಾಲೂಕ್ ಉಪಾಧ್ಯಕ್ಷರಾದ ಹಿರೇಕೊಳಲೇ ಮೋಹನ್ ಮತ್ತು ಇತರರು ಚರ್ಚೆ ಮತ್ತು ಸಂವಾದದಲ್ಲಿ ಭಾಗಿಯಾದರು,
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಪದಾಧಿಕಾರಿಗಳಾದ ಆರದವಳ್ಳಿ ಮಹೇಶ್, ಬಿ ಜಿ ಕೃಷ್ಣಮೂರ್ತಿ ರಾಜೆ ಅರಸ್, ಮತ್ತು ಜಿಲ್ಲಾ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ನೀಲಕಂಠಪ್ಪ, ಮುಂತಾದವರು ಉಪಸ್ಥಿತರಿದ್ದರು,
ಜಿಲ್ಲಾ ಕೆಜೆವಿಎಸ್ ಉಪಾಧ್ಯಕ್ಷರಾದ ಮೋಹನ್ ಅವರ ವಂದನಾರ್ಪಣೆಯೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಕೆಜೆವಿಎಸ್ ಪರವಾಗಿ ಈ, ಬಸವರಾಜ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು,
“””””””””””'”””””””””””””
ಬರಹ ಕೃಪೆ.
D, M, Manjunathaswamy
KJVS Newsline,,,,,,,,,
Chikkamagaluru.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.