ಕನ್ನಡ ಸಾಹಿತ್ಯ ಪರಿಷತ್ತಿನ ಸೇವಾ ದೀಕ್ಷಾ ಕಾರ್ಯಕ್ರಮ
1 min read
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸೇವಾ ದೀಕ್ಷಾ ಕಾರ್ಯಕ್ರಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ ಅ.ರಾ ರಾಧಾಕೃಷ್ಣ ಅವರ ಅಧ್ಯಕ್ಷತೆಯಲ್ಲಿ, ಡಾ.!! ಭೀಮೇಶ್ವರ ಜೋಷಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು ಶ್ರೀ ಸೂರಿ ಶ್ರೀನಿವಾಸ ಜಿಲ್ಲಾ ಸಾಹಿತ್ಯಪರಿಷತ್ತಿನ ಅಧ್ಯಕ್ಷರು ಸೇವಾದೀಕ್ಷೆ ನಡೆಸಿಕೊಟ್ಟರು. ತಾಲ್ಲೂಕು ಅಧ್ಯಕ್ಷರಾದ ಶ್ರೀ ಮಗ್ಗಲಮಕ್ಕಿ ಗಣೇಶ್ ರವರು ಕಳಸ ತಾಲೂಕು ಅಧ್ಯಕ್ಷರಾದ ಶ್ರೀ ಅ.ರಾ.ಸತೀಶ್ಚಂದ್ರ ಇವರಿಗೆ ಪರಿಷತ್ತಿನ ಧ್ವಜವನ್ನು ನೀಡುವ ಮೂಲಕ ಕಾರ್ಯಕ್ರಮ ನೆರವೇರಿತು. ಜಿ.ಕೆ ಮಂಜಪ್ಪಯ್ಯ, ಎಂ. ಶೇಷಗಿರಿ, ಎನ್ ಎಂ ಹರ್ಷ, ಶ್ರೀಮತಿ ಸುಜಯ ಸದಾನಂದ ಪಂಚಾಯತ್ ಅಧ್ಯಕ್ಷರು, ಗೌರವ ಜಿಲ್ಲಾ ಕಾರ್ಯದರ್ಶಿ ಏಸ್ ಎಸ್ ವೆಂಕಟೇಶ, ನಿಕಟ ಪೂರ್ವ ಹೋಬಳಿ ಅಧ್ಯಕ್ಷರಾದ ನರೇಂದ್ರ ಕಲ್ಲಾನೆ, ಕೆ.ಆರ್ ಭಾಸ್ಕರ್, ಜಿಲ್ಲಾ ಸಂಚಾಲಕಿ ಮುಮ್ತಾಜ್, ತಾಲ್ಲೂಕು ಕಾರ್ಯದರ್ಶಿ ಗಳಾದ ಸುದೀಶ್ ಸುವರ್ಣ,ಶಿವರಾಮ ಭಟ್, ಕೋಶಾ ಅಧ್ಯಕ್ಷರಾದ ಕಿರಣ್ ಶೆಟ್ಟಿ, ಉಪತಹಶೀಲದಾರು ಹೇಮಂತ ಕುಮಾರ್, ಕಾಲೇಜಿನ ಪ್ರಾಂಶುಪಾಲ ರಾದ ವಿನಯ್ ಕುಮಾರ್ ಉಪಸ್ಥಿತಿ ಯಲ್ಲಿ ಯಶಸ್ವಿಯಾಗಿ ನಡೆಯಿತು.