लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಸ್ವಚ್ಚತ ಕಾರ್ಯಕ್ರಮ*

1 min read
Featured Video Play Icon

*ಸ್ವಚ್ಚತ ಕಾರ್ಯಕ್ರಮ*

ಪೂಜ್ಯರ ಆಸೆಯಂತೆ ಮಕರ ಸಂಕ್ರಮಣ ಉತ್ತರಾಯಣ ಪುಣ್ಯಕಾಲದಲ್ಲಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮವನ್ನು ಕುರುಕುಮ್ಮಕ್ಕಿ ಚೌಡೇಶ್ವರಿ ದೇವಸ್ಥಾನದ ಆವರಣ ಹಾಗೂ ಒಳಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು

ಈ ಸಂದರ್ಭದಲ್ಲಿ ಮೂಡಿಗೆರೆಯ ತಾಲೂಕಿನ ಯೋಜನೆಯ ಯೋಜನಾಧಿಕಾರಿ ಆದ ಶಿವಾನಂದ್ ಸರ್ ಮಾತನಾಡಿ ದೇವಸ್ಥಾನದ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.ಜನರಿಗೆ ಶಾಂತಿ,ಸುಖ,ನೆಮ್ಮದಿಯನ್ನು ನೀಡುವ ಕೇಂದ್ರಬಿಂದುವೆ ಈ ಧಾರ್ಮಿಕ ಸ್ಥಳವಾದ ದೇವಸ್ಥಾನಗಳು.ಕಷ್ಟ,ನೋವನ್ನ ದೂರ ಮಾಡಿ ನೆಮ್ಮದಿ ನೀಡುವಂತ ಧಾರ್ಮಿಕ ಕೇಂದ್ರಗಳು ಮತ್ತಷ್ಟು ಪ್ರಗತಿಯಾಗಬೇಕಿದೆ;ಇಂತಹ ಧಾರ್ಮಿಕ ಸ್ಥಳವನ್ನ ಗುರುತಿಸಿ ಸ್ವಚ್ಛ ಮಾಡಿ ಮತ್ತಷ್ಟು ಬೆಳೆಸಬೇಕಿದೆ.ಎಲ್ಲರನ್ನು ಒಂದಾಗಿ,ಒಟ್ಟಾಗಿ ಸೇರುವಂತೆ ಮಾಡುವುದೇ ಈ ದೇವಸ್ಥಾನಗಳು,ಇಂತಹ ಸ್ಥಳವನ್ನ ಮತ್ತಷ್ಟು ಗುರುತಿಸಿ ,ಶುಚಿಗೊಳಿಸಿ ಮತ್ತಷ್ಟು ಪ್ರಗತಿಹೊಂದುವಂತೆ ಮಾಡೋಣ ಎಂದು ಹೇಳಿದರು. ಮೂಡಿಗೆರೆ ಕಸಬಾ ವಲಯದ ಸಂಯೋಜಕರಾದ ಪ್ರವೀಣ್ ಪೂಜಾರಿ ಮಾತನಾಡಿ ಪೂಜ್ಯರ ಆಸೆಯಂತೆ ಶೌರ್ಯ ತಂಡವು ತುರ್ತು ಸಂದರ್ಭದಲ್ಲಿ ಹಾಗೂ ತಿಂಗಳಿಗೊಮ್ಮೆ ಶ್ರಮದಾನ ಮಾಡುವ ಮುಖಾಂತರ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ ಎಂದು ತಿಳಿಸಿದರು ಈ ಒಂದು ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲೆಕ್ಕ ಅಧಿಕಾರಿಯಾದ ಭಾರತಿ ಮೇಡಂ ಮೇಲ್ವಿಚಾರಕರಾದ ವಿಜ್ಞೇಶ್ ಸಂಯೋಜಕರಾದ ಅರುಣ್ ಪಿಂಟೋ, ಸುರೇಶ್, ಶಶಿ, ರಘು ಗೌಡ, ಮಂಜುನಾಥ್, ಅಶ್ವಿನ್, ಅಶ್ವಥ್ ಕಿಶೋರ್ ಸಚಿನ್ ಆಗುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಒಂದು ಪುಣ್ಯದ ಕೆಲಸದಲ್ಲಿ ಭಾಗಿಯಾಗಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Good facilities and Best treatment Center Bangalore |

Fresher Jobs | jobs hiring | job openings Udyog mela | jobs employment | udyog kendra – Nisarga Care

 

About Author