ಅಧಿಸೂಚನೆ ಹೊರಡದಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಬೇಕು….
1 min read
ಅಧಿಸೂಚನೆ ಹೊರಡದಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಬೇಕು

ಶೃಂಗೇರಿ: ಮಲೆನಾಡಿನಲ್ಲಿ ರೈತರ ಜಲ್ವಂತ ಸಮಸ್ಯೆಗಳಿಗೆ
ಪರಿಹಾರ ಇನ್ನೂ ದೊರಕುತ್ತಿಲ್ಲ. ಕಸ್ತೂರಿ ರಂಗನ್ ವರದಿಗೆ ರೂಪುರೇಷೆಗಳಿಲ್ಲ.ವರದಿ ಜಾರಿಯಾಗುವ ಮುನ್ನ ಕ್ಷೇತ್ರದ ರೈತರು ಸಂಘಟಿತರಾಗಿ ಅಧಿಸೂಚನೆ ಹೊರಡದಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಬೇಕು ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಶ್ರೀ ವಿಶ್ವನಾಥ್ ಗದ್ದೆಮನೆ ತಿಳಿಸಿದರು. ಅವರು ಶಾರದಾನಗರದಲ್ಲಿ ಕ್ಷೇತ್ರ ರೈತ ಒಕ್ಕೂಟದ
ನೂತನ ಶಾಖಾ ಕಚೇರಿಯನ್ನು ಭಾನುವಾರ ಉದ್ಘಾಟಿಸಿ
ಮಾತನಾಡಿ ಮಲೆನಾಡಿನಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ
ಉದ್ದೇಶದಿಂದ ರಿಂದ ನೂತನ ಕಚೇರಿಯನ್ನು ಸ್ಥಾಪಿಸಲಾಗಿದೆ.
ಈಗಾಗಲೇ ಮಳೆಯ ಅಬ್ಬರಕ್ಕೆ ಬೆಳೆಗಳು ನಾಶವಾಗುತ್ತಿದೆ.
ಅವೈಜ್ಞಾನಿಕ ಮಾಹಿತಿಯನ್ನು ಒಳಗೊಂಡ ಕಸ್ತೂರಿ ರಂಗನ್
ವರದಿಯನ್ನು ನಾವು ತಿರಸ್ಕರಿಬೇಕು. ಇಲ್ಲವಾದ್ದರೆ ಮುಂದೆ
ಕಷ್ಟ ಎದುರಾಗಬಹುದು.ಕ್ಷೇತ್ರದ ಮೂಲಭೂತ ಸಮಸ್ಯೆಗಳು
ಹಾಗೆಯೇ ಉಳಿದಿದೆ.
ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಕ್ಷೇತ್ರ ರೈತ ಒಕ್ಕೂಟ ಕ್ಷೇತ್ರದ ಎನ್.ಆರ್.ಪುರ, ಕೊಪ್ಪ ಹಾಗೂ ಶೃಂಗೇರಿಯಲ್ಲಿ ಕಚೇರಿಯನ್ನು ತೆರೆದಿದ್ದು ರೈತರು ಇದರ ಸದುಪಯೋಗ ಪಡೆಯಬೇಕು.ರೈತರಿಗೆ ಇಲಾಖೆಗಳಿಂದ ಸಮಸ್ಯೆ ಎದುರಾದಾಗ ನಾವು ಅವರ ಬೆನ್ನೆಲುಬು ಆಗಿ ನಿಲ್ಲುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ರಾಮಸ್ವಾಮಿ,ಉಪಾಧ್ಯಕ್ಷ ໖. ಎಸ್.ನಯನ,ತಾ।ರೈತ ಒಕ್ಕೂಟದ ಅಧ್ಯಕ್ಷ ಡಿ.ಸಿ.ಶಂಕರಪ್ಪ. ಕಾರ್ಯದರ್ಶಿ ನರೇಂದ್ರ ಹೆಗಡೆ ಉಪಸ್ಥಿತರಿದ್ದರು.

