लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಪಠ್ಯದೊಂದಿಗೆ ಸಹಪಠ್ಯವನ್ನು ಶಾಲೆಯಲ್ಲಿ ಕಲಿಸಿದರೆ ಜೀವನದಲ್ಲಿ ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಮುಂದುವರೆಯುತ್ತಾರೆ-ಶ್ರೀ ಮಗ್ಗಲಮಕ್ಕಿ ಗಣೇಶ್*

1 min read
Featured Video Play Icon

*ಪಠ್ಯದೊಂದಿಗೆ ಸಹಪಠ್ಯವನ್ನು ಶಾಲೆಯಲ್ಲಿ ಕಲಿಸಿದರೆ ಜೀವನದಲ್ಲಿ ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಮುಂದುವರೆಯುತ್ತಾರೆ-ಶ್ರೀ ಮಗ್ಗಲಮಕ್ಕಿ ಗಣೇಶ್*

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆ ವತಿಯಿಂದ ತಾಲೂಕಿನ ಮುಖ್ಯೋಪಾಧ್ಯಾಯರು ಮತ್ತು ದಳ ನಾಯಕರ ಒಂದು ದಿನದ ಬುನಾದಿ ತರಬೇತಿಯನ್ನು ಬೆಥನಿ ಶಾಲೆ ಮೂಡಿಗೆರೆ ಇಲ್ಲಿ ಉದ್ಘಾಟಿಸಿ ಪಠ್ಯದೊಂದಿಗೆ ಸಹಪಠ್ಯವನ್ನು ಶಾಲೆಯಲ್ಲಿ ಕಲಿಸಿದರೆ ಜೀವನದಲ್ಲಿ ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಮುಂದುವರೆಯುತ್ತಾರೆ ಎಂದು ಅಧ್ಯಕ್ಷರಾದ ಶ್ರೀ ಮಗ್ಗಲಮಕ್ಕಿ ಗಣೇಶ್
ಅಭಿಪ್ರಾಯಪಟ್ಟರು.ಛೇರ್ ಪರ್ಸನ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹೇಮಂತರಾಜ್ ರವರು ಮಾತನಾಡಿ ಶಾಲಾ ಜೀವನದಲ್ಲಿ ಮಕ್ಕಳನ್ನು ವಿವಿಧ ಸೃಜನಶೀಲ ಕಾರ್ಯಕ್ರಮಗಳಲ್ಲಿ ತೊಡಗಿಸಿ ಸರ್ವಾಂಗೀಣ ಬೆಳವಣಿಗೆಗೆ ಸಹಕರಿಸಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರೂ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕರೂ ಆದ ಶ್ರೀ ಮಂಜಪ್ಪನವರು ಅಂತರಾಷ್ಟ್ರೀಯ ಸಂಸ್ಥೆಯೊಂದರ ಭಾಗವಾಗಿ ಮಕ್ಕಳನ್ನು ತೊಡಗಿಸಿ ಸಮಾಜಸೇವೆ ಮತ್ತು ವಿಶ್ವಭ್ರಾತೃತ್ವದೆಡೆಗೆ ಮುನ್ನೆಡೆಸೋಣವೆಂದು ತಮ್ಮ ನುಡಿಗಳಲ್ಲಿ ಆಶಿಸಿದರು. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರೂ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಜ್ಞಾನ ಮೂರ್ತಿಯವರು ಸಂಸ್ಥೆಯು ಬಹು ವಿಸ್ತಾರವಾದ ಇತಿಹಾಸ ಹೊಂದಿದ್ದು ಮಕ್ಕಳ ಮನೋವಿಕಾಸಕ್ಕೆ ಪೂರಕ ಚಟುವಟಿಕೆ ರೂಪಿಸಿ ಮನಸ್ಸಿನಲ್ಲಿ ಅಜರಾಮರವಾಗಬೇಕೆಂದು ಪ್ರತಿಪಾದಿಸಿದರು.ಜಿಲ್ಲಾ ಸಂಸ್ಥೆಯ ಜಿಲ್ಲಾ ಸಂಘಟಕರೂ,ತರಬೇತಿದಾರರೂ ಆದ ಶ್ರೀ ಕಿರಣ್ ರವರು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಪ್ರಮಾಣಪತ್ರ ವಿತರಿಸಿ,ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್,ಶ್ರೀಮತಿ ವೇಣಿ ಇದ್ದರು.ಅಲ್ಲದೆ ಉಪಾಧ್ಯಕ್ಷರಾದ ಶ್ರೀ ಹಮೀದ್,ಬೆಥನಿ ಶಾಲಾ ಮುಖ್ಯ ಶಿಕ್ಷಕರಾದ ಸಿಸ್ಟರ್ ಜೆನ್ನಿಫರ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ,ಸಂಸ್ಥೆಯ ನಿಕಟ ಪೂರ್ವ ಕಾರ್ಯದರ್ಶಿಗಳಾದ ಶ್ರೀ ವೆಂಕಟೇಶ್.ಕೆ.ಹಾಗೂ ಶಾಂತಕುಮಾರ್ ಭಾಗವಹಿಸಿದ್ದರು. ತಾಲೂಕಿನ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು,ಕಬ್ಸ್,ಬುಲ್ ಬುಲ್,ಸ್ಕೌಟ್,ಗೈಡ್ ದಳನಾಯಕರು,ವಿದ್ಯಾರ್ಥಿಗಳು ಆಗಮಿಸಿದ್ದರು.ಖಜಾಂಚಿ ಶ್ರೀ ಚೇತನ್ ನಿರೂಪಿಸಿ,ಕಾರ್ಯದರ್ಶಿ ಶ್ರೀ ಪೂರ್ಣೇಶ್ ಸ್ವಾಗತಿಸಿ,ಶ್ರೀ ವೆಂಕಟೇಶ್ ಕೆ ವಂದಿಸಿದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪುಟ್ಟರಾಜುರವರ ಉಪಸ್ಥಿತಿ ವಿಶೇಷ ಮೆರುಗನ್ನು ನೀಡಿತು. ತರಬೇತಿಯಲ್ಲಿ ಶಾಲೆಯಲ್ಲಿ ದಳ ರಚನೆಯೊಂದಿಗೆ ಕೈಗೊಳ್ಳಬೇಕಾದ ಸಭೆಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಯಿತು.
ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Good facilities and Best treatment Center Bangalore |

Fresher Jobs | jobs hiring | job openings Udyog mela | jobs employment | udyog kendra – Nisarga Care

About Author